ದರ್ಶನ್ ಗೆ ಅಪಘಾತ !

ಮೈಸೂರು: 

      ಸೋಮವಾರ ಮುಂಜಾನೆ ನಟ ದರ್ಶನ್‌ ಸೇರಿದಂತೆ ಮೂವರು ನಟರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. 

      ನಟ ದರ್ಶನ್‌, ದೇವರಾಜ್‌ ಹಾಗೂ ಪ್ರಜ್ವಲ್‌ ದೇವರಾಜ್‌ ಪ್ರಯಾಣಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಗುದ್ದಿದ್ದು, ದರ್ಶನ್‌ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.

       ಗಾಯಾಳುಗಳು ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಡರಾತ್ರಿ ಖಾಸಗಿ ಹೋಟೆಲ್ ನಿಂದ ಕಾರ್ಯಕ್ರಮ ಮುಗಿಸಿ ಬೆಂಗಳೂರಿಗೆ ತೆರಳುವ ವೇಳೆ ಈ ಘಟನೆ ನಡೆದಿದೆ. 

      ದರ್ಶನ್​ ಕೈಗೆ ರಾಡ್ ಅಳವಡಿಸಲಾಗುತ್ತಿದ್ದು, ಮೂರು ಇಂಚು ಹೊಲಿಗೆ ಹಾಕಲಾಗಿದೆ. ಸದ್ಯ ನಟ ದರ್ಶನ್ ಅವರ ಮತ್ತೋರ್ವ ಗನ್​ಮ್ಯಾನ್ ಲಕ್ಷ್ಮಣ್, ಅಪಘಾತ ಸಂಬಂಧ ದೂರು ನೀಡಿದ್ದಾರೆ.

      ದರ್ಶನ್​ ಆರೋಗ್ಯ ವಿಚಾರಿಸಲು ಅವರ ಪತ್ನಿ ವಿಜಯಲಕ್ಷ್ಮೀ ಆಗಮಿಸಿದ್ದರು. ಇನ್ನು ಆಸ್ಪತ್ರೆಗೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು ಅವರನ್ನು ನಿಯಂತ್ರಿಸುವ ಸಲುವಾಗಿ ಪೊಲೀಸ್​ ಬಿಗಿ ಭದ್ರತೆ ಕಲ್ಪಿಸಲಾಗಿದೆ.

ಶಸ್ತ್ರಚಿಕಿತ್ಸೆ;
      ಕಾರು ಅಪಘಾತದಿಂದಾಗಿ ಗಾಯವಾಗಿದ್ದ ಚಿತ್ರನಟ ದರ್ಶನ್ ಅವರ ಬಲಗೈಗೆ ಬಳೆ ಚೂರು ಚುಚ್ಚಿಕೊಂಡಿದ್ದು, ಮೂಳೆ ಮುರಿತಕೊಂಡಿದ್ದು, ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಅವರು ಆರೋಗ್ಯದಿಂದಿದ್ದು ವಾರ್ಡ್‍ಗೆ ಶಿಪ್ಟ್ ಮಾಡಲಾಗಿದೆ. ಹಾಗಾಗಿ ಅಭಿಮಾನಿಗಳಾರು ಆತಂಕ ಪಡುವ ಅಗತ್ಯವಿಲ್ಲ ಎಂದು ಚಲನಚಿತ್ರ ನಿರ್ಮಾಪಕ ಸಂದೇಶ್‍ನಾಗರಾಜ್ ತಿಳಿಸಿದ್ದಾರೆ.

            ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link