ಹರಪನಹಳ್ಳಿ:
ಹಿಂದೂ ಮಹಾಗಣಪತಿ ಶೋಭಾಯಾತ್ರೆ ಅಭಿನವ ಹಾಲಸ್ವಾಮಿಯವರ ನೇತೃತ್ವದಲ್ಲಿ ವಿಜೃಂಭಣೆಯಿಂದ ಆರಂಭವಾಯಿತು.
ಪಟ್ಟಣದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಭಜರಂಗದಳ, ವಿಶ್ವಹಿಂದೂ ಪರಿಷತ್ ವತಿಯಿಂದ ಪ್ರತಿಷ್ಟಾಪಿಸಲಾಗಿದ್ದ ದರ್ಭಾರ್ ಗಣಪತಿಯನ್ನು 11 ನೇ ದಿನದಂದು ವಿಸರ್ಜನೆಗಾಗಿ ಬೃಹತ್ ಜನಸ್ತೋಮದೊಂದಿಗೆ ಶೋಭಾಯಾತ್ರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹೂವಿನಿಂದ ಅಲಂಕೃತಗೊಂಡ ನವಿಲು ಮಂಟಪದಲ್ಲಿ ಸಂಚರಿಸಿ ಸಾರ್ವಜನಿಕರ ಮನಸೂರೆಗೊಂಡಿತು.
ಶೋಭಾಯಾತ್ರೆಗೂ ಮುನ್ನ ಗಣಪತಿಯ ಹಾರ ಮತ್ತು ದ್ವಜಗಳನ್ನು ಹರಾಜು ಮಾಡಲಾಯಿತು. 20100 ರೂಗೆ ಭಜರಂಗದಳದ ದ್ವಜವನ್ನು ವಾಲ್ಮೀಕಿ ನಗರದ ಮಂಡಕ್ಕಿ ಶ್ರೀಕಾಂತ್ ಪಡೆದರು, ಗಣೇಶನ ಭಗವದ್ ದ್ವಜವನ್ನು 20 ಸಾವಿರ ರೂಗಳಿಗೆ ತಳವಾರ ನಾಗರಾಜ್ ಪಡೆದುಕೊಂಡರು. ಹಾರವನ್ನು 15500 ಕ್ಕೆ ಬಾಗಳಿ ನಾಗರಾಜ್, ಗಂದದ ಹಾರವನ್ನು ಸ್ನೇಹಿತರ ಬಳಗ 10 ಸಾವಿರಕ್ಕೆ, 5 ಸಾವಿರಕ್ಕೆ ರಾಯದುರ್ಗದ ಹನುಮಂತ ಮಲ್ಲಿಗೆ ಹಾರ ಪಡೆದು ಭಕ್ತಿ ಸಮರ್ಪಿಸಿದರು.
ಮೆರವಣಿಗ ಆರಂಭದಲ್ಲಿ ಮುಸ್ಲೀಂ ಬಂಧುಗಳಿಂದ ಬೃಹತ್ ಗಾತ್ರದ ಹೂವಿನ ಹಾರವನ್ನು ಗಣೇಶನಿಗೆ ಸಮರ್ಪಿಸಿ ಹಿಂದೂ ಮುಸ್ಲೀಂ ಭಾವೈಕೈತೆ ಸಾರಿದರು. ಕೇರಳದ ಚಂಡೀಮೇಳ, ಬೆಂಗಳೂರಿನ ಅಣ್ಣಮ್ಮ ತಮಟೆ, ನಾಸಿಕ್ನ ಡೋಲು, ಡೀಜೆ ಸೇರಿದಂತೆ ವಿವಿಧ ವಾದ್ಯಗಳಲ್ಲಿ ಯುವಕರು ಹೆಜ್ಜೆಹಾಕಿದರು.
ಮೆರವಣಿಗೆ ಉದ್ದಕ್ಕೂ ನಗರವೆಲ್ಲ ಕೇಸರಿ ಮಯವಾಗಿತ್ತು, ಹರಿಹರ ವೃತ್ತದಿಂದ ಇಜಾರಿ ಸಿರಸಪ್ಪ ವೃತ್ತದವರೆಗೂ ಹಿಂದೂ ಘೋಷಣೆ ಕೂಗುತ್ತಾ ಬೈಕ್ಗಳ ಮೂಲಕ ರ್ಯಾಲಿ ನೆಡೆಸಿದರು.
ಮೆರವಣಿಗೆಯಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಪೊಲೀಸ್ ಮುಂಜಾಗ್ರತಾ ಕ್ರಮವಾಗಿ ರಸ್ತೆಗಳು ಶೂನ್ಯ ರಸ್ತೆ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ. ಸಿಸಿ ಕ್ಯಾಮೆರಾಗಳ ವ್ಯವಸ್ಥೆಯೂ ಮಾಡಲಾಗಿತ್ತು. ಮೆರವಣಿಗೆ ಮಾರ್ಗದಲ್ಲಿ ವಿವಿಧ ಸಂಘ ಸಂಸ್ಥೆಗಳು, ವ್ಯಾಪಾರಿಗಳು ಅಂಗಡಿ ಮುಗ್ಗಟ್ಟುಗಳನ್ನು ಸ್ವಯಂ ಪ್ರೇರೆಣೆಯಿಂದ ಬಂದ್ ಮಾಡಿಕೊಂಡು ಅಂಗಡಿ ಮುಂಬಾಗದಲ್ಲಿ ಗಜಗಾತ್ರದ ಹೂವಿನ ಹಾರ ಗಣೇಶನಿಗೆ ಅರ್ಪಿಸಲು ಸಿದ್ದತೆಯೊಂದಿಗೆ ಲಘು ಉಪಹಾರ ಮತ್ತು ತಂಪು ಪಾನಿಯಗಳ ವ್ಯವಸ್ಥೆಯನ್ನು ಮಾಡಿದ್ದರು.
ವಿಶ್ವಹಿಂದೂ ಪರಿಷತ್, ಭಜರಂಗದಳ ಕಾರ್ಯಕರ್ತರು ಹಾಗೂ ಸರ್ವಜನಾಂಗದವರು ಸವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದು ಹೆಚ್ಚಿನ ಮೆರಗು ನೀಡಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
