ಕೂಚ್ ಬೆಹರ್: 
ನಮ್ಮ ದೇಶದಲ್ಲಿ ಪಾರಂಪರಿಕ ರಾಜ್ಯ ಎಂದು ಕರೆಸಿ ಕೊಳ್ಳುವ ಪಶ್ಚಿಮ ಬಂಗಾಳದ ಇಸ್ಲಾಮ್ಪುರ ಸಮೀಪದ ದಿಂಜ್ಪುರ ಎಂಬಲ್ಲಿ ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ನಡೆದಿದ್ದ ಘರ್ಷಣೆಯಲ್ಲಿ ವಿದ್ಯಾರ್ಥಿಯೊಬ್ಬ ಹತನಾಗಿದ್ದ. ಹೀಗಾಗಿ ಬಿಜೆಪಿ ಬುಧವಾರದಂದು ರಾಜ್ಯವ್ಯಾಪಿ 12 ಗಂಟೆಗಳ ಬಂದ್ಗೆ ಕರೆ ನೀಡಿದೆ.
ಬಂದ್ ವೇಳೆ ಪ್ರತಿಭಟನಾಕಾರರು ಸರ್ಕಾರಿ ಮತ್ತು ಖಾಸಗಿ ಬಸ್ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೆ ಪ್ರತಿಭಟನಾಕಾರರು ಟೈರ್ ಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇನ್ನು ಕಲ್ಲು ತೂರಾಟದ ದಾಳಿಯಿಂದ ತಪ್ಪಿಸಿಕೊಳ್ಳಲು ಬಸ್ ಚಾಲಕರು ಹೆಲ್ಮೆಟ್ಗಳ ಮೊರೆ ಹೋಗಿದ್ದಾರೆ. ಬಸ್ಗಳ ಮೇಲೆ ಕಲ್ಲು ತೂರಾಟ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಕ್ಷಣೆ ಪಡೆಯಲು ಚಾಲಕರು ಹೆಲ್ಮೆಟ್ ಧರಿಸುತ್ತಿದ್ದಾರೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








