ಕೊರಟಗೆರೆ
ಶ್ರಾವಣ ಮಾಸದ ಪ್ರಯುಕ್ತ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿಯವರ ದಿವ್ಯಸಾನ್ನಿಧ್ಯದಲ್ಲಿ ಕೊರಟಗೆರೆ ಪಟ್ಟಣದ ಶ್ರೀಬಸವೇಶ್ವರ ದೇವಾಲಯದಲ್ಲಿ ಪೂಜಾಕಾರ್ಯಕ್ರಮಗಳು ನಡೆದು ನೂರಾರು ಭಕ್ತರು ಭಾಗವಹಿಸಿ ತಮ್ಮ ಇಷ್ಟಾರ್ಥ ಸಿದ್ಧಿಸಲಿ ಎಂದು ದೇವರಲ್ಲಿ ಬೇಡಿಕೊಂಡು, ಶ್ರೀಗಳು ನೀಡಿದ ಶ್ರಾವಣ ಮಾಸದ ಪೂಜಾಫಲಗಳ ಪ್ರವಚನ ಆಲಿಸಿದರು. ಜಗಜ್ಯೋತಿ ಬಸವೇಶ್ವರ ಸಂಘದ ಅಧ್ಯಕ್ಷ ಕೆ.ಎಂ ರೇಣುಕಾಆರಾಧ್ಯ, ಕಾರ್ಯದರ್ಶಿ ಜಗದೀಶ್, ಕೋಶಾಧ್ಯಕ್ಷ ಪ್ರದೀಪ್ಕುಮಾರ್, ಸಂಘದ ಪದಾಧಿಕಾರಿಗಳು ಸೇರಿದಂತೆ ನೂರಾರು ಭಕ್ತಾದಿಗಳು ಭಾಗವಹಿಸಿದ್ದರು.