ಚೇಳೂರು:
ಈ ಜಗತ್ತಿನಲ್ಲಿ ಪರಮಾತ್ಮನಿಲ್ಲದ ಜಾಗವಿಲ್ಲ.ಅವನು ನೀಡಿದ ಮಾರ್ಗದಲ್ಲಿಯೇ ನಾವುಗಳು ನೆಡೆಯಬೇಕು.ಇಲ್ಲಿ ಯಾರು ಶಾಶ್ವತವಲ್ಲ. ನಮ್ಮದು ಎಂದುಕೊಂಡಿರುವುದು ಯಾವುದು ಶಾಶ್ವತವಲ್ಲ.ಇರುವಾಗ ನಾವು ಭಗವಂತನನ್ನು ನಾಮ ಸ್ಮರಣೆ ಮಾಡಿಕೊಂಡು ಕೈಲಾದ ಸಹಾಯವನ್ನು ಮಾಡಿದರೆ ಅದು ನಮ್ಮನ್ನು ಕಾಪಾಡುತ್ತದೆ ಎಂದು ಹರಿಭಕ್ತ ಪಂಡಿತ ಶ್ರೀತುಕಾರಾಂಸ್ವಾಮಿಗಳು ಹೇಳಿದರು
ಇವರು ಚೇಳೂರಿನಲ್ಲಿ ಶ್ರೀಭಾವಸಾರ ಕ್ಷೆತ್ರಿಯ ಸಮಾಜ ಹಾಗೂ ಶ್ರೀ ಪಾಂಡುರಂಗ ದೇವಸ್ಥಾದ ಅಭಿವೃದ್ಧಿ ಮಂಡಳಿವತಿಯಿಂದ 24 ನೇ ವರ್ಷದ ಶ್ರೀಪಾಂಡುರಂಗರುಖುಮಾಯಿಯವರ ದಿಂಡೀ ಉತ್ಸವದ ಧಾರ್ಮಿಕ ಸಮಾರಂಭದ ದಿವ್ಯಸಾನಿಧ್ಯವಹಿಸಿ ಮಾತನಾಡುತ್ತ ನಾವುಗಳು ನಂಬಿಕೆಯನ್ನು ಇಟ್ಟಿಕೊಂಡು ಮಾಡುವ ಕೆಲಸ ಸದ ಯಶಸ್ವಿಯಾಗಿರುತ್ತಾದೆ. ಅದು ಸಹ ಭಗವಂತನ ಪ್ರರೇಣೆಯ ನಂಬಿಕೆಯಾಗಿರುತ್ತಾದೆ. ಗ್ರಾಮಗಳಲ್ಲಿ ಇಂತಹ ಕಾರ್ಯಗಳು ನೆಡೆಯಲು ಎಲ್ಲಾರ ಸಹಕಾರದಿಂದ ಮಾತ್ರ ಸಾಧ್ಯವಾಗುತ್ತಾದೆ ಎಂದರು.
ತುಮಕೂರಿನ ಕೆ.ಎಸ್.ಆರ್.ಟಿ.ಸಿ.ಡಿಪೋ ಮ್ಯಾನೇಜರ್ ಗಜೇಂದ್ರಕುಮಾರ್À ಮಾತನಾಡುತ್ತ ಮಕ್ಕಳ ವಿದ್ಯಾಭ್ಯಾಸಕ್ಕೆ ಪೋಷಕರ ಶ್ರಮ ಮುಖ್ಯವಾಗಿದೆ. ಅವರ ವ್ಯಾಸಂಗಕ್ಕೆ ಬೇಕಾಗುವ ಅನೇಕ ಸೌಲಾಭ್ಯಗಳು ಸರ್ಕಾರದಿಂದ ಸಿಗುತ್ತದೆ.ಸಮಾಜಭಾಂದವರು ಸೌಲಭ್ಯಗಳನ್ನು ಬಳಿಸಿಕೊಳ್ಳುವುದರಿಂದ ಮಕ್ಕಳ ಮುಂದಿನ ದಾರಿಗೆ ಬಹಳ ಅನುಕೂಲವಾಗುತ್ತದೆ.ಇಂತಹ ಕಾರ್ಯಕ್ರಮದಲ್ಲಿ ತಮ್ಮ ಮಕ್ಕಳ ಪ್ರತಿಭೆಗಳನ್ನು ಗುರುತಿವುದರಿಂದ ಮತ್ತಷ್ಟು ಮಕ್ಕಳಿಗೆ ಉತ್ತೇಜನವುಸಿಗುತ್ತದೆ.ಮಕ್ಕಳು ವಿದ್ಯಾವಂತರು ಆದರೆ ಅದೇ ದೊಡ್ಡ ಆಸ್ತಿಯಾಗುತ್ತದೆ ಈ ಸಮಾಜಕ್ಕೆ ಎಂದರು.
