ಶಿರಾ:
ಶಿರಾ ತಹಶೀಲ್ದಾರ್ ಕಛೇರಿಗೆ ಗುರುವಾರ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ರಾಕೇಶ್ಕುಮಾರ್ ಅವರು ಕಂದಾಯ ಇಲಾಖೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೊದಲಿಗೆ ಕಂದಾಯ ಇಲಾಖೆಯ ದಾಖಲೆಗಳ ವಿಭಾಗಕ್ಕೆ ಭೇಟಿ ನೀಡಿ ಕಡತಗಳ ಸಂಗ್ರಹಣೆಯ ಬಗ್ಗೆ ಸಿಬ್ಬಂಧಿಗೆ ಸಲಹೆ ನೀಡಿದರು.
ಭೂಮಾಪನ ಇಲಾಖೆ, ಖಜಾನೆ ಇಲಾಖೆಗಳಿಗೂ ಭೇಟಿ ನೀಡಿದ ನಂತರ ಇಲಾಖೆಯ ಕರ್ತವ್ಯ ಹಾಗೂ ಸಾರ್ವಜನಿಕರೊಂದಿಗೆ ಸಿಬ್ಬಂಧಿಯು ನಡೆದುಕೊಳ್ಳುವ ರೀತಿಯ ಬಗ್ಗೆ ತಿಳುವಳಿಕೆ ಮೂಡಿಸಿದರು.
ತಹಶೀಲ್ದಾರ್ ರಂಗೇಗೌಡ, ಸಮಾಜ ಕಲ್ಯಾಣ ಇಲಾಖಾಧಿಕಾರಿ ಮಂಜುನಾಥ್, ಉಪ ತಹಶೀಲ್ದಾರ್ ಕಮಲಮ್ಮ, ಕಂದಾಯ ತನಿಖಾಧಿಕಾರಿ ಮಂಜುನಾಥ್, ಸುದರ್ಸನ್ ಮುಂತಾದವರು ಹಾಜರಿದ್ದರು.