ಹರಪನಹಳ್ಳಿ:
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಬಿ.90) ಹಲವಾರು ದಶಕಗಳಿಂದ ರೈತರಿಗೆ ಬೇಕಾದ ಬೀಜ ಗೊಬ್ಬರಗಳನ್ನು ಮಾತ್ರ ವ್ಯವಹರಿಸುತ್ತಿತು ಅದರೀಗ ಆಧುನಿಕ ತಂತ್ರಜ್ಞಾನಗಳ ಸ್ಪರ್ದೆಯಲ್ಲಿ ತಾನು ಸರಿಸಾಟಿಯಾಗಿ ವ್ಯವಹರಿಸಲು ಇ-ಸ್ಟಾಪಿಂಗ್ ಪ್ರಾರಂಭಿಸಿರುವುದು ಹೆಮ್ಮೆಯಾಗಿದೆ ಎಂದು ಸಂಘದ ಸದಸ್ಯ ಹಾಗೂ ನಿವೃತ್ತ ಕೃಷಿ ಅಧಿಕಾರಿ ಕಟ್ಟಿ ರಂಗಣ್ಣ ಪ್ರಶಂಸಿದರು.
ಪಟ್ಟಣದ ಬಿ90 ಸೊಸೈಟಿಯಲ್ಲಿ ಬುಧವಾರ ಇ-ಸ್ಟಾಂಪಿಂಗ್ (ಛಾಪ ಕಾಗದ) ಉದ್ಘಾಟನೆ ಕಾಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಹಿಂದೆ ರೈತರು ಹಾಗೂ ರೇಷನ್ ವ್ಯವಹಾರವನ್ನು ಮಾತ್ರ ಮಾಡಲಾಗುತ್ತಿತ್ತು. ವ್ಯಾಪರಸ್ಥೆರಿಗೆ, ಸ್ತ್ರೀಶಕ್ತಿ ಸಂಘಗಳಿಗೆ ಅರ್ಥಿಕ ಸಹಾಯ ನೀಡಲಾಗುತ್ತಿದೆ. ರೈತರು ತಮ್ಮ ದೈನಂದಿನ ಕೆಲಸಗಳಿಗೆ ಸಂಘಕ್ಕೆ ಬೇಟಿ ನೀಡುತ್ತಾರೆ. ವ್ಯಹಾರಸ್ಥರಿಗೂ ಹಾಗೂ ರೈತರಿಗೂ ಒಂದೇ ಮಳಿಗೆಯಲ್ಲಿ ಹಲವು ವಿಧದ ಸೌಲಭ್ಯಗಳನ್ನು ನೀಡಲು ಸಂಘ ಅನುಕೂಲ ಮಾಡಿಕೊಟ್ಟಿರುವುದು ಶ್ಲಾಘನೀಯ ಎಂದರು.
ಅಧ್ಯಕ್ಷ ಗಿಡಹಳ್ಳಿ ನಾಗರಾಜ ಮಾತನಾಡಿ, ಸಂಘದ ಅಭಿವೃದ್ಧಿಗೆ ಸಿಬ್ಬಂದಿಗಳ ಕೊಡುಗೆ ಅಪಾರವಾಗಿದೆ. ಕಾಲಕ್ಕೆ ತಕ್ಕಂತೆ ವ್ಯವಹಾರಗಳನ್ನು ಅಳವಡಿಸಿಕೊಂಡು ಸದಸ್ಯರು ಹಾಗೂ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದ್ದಾರೆ ಎಂದರು.
ಸಹಕಾರ ಸಂಘಗಳ ಸಹಾಯಕ ನಿಬಂಧಕರು ಎಲ್.ತಿಪ್ಪೇಸ್ವಾಮಿ ಉದ್ಘಾಟಿದರು. ಸದಸ್ಯರಾದ ಪೂಜಾರ ಮಂಜುನಾಥ, ಎಂ.ಸುಮಂಗಳ, ಕೆ.ಷೇಕ್ಹುಸೇನ್ಸಾಬ್, ಇಟಿಗಿ ರುದ್ರಪ್ಪ, ಎ.ಅಂಜಿನಪ್ಪ, ಹೆಚ್.ಚಮನವಲಿ, ಎಂ.ವೆಂಕಟೇಶ್, ಗುಂಡಿ ಸುಜಾತ, ಕ್ಷೇತ್ರಾಧಿಕಾರಿ ಪಿ.ಲಿಂಗನಗೌಡ, ಮುಖ್ಯಕಾರ್ಯನಿರ್ವಹಣಾಧಿಕಾರಿ ಡಿ.ಬಸವರಾಜ, ವ್ಯವಸ್ಥಾಪಕ ಟಿ.ತಿಮ್ಮಪ್ಪ ಹಾಗೂ ಸಿಬ್ಬಂದಿ ವರ್ಗ ಭಾಗವಹಿಸಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
