ಹಿರಿಯೂರು :
ಬಡವರು ಹಾಗೂ ಅನಕ್ಷರಸ್ಥರು ಸುಲಭ ರೀತಿಯಲ್ಲಿ ವಂಚನೆಯಿಲ್ಲದೆ ವ್ಯವಹಾರ ನಡೆಸಲು ಅನುಕೂಲಕರವಾದ ವ್ಯವಸ್ಥೆಯೇ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಎಂದು ಹೊಳಲ್ಕೆರೆs ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕ ಡಾ.ಟಿ.ಗೀರೀಶ್ನಾಯಕ ಹೇಳಿದರು.
ತಾಲೂಕಿನ ಬಬ್ಬೂರು ಗ್ರಾಮದ ಅಂಚೆ ಕಚೇರಿಯಲ್ಲಿ ಶನಿವಾರ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಶಾಖೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ನ 650ಕೇಂದ್ರಗಳಿಗೆ ಏಕಕಾಲದಲ್ಲಿ ಚಾಲನೆ ನೀಡಿದ್ದು, ತಾಲೂಕಿನ ಮೂರು ಭಾಗದಲ್ಲಿ ಆರಂಭವಾಗಿದೆ. ಅದರಲ್ಲಿ ನಮ್ಮ ಗ್ರಾಮವು ಒಂದಾಗಿರುವುದು ಸಂತೋಷದಾಯಕವಾಗಿದ್ದು, ಅಂಚೆ ಪೇದೆಗಳು ನಿಮ್ಮ ಮನೆಯ ಬಾಗಿಲಿಗೆ ಬಂದು ಸೇವೆ ಮಾಡುತ್ತಾರೆ. ಆದ್ದರಿಂದ ಸಾರ್ವಜನಿಕರು ಇದರು ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಅಂಚೆ ನೀರಿಕ್ಷಕ ನರೇಂದ್ರ ಮಾತನಾಡಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಖಾತೆಯನ್ನು ತೆರೆದ ಅಂಚೆ ಕಚೇರಿಯಾಗಿದ್ದು, ಈ ವ್ಯವಸ್ಥೆಯಿಂದ ಯಾವುದೇ ದಾಖಲೆಗಳಿಲ್ಲದೆ ಕೇವಲ ಆಧಾರ್ ಹಾಗೂ ದೂರವಾಣಿ ಸಂಖ್ಯೆಯಿದ್ದರೆ ಸಾಕು ಸುಲಭವಾಗಿ ಖಾತೆ ತೆರೆಯುವ ಮೂಲಕ ಕಾಗದ ರಹಿತ ವಹಿವಾಟ ನಡೆಸಲು ಅನುಕೂಲವಾಗಿದೆ.
ಈ ವ್ಯವಸ್ಥೆಯಿಂದ ಸುಲಭ ಹಣ ವರ್ಗಾವಣೆ, ಉಳಿತಾಯ ಹಾಗೂ ಚಾಲ್ತಿ ಖಾತೆ ಆರಂಭ, ಆರ್ಡಿ, ಎಫ್ಡಿ, ಟಿಡಿ ಹಾಗೂ ವಿಮಾ ಸೌಲಭ್ಯಗಳು, ಸಾಲ ಸೌಲಭ್ಯ ಮುಂತಾದ ಸೇವೆಗಳು ದೊರಯಲಿದ್ದು, ಗ್ರಾಹಕರ ಮನೆ ಬಾಗಿಲಿಗೆ ಬಂದು ತಲುಪಲಿವೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಹೇಮಂತ್ಯಾದವ್ ಉದ್ಘಾಟಿಸಿದರು. ಪಿಡಿಒ ಲಕ್ಷ್ಮೀಕಾಂತ್, ಪ್ರೊಫೆಸರ್ ಡಾ.ಶರಣಪ್ಪಜಂಗಡಿ, ಸಹ ಪ್ರಾಧ್ಯಾಪಕ ಹೇಮಂತಕುಮಾರ್, ತಿಮ್ಮರಾಯಪ್ಪ, ಪ್ರಪುಲ್ಲಚಂದ್ರ, ನಿಜಲಿಂಗಪ್ಪ, ಶ್ರೀನಿವಾಸ್, ತಿಮ್ಮಣ್ಣ, ವಾಸೀಂ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
