ತುಮಕೂರು
ಏಕತಾ ಪರಿಷತ್, ಮಹಿಳಾ ಮಂಚ್ ಮಾಕಾಂ ಸಂಘಟನೆ ಹಾಗೂ ಇತರ ಸಮಾನ ಮನಸ್ಕ ಸಂಘಟನೆಗಳೊಂದಿಗೆ ಸೇರಿ ಭೂಮಿ ಪ್ರಶ್ನೆಯನ್ನು ದೇಶದ ಅಭಿವೃದ್ಧಿಯ ಪ್ರಧಾನ ಪ್ರಶ್ನೆಯನ್ನಾಗಿಸಲು ರಾಷ್ಟ್ರವ್ಯಾಪ್ತಿ ಜನಾಂದೋಲನ ಯಾತ್ರೆ ಹಮ್ಮಿಕೊಂಡಿದ್ದು, ಈ ಯಾತ್ರೆಯು ತುಮಕೂರು ನಗರಕ್ಕೆ ಆ.28ರಂದು ಆಗಮಿಸಲಿದೆ ಎಂದು ಸಿ.ಯತಿರಾಜು ತಿಳಿಸಿದರು.
ನಗರದ ಕನ್ನಡ ‘ವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇರಳದ ತಿರುವನಂತಪುರಂದಿಂದ ಆರಂ‘ಗೊಂಡ ರೈತ ಮಹಿಳಾ ಜನಾಂದೋಲನ ಯಾತ್ರೆಯು ತಮಿಳುನಾಡು ರಾಜ್ಯದ ಮೂಲಕ ಕರ್ನಾಟಕದ ಬೆಂಗಳೂರು, ಹುಣಸೂರು, ತುಮಕೂರು, ಚಳ್ಳಕೆರೆ, ಕೊಟ್ಟೂರು, ರಾಯಚೂರು ಮೂಲಕ ಆಂದ್ರ, ತೆಲಂಗಾಣ, ಛತ್ತಿಸ್ಘಡ್, ಮಧ್ಯಪ್ರದೇಶ, ಉತ್ತರ ಪ್ರದೇಶ , ರಾಜಸ್ಥಾನಗಳ ಮೂಲಕ ಹಾದು ಹೋಗಿ ಹರಿಯಾಣದ ಪಲಪಾಲ್ ಎಂಬ ಪ್ರದೇಶದಲ್ಲಿ ಸಮಾವೇಶಗೊಂಡು ಮುಕ್ತಾಯ ಮಾಡಲಿದೆ. ಈ ಯಾತ್ರೆಯು ಆ.28ರಂದು ತುಮಕೂರಿಗೆ ಆಗಮಿಸುತ್ತಿದ್ದು, ಅಂದು ರೈತ ಮಹಿಳೆಯರನ್ನು ಸ್ವಾಗತ ಮಾಡಿಕೊಂಡು, ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಿದ್ದೇವೆ. ಅಂದು ಬೆಳಗ್ಗೆ 11 ಗಂಟೆಗೆ ಕನ್ನಡ ‘ವನದಲ್ಲಿ ರೈತ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ತಿಳಿಸಿದರು.
