ಪಾದಾಚಾರಿಗಳ ಮೇಲೆ ಹರಿದ ಲಾರಿ : ನಾಲ್ವರ ದುರ್ಮರಣ

ಕಲಬುರಗಿ:

      ರಸ್ತೆ ಪಕ್ಕದಲ್ಲಿಯೇ ನಿಂತಿದ್ದ ಜನರ ಮೇಲೆ ಲಾರಿಯೊಂದು ಹರಿದು, ನಾಲ್ಕು ಮಂದಿ ಸ್ಥಳದಲ್ಲಿಯೇ ಮೃತಪಟ್ಟ ದುರ್ಘಟನೆ ಜೇವರ್ಗಿ ತಾಲೂಕಿನ ಜೇರಟಗಿ ಗ್ರಾಮದ ಬಳಿ ನಡೆದಿದೆ. 

      ಜೇರಟಗಿಯ ಮೊಹಿನ್ ರಫೀಕಸಾಬ ಬಾಗವಾನ್ (20), ಶ್ರೀಕಾಂತ ದೇವೇಂದ್ರಪ್ಪ ಬಡಿಗೇರ (21), ರಾಜಸ್ಥಾನದ ಗೋಲು ರಾಜಸ್ಥಾನಿ (23) ಹಾಗೂ ರಂಜಣಗಿಯ ಪೀರಸಾಬ್ ಅನ್ಶೀರ್ ಪಟೇಲ್ (35) ಮೃತಪಟ್ಟವರು.

      ಮೃತರು ರಸ್ತೆ ಬದಿ ನಿಂತಿದ್ದರು, ಈ ವೇಳೆ ಏಕಾಏಕಿ ಬಂದ ಲಾರಿ ಅವರ ಮೇಲೆ ಹರಿದಿದೆ ಎನ್ನಲಾಗಿದ್ದು, ಪರಿಣಾಮ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡಿರುವವರನ್ನು ವಿಜಯಪುರದ ಸಿಂದಗಿ ತಾಲೂಕಿನ ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಾಯಾಳುಗಳಲ್ಲಿ ಓರ್ವನ ಎಡರೂ ಕಾಲುಗಳು ತುಂಡಾಗಿವೆ ಎನ್ನಲಾಗಿದೆ.

      ಈ ಕುರಿತು ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಾಲಕನ ನಿರ್ಲಕ್ಷ್ಯವನ್ನು ಖಂಡಿಸಿ ಸ್ಥಳೀಯರು ರಸ್ತೆ ತಡೆದು ಪ್ರತಿಭಟನೆ ನಡೆಸಿದ ಘಟನೆ ಕೂಡ ನಡೆಯಿತು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link