ವೇಶ್ಯೆ ಅಡ್ಡ ಮೇಲೆ ದಾಳಿ:ನಾಲ್ವರ ಬಂಧನ

ದಾವಣಗೆರೆ:

ವೇಶ್ಯಾವಾಟಿಕೆ ಅಡ್ಡದ ಮೇಲೆ ದಾಳಿ ನಡೆಸಿರುವ ಪೊಲೀಸರು ನಾಲ್ವರನ್ನು ಬಂಧಿಸಿ, ಸಂತ್ರಸ್ಥೆಯನ್ನು ರಕ್ಷಿಸಿದ್ದಾರೆ.
ನಗರದ ಎಂಸಿಸಿ ಎ ಬ್ಲಾಕ್‍ನಲ್ಲಿ ಅಕ್ರಮವಾಗಿ ವೇಶ್ಯವಾಟಿಕೆ ನಡೆಸುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ಎಸ್ಪಿ ಆರ್. ಚೇತನ್ ಹಾಗೂ ಎಎಸ್ಪಿ ಟಿ.ಜೆ. ಉದೇಶ್ ಮಾರ್ಗದರ್ಶನದಲ್ಲಿ ಡಿಸಿಬಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಟಿ.ವಿ. ದೇವರಾಜ ಹಾಗೂ ಡಿಸಿಐಬಿ ಇನ್ಸ್‍ಪೆಕ್ಟರ್ ಎಸ್.ಕೆ. ಶಂಕರ್ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ, ದಂಧೆಯಲ್ಲಿ ತೊಡಗಿದ್ದ ರೇಷ್ಮಾ (38), ಸಿದ್ದಪ್ಪ (68), ಕೃಷ್ಣ (36), ರಾಜಾ ವಿಶ್ವನಾಥ್ (24) ಬಂಧಿತರಾಗಿದ್ದಾರೆ. 32 ವರ್ಷದ ಓರ್ವ ಸಂತ್ರಸ್ಥೆಯನ್ನು ರಕ್ಷಿಸಲಾಗಿದೆ.
ಈ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Recent Articles

spot_img

Related Stories

Share via
Copy link