ಶಕ್ತಿ ಕೇಂದ್ರದ ಅಧ್ಯಕ್ಷೆ ಜ್ಯೋತಿರಾಜ್ ಮಾತನಾಡಿ, ಭೂಮಿ ಹಂಚಿಕೆ ವಿಷಯ ಸೇರಿದಂತೆ ಹಲವಾರು ವಿಷಯಗಳಲ್ಲಿ ಮಹಿಳೆಯರಿಗೆ ಪ್ರಾಧಾನ್ಯತೆ ಸಿಗುತ್ತಿಲ್ಲ. ರೈತ ಮಹಿಳೆ ಎಂದು ಗುರುತಿಸಿ ಸರ್ಕಾರ ಗುರುತಿನ ಚೀಟಿ ಒದಗಿಸಬೇಕು. ಕೃಷಿ ಸಾಲ, ಬೆಳೆ ವಿಮೆ, ಮಾರುಕಟ್ಟೆ, ಪ್ರಕೃತಿ ವಿಕೋಪಗಳಿಗೆ ಸಿಗಬೇಕಾದ ಪರಿಹಾರ ‘ನದಂತಹ ಸೌಲಭ್ಯಗಳನ್ನು ಮಹಿಳೆಯರಿಗೆ ದೊರೆಯುವಂತಾಗಬೇಕು. ಅರಣ್ಯ ಹಕ್ಕು ಜಾರಿಯಲ್ಲಿ ಮಹಿಳೆಗೆ ಪ್ರಾತಿನಿಧ್ಯ ಇರಬೇಕು. ಕರ್ನಾಟಕ ಸುಧಾರಣಾ ನೀತಿಯನ್ನು ಮಹಿಳಾ ದೃಷ್ಠಿಕೋನದಿಂದ ಮರುವಿಮರ್ಶೆಗೊಳಪಡಿಸಬೇಕು. ಮಹಿಳಾ ಪ್ರಾತಿನಿಧ್ಯವುಳ್ಳ ‘ಸುಧಾರಣಾ ಕಾರ್ಯಪಡೆ ರಚಿಸಬೇಕು.
ಮಹಿಳೆಯರಿಗೆ ಭೂಮಿಯ ಜಂಟಿ ಒಡೆತನ ಕೊಡಬೇಕು. ಮಹಿಳೆಯರ ಹೆಸರಲ್ಲಿ ಮಂಜೂರಾತಿ ಮಾಡಿ. ಭೂಮಿ ಆಯೋಗ ರಚಿಸಿ ರೈತ ಮಹಿಳೆಯರು ಜೀವನ ನಡೆಸಲು ಅನುಕೂಲವಾಗುವಂತೆ ಮಾಡಬೇಕು ಎಂಬುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಮಾತನಾಡಿ, ಆ.28ರಂದು ತುಮಕೂರಿಗೆ ಆಗಮಿಸುತ್ತಿರುವ ರೈತ ಮಹಿಳಾ ಜನಾಂದೋಲನ ಯಾತ್ರೆಗೆ ಕನ್ನಡ ಸಾಹಿತ್ಯ ಪರಿಷತ್,ಕರ್ನಾಟಕ ರಾಜ್ಯ ರೈತಸಂಘ, ಹಸಿರು ಸೇನೆ ಮತ್ತು ಮಹಿಳಾ ಘಟಕಗಳು, ಕರ್ನಾಟಕ ಪ್ರಾಂತ ರೈತ ಸಂಘ, ಸ್ರೀಶಕ್ತಿ ಕೇಂದ್ರ, ಸ್ಲಂ ಜನಾಂದೋಲನ ಸಮಿತಿ, ಭೂಮಿ ವಸತಿ ವಂಚಿತರ ಹೋರಾಟ ಸಮಿತಿ, ಜನ ಸಂಗ್ರಾಮ ಪರಿಷತ್ ಸೇರಿದಂತೆ ಸಮಾನ ಮನಸ್ಕ ಸಂಘ ಸಮಿತಿಗಳು ಬೆಂಬಲ ನೀಡುತ್ತಿವೆ. ಇದಕ್ಕೆ ರೈತ ಮಹಿಳೆಯೂ ಕೂಡ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾ ಗೋಷ್ಟಿಯಲ್ಲಿ ರೈತ ಮುಖಂಡ ಆನಂದ ಪಟೇಲ್, ರಾಜ್ಯ ರೈತ ಸಂಘದ ಶಿವರತ್ನ, ಕೆ.ದೊರೈರಾಜು, ರಾಣಿಚಂದ್ರಶೇಖರ್, ಅಜ್ಜಪ್ಪ, ನರಸಿಂಹಮೂರ್ತಿ ಇತರರು ಉಪಸ್ಥಿತರಿದ್ದರು.
