
ಶಿಕಾರಿಪುರ : ಹಲವು ವಿಶಿಷ್ಟತೆ ಹೊಂದಿದ ಶಿಕಾರಿಪುರ ಆದರೆ ಕೆಲವು ಸಮಸ್ಯೆ ಕಂಡರೂ ಕಾಣದಂತೆ ಹಣದ ಆಸೆಗೆ ವಿಚಿತ್ರ ವಿಸ್ಮಯಗಳು ನಡೆಯುವುದು ನಗರದಲ್ಲಿ ಕಂಡು ಬಂದಿದೆ ಎಂದು ಸರ್ವಜನಿಕ ವಲಯದಲ್ಲಿ ಭೌತಿಕ ವಿಷಯಗಳು ಕಂಡರೂ ಕಾಣದಂತೆ ನಗರದ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆಯ ಯುಜಿಡಿ ಮ್ಯಾನ್ ಹೋಲ್ ಕೆಲವು ಅವೈಜ್ಞಾನಿಕವಾಗಿ ಎತ್ತರದಲ್ಲಿರುವ ಮತ್ತು ಕುಸಿದಿರುವ ಯುಜಿಡಿ ಮ್ಯಾನ್ ಹೋಲ್ ಅನ್ನು ಸರಿಪಡಿಸುವ ನೆಪದಲ್ಲಿ ಸರಿ ಇರುವ ಮ್ಯಾನ್ ಹೋಲ್ ವ್ಯವಸ್ಥೆಯನ್ನು ಹಣ ಹೊಡೆಯುವ ಉನ್ನಾರ ಎಂದು ಸರ್ವಜನಿಕ ರ್ಚೆಗೆ ಗ್ರಾಸವಾಗಿದ್ದು ಶಿಕಾರಿಪುರದ ಕೆಲವು ಭಾಗಗಳಲ್ಲಿ ಕಂಡುಬಂದಿದೆ ಎಂದು ರ್ನಾಟಕ ರಾಜ್ಯ ರೈತ ಸಂಘದ ತಾಲೂಕ ಅಧ್ಯಕ್ಷ ಮಾಜಿ ಸೈನಿಕ ಪಿ. ವೈ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಚಾರವಾಗಿ ಜಯ ರ್ನಾಟಕ ಜನಪರ ವೇದಿಕೆ ತಾಲೂಕು ಅಧ್ಯಕ್ಷ ಶಿವಯ್ಯ ಎನ್ ಶಾಸ್ತ್ರಿ ಪತ್ರಿಕೆಗೆ ಹೇಳಿಕೆ ನೀಡುವ ಮುಖಾಂತರ ನಗರದ ಕೆಲವು ಭಾಗಗಳಲ್ಲಿ ಸರಿ ಇರುವ ಮ್ಯಾನ್ ಹೋಲ್ ಗಳನ್ನು ಸರಿಪಡಿಸುವ ನೆಪದಲ್ಲಿ ಹಣ ಹೊಡೆಯುವ ಹೊನ್ನಾರ ಕಂಡರೂ ಕಾಣದಂತೆ ಇಲಾಖೆ ಅಧಿಕಾರಿಗಳ ಜಾಣ ಕುರುಡು ಮೌನ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಈ ವಿಚಾರವನ್ನು ಇಲ್ಲಿಗೆ ಬಿಡುವುದಿಲ್ಲ ಮುಂದಿನ ದಿನಗಳಲ್ಲಿ ಲೋಕಾಯುಕ್ತರು ಮತ್ತು ಪ್ರೆಸ್ ಮೀಟ್ ಮಾಡುವ ಮುಖಾಂತರ ಉನ್ನತ ಅಧಿಕಾರಿಗಳಿಗೆ ದೂರು ನೀಡಲಿದ್ದೇವೆ ಎಂದರು.