ರಾಜ್ಯಾ ಎಐಬಿಕೆ ಅಧ್ಯಕ್ಷರ ವಿಶೇಷ ಪ್ರತಿನಿಧಿ ಸತ್ಯನಾರಾಯಣರಾವ್ ಮಾತನಾಡುತ್ತ ನಮ್ಮ ಸಮಾಜದ ಎಲ್ಲಾ ಮಕ್ಕಳು ಪ್ರತಿಭಾವಂತರಾದರೆ ಅದೇ ಅವರು ಈ ಸಮಾಜಕ್ಕೆ ಕೊಡುವ ದೊಡ್ಡ ಕೊಡುಗೆಯಾಗಿದೆ.ಆದರೆ ಒಂದೇ ದಾರಿಯ ವ್ಯಾಸಂಗ ಮಾಡುವುದರಲ್ಲಿ ಯಾವ ಅರ್ಥವಿರುವುದಿಲ್ಲ ಬಹಳ ವಿಶಾಲವಾದಹಲವಾರು ವ್ಯಾಸಂಗಗಳು ಇವೆ ಅದನ್ನು ಆರಸಿಕೊಂಡು ಮಕ್ಕಳು ವ್ಯಾಸಂಗ ಮಾಡಿದ್ದರೆ ಪ್ರತಿಯೊಬ್ಬರು ಗುರುತಿಸುವಂತೆ ಪ್ರತಿಭೆಯಾಗುವುದರಲ್ಲಿ ಯಾವ ಸಂಶಯವಿಲ್ಲ ಎಂದರು.
ಮಾಜಿ ಛೇರ್ಮನ್ ಸಿ.ಎನ್.ತಿಮ್ಮೇಗೌಡ್ರು ಈ ಸಮಾಜದವರು ತಮ್ಮ ಸಹಕಾರ ಸಂಘದವತಿಯಿಂದ ಸಹಕಾರ ಬಂಧುಗಳಾಗಿ ಮತೊಷ್ಟು ಅರ್ಥಿಕವಾಗಿ ಮುಂದೆ ಬಾರಬಹುದಾಗಿದೆ ಎಂದರು.ಎಐಬಿಕೆಯ ರಾಜ್ಯಾಉಪಾಧ್ಯಕ್ಷ ಪಿ.ಎಸ್.ಗುರುಪ್ರಸಾಧ್ ಸಮಾರಂಭದ ಪ್ರಾಸ್ತಾವಿಕ ನುಡಿ ನುಡಿದರು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷ ಸಿ.ಟಿ.ಕಾಂತರಾಜರಾವ್ ಅಧ್ಯಕ್ಷತೆಯನ್ನುವಹಿಸಿ ಮಾತನಾಡಿದರು.ದಿಂಡೀ ಉತ್ಸವದ ಅಂಗವಾಗಿ ಶ್ರೀಪಾಂಡುರಂಗರುಕ್ಮೀಣಿ ದೇವಾಲಯದ ಅವರಣದಲ್ಲಿ ಪೋತಿ ಸ್ಥಾಪನೆಯೊಂದಿಗೆ ಪ್ರಾರಂಭಗೊಂಡು ಭಜನೆ,ಪ್ರವಚನ,ಕೀರ್ತನೆಗಳು. ಕಾಕಡಾರತಿ,ಜ್ಞಾನೇಶ್ವರಿ ಓವೀ ಪಾರಾಯಣದ 9 ಮತ್ತು 12 ನೇ ಅಧ್ಯಾಯ ಹ.ಭ.ಪ.ಶ್ರೀ ಡಿ.ಎಸ್.ತುಕಾರಾಂಸ್ವಾಮಿಗಳ ನೇತೃತ್ವದಲಿ ನೆಡೆಯತು ನಂತರ ಸ್ವಾಮಿಯವರ ಮಯೂರ ವಾಹನ ಉತ್ಸವ ಊರಿನ ಪ್ರಮುಖ ಬೀದಿಯಲ್ಲಿ ಕಾಲಾಕೀರ್ತನೆಯೊಂದಿಗೆ ನೆಡೆಯಿತು ಈ ಕಾರ್ಯಕ್ರಮದಲ್ಲಿ ತುಮಕೂರಿನ ಶ್ರೀ ಪಾಂಡುರಂಗ ಪತ್ತಿನ ಸಹಕಾರ ಸಂಘದವತಿಯಿಂದ ಸಮಾಜದ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕವನ್ನು ವಿತರಣೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಸಮಾಜದ ಗೌರವಧ್ಯಕ್ಷ ಹೆಚ್.ಕೆ.ಗಂಗಾಧರರಾವ್, ,ಜಿಲ್ಲಾಧ್ಯಕ್ಷ ಸತ್ಯನಾರಾಯಣರಾವ್, ಕಾರ್ಯದರ್ಶಿ ರಾಮಲಿಂಗರಾವ್,ಗಣೇಶ್ಶರ್ಮ,ಸಿ.ಕೆ.ವಾಸುದೇವರಾವ್,ಎಂ.ಆರ್.ರಂಗನಾಥ್ರಾವ್,ಸಿ.ಎಸ್.ಸುರೇಶ್ರಾವ್,ರೇಣುಕಪ್ರಸಾಧ್,ಜಗದೀಶ್ಬಾಬು,ಮಾಜಿ ಪ್ರಧಾನ ಸಿ.ಎನ್,ತಿಮ್ಮೇಗೌಡ್ರು,ಗಾಯತ್ರಿ ಸಮಾಜದ ಅಧ್ಯಕ್ಷ ಸಿ.ಎಸ್.ವಿಶ್ವನಾಥರಾವ್, ಸಿ.ಎನ್.ಬಸವರಾಜು, ಮಹಿಳಾ ಮಂಡಲಿಯವರು,ವಾರಕಾರಿಗಳು,ಸಮಾಜಭಾಂದವರುಗಳು ಹಾಗೂ ಇತರರ ಭಾಗವಹಿಸಿದ್ದರು
