ರಾಜ್ಯಾದ್ಯಂತ ಪರಿಶಿಷ್ಟ ಪಂಗಡದ ಅನದೀಕೃತ ಜಾತಿ ಪ್ರಮಾಣ ಪತ್ರ ನೀಡುತ್ತಿರುವುದನ್ನು ಖಂಡಿಸಿ ಪ್ರತಿಭಟನೆ

ಬ್ಯಾಡಗಿ

          ರಾಜ್ಯಾದ್ಯಂತ ಪರಿಶಿಷ್ಟ ಪಂಗಡದ ಹೆಸರಿನಲ್ಲಿಅನದೀಕೃತವಾಗಿಜಾತಿ ಪ್ರಮಾಣ ಪತ್ರಗಳನ್ನು ನೀಡುತ್ತಿರುವುದನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಟ್ಟಣದ ವಾಲ್ಮೀಕಿ ಸಮುದಾಯದಜನರು ಮುಖ್ಯ ತಹಶೀಲ್ದಾರ ಮೂಲಕ ಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

         ಈ ಸಂದರ್ಬದಲ್ಲಿ ಮಾತನಾಡಿದ ಮುಖಂಡ ಹೊನ್ನೂರಪ್ಪಕಾಡಸಾಲಿ, ಸರಕಾರದ ಸವಲಭ್ಯಗಳನ್ನು ವಾಗ ಮಾರ್ಗದ ಮೂಲಕ ಪಡೆದುಕೊಳ್ಳುವ ನಿಟ್ಟಿನಲ್ಲಿಅನ್ಯ ವರ್ಗದಜನರಿಗೆಪರಿಶಿಷ್ಟ ಪಂಗಡದ ಹೆಸರಿನಲ್ಲಿಅನದೀಕೃತವಾಗಿಜಾತಿ ಪ್ರಮಾಣ ಪತ್ರಗಳನ್ನು ನೀಡಲಾಗುತ್ತಿರುವ ಅಂಶ ಬೆಳಕಿಗೆ ಬಂದಿದೆಇದರಲ್ಲಿ ಅಧಿಕಾರಿಗಳು ಶಾಮಿಲಾಗಿದ್ದುಯಾರಿಗೆ ಬೇಕೋ ಅವರಿಗೆಎಸ್‍ಸಿ ನಕಲಿ ಪ್ರಮಾಣ ಪತ್ರ ನೀಡುತ್ತಿದ್ದಾರೆಇಂತಹ ಹತ್ತಾರು ಪ್ರಕರಣಗಳು ರಾಜ್ಯದಲ್ಲಿಇಗಾಗಲೆ ನಡೆದಿದ್ದುಆದ್ದರಿಂದಇದಕ್ಕೆ ಸಹಾಯನೀಡಿದವರ ವಿರುಧ್ಧ ಕಾನೂನು ಕ್ರಮಜರುಗಿಸುವಂತೆ ಆಗ್ರಹಿಸಿದರು.

         ಮೀಸಲಾತಿ ಹೆಚ್ಚಿಸಿ:ನಿವೃತ್ತ ಶಿಕ್ಷಕ ಎಸ್.ಎಸ್.ಯಮನಕ್ಕನವರ ಮಾತನಾಡಿ, ಹಿಂದುಳಿದ ವರ್ಗವಾದ್ದರಿಂದ ಸಮಾಜದಅಭಿವೃದ್ಧಿಗೆ ರಾಜಕೀಯ ಸ್ಥಾನ ಮಾನಗಳು ಪ್ರಮುಖವಾಗಿ ಬೇಕಾಗಿದೆ ಇಗಾಗಲೆ ಪರಿಶಿಷ್ಟ ಪಂಗಡಕ್ಕೆಶೇ.7.5 ರಷ್ಟು ಮೀಸಲಾತಿಯನ್ನು ನೀಡಿಲಾಗಿದ್ದು ಸ್ವಾಗತಾರ್ಹ,ಅದೇರೀತಿಯಲ್ಲಿ ಶೈಕ್ಷಣಿಕಹಾಗೂ ಉದ್ಯೋಗ ನೇಮಕಾತಿಯಲ್ಲಿಈಗಿರುವ ಶೇ.3 ನ್ನು 7.5 ಕ್ಕೇರಿಸುವಂತೆ ಆಗ್ರಹಿಸಿದರು.

           ಹೆಚ್ಚಿನ ಸಚಿವ ಸ್ಥಾನ ನೀಡಿ:ಮಂಜುನಾಥ ಕೋಡಿಹಳ್ಳಿ ಮಾತನಾಡಿ, ಯಾವದೇ ಸರಕಾರಗಳು ಬರಲಿ ಪರಿಶಿಷ್ಟ ವರ್ಗದಅಭಿವೃದ್ಧಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವಂತೆ ಆಗ್ರಹಿಸಿದ ಅವರು ವಾಲ್ಮೀಕಿ ಸಮುದಾಯದಇನ್ನೂ ಮೂವರು ಶಾಸಕರಿಗೆ ಸಚಿವ ಸ್ಥಾನ ನೀಡುವುದು ಹಾಗೂ ಪರಿಶಿಷ್ಟ ವರ್ಗದ ನೌಕಕರಿಗೆ ಮುಂಬಡ್ತಿ ಮೀಸಲಾತಿ ಶೀಘ್ರವೇ ಜಾರಿಗೆತರುವಂತೆ ಆಗ್ರಹಿಸಿದರು.ಈ ಸಂದರ್ಬದಲ್ಲಿದುಗ್ಗಪ್ಪ, ಕುಮಾರ ಭೋವಿ, ಸೇರಿದಿಂತೆಇನ್ನಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link