ತುಮಕೂರು
ಹೆಣ್ಣು ನಮ್ಮೆಲ್ಲರ ಬಾಳಿನಕಣ್ಣು.ಅವಳಿರದ ಜಗತ್ತನ್ನು ಯಾರೂ ಕಲ್ಪಿಸಲಾಗದು ಅವಳೊಂದು ಜೀವನ್ಮುಖಿ.ಎಂದು ಜಿ ಕೆ ಕುಲಕರ್ಣಿಯವರು ತಿಳಿಸಿದರು.ಅವರು ಮಹಿಳಾ-ಮಕ್ಕಳ ಸಾಹಿತ್ಯಕೂಟವು ‘ವಿಶ್ವಹೆಣ್ಣು ಮಗುವಿನ ದಿನಾಚರಣೆಯ’ ಅಂಗವಾಗಿ ಏರ್ಪಡಿಸಿದ್ದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ,ಹೆಣ್ಣು ಮತ್ತು ಗಂಡುಗಳ ಲಿಂಗಾನುಪಾತದಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಕ್ಷೀಣಿಸುತ್ತಿರುವುದು ಆತಂಕಕಾರಿಯಾದುದು.
ಇದರ ಪರಿಣಾಮದಿಂದಾಗಿ ಅನೇಕ ಕೌಟುಂಬಿಕ,ಸಾಮಾಜಿಕ ಸಮಸ್ಯೆಗಳು ತಲೆದೋರುತ್ತಿವೆ.ಹೆಣ್ಣುಮಕ್ಕಳ ಸಂಖ್ಯೆ ಕ್ಷೀಣಿಸಲು ಹಲವಾರು ಕಾರಣಗಳಿವೆ.ಹಿಂದೆ ಕೀರುತಿಗೊಬ್ಬ ಆರತಿಗೊಬ್ಬಳು ಎನ್ನುವ ಕಾಲದಲ್ಲಿ ಪ್ರತಿಯೊಬ್ಬರ ಮನೆಗಳಲ್ಲಿಯೂ ಪುಟ್ಟ ಹೆಣ್ಣು ಮಗು ಮುದ್ದಾಗಿ ಓಡಾಡುವುದನ್ನು ನೋಡುತ್ತಿದ್ದೆವು. ಈಗ ಕಾಲಬದಲಾಗಿದೆ ಹೆಣ್ಣಿರಲಿ ಗಂಡಿರಲಿ ಮಗುವೊಂದೇ ಇರಲಿ ಎಂಬಂತಾಗಿ ಹೆಚ್ಚಿನ ಕುಟುಂಬಗಳಲ್ಲಿ ಅದು ಗಂಡಾಗಲೀ ಹೆಣ್ಣಾಗಲಿ ಮಗುವೊಂದೇ ಇರಲಿ ಎಂಬಂತಾಗಿ ಒಂದೇ ಮಗುವಿರುವುದನ್ನು ಕಾಣುತ್ತಿದ್ದೇವೆ ಇದೂ ಒಂದು ಕಾರಣವಿರಬಹುದು. ಎಂದು ತಿಳಿಸುತ್ತಾ ಇಂದಿನ ಕವಿಗೋಷ್ಠಿ ವಸ್ತುನಿಷ್ಠವಾಗಿತ್ತು. ಇಂದು ಎಲ್ಲಾ ಕವನಗಳು ಹೆಣ್ಣು ಮಕ್ಕಳ ಬಗ್ಗೆ ಕಾಳಜಿ, ಆತಂಕ ವ್ಯಕ್ತಪಡಿಸುತ್ತಿದ್ದವು.
ಕವಿ ಲಿಂಗಸಂದ್ರತಿಪ್ಪೇಸ್ವಾಮಿಯವರ ಕವನದಲ್ಲಿ ಮನೆಬೆಳಗಲು ಹೆಣ್ಣುಬೇಕು ಮನಬೆಳಗಲು ಹೆಣ್ಣುಬೇಕು ಅಕ್ಕನಾಗಿ , ತಂಗಿಯಾಗಿ ,ಅಮ್ಮನಾಗಿ,ಅಜ್ಜಿಯಾಗಿ ಹೆಣ್ಣುಬೇಕು ಮಗಳಾಗಿ ಹೆಣ್ಣು ಬೇಡವೇಕೆ ಎಂಬ ಸಾಲುಗಳು ಹೃದಯತಟ್ಟಿದರೆ,ನರಸಿಂಹರಾಜು ಹೆಗ್ಗೆರೆಯವರ ಹೆಣ್ಣು ಬೆಳಕುಚೆಲ್ಲುವ ಭರವಸೆ ಎಂದರು.ತೇಜಸ್ವೀಕಿರಣ್ ಅವರು ಹೆಣ್ಣಿನ ಬಗೆಗಿನ ತಾರತಮ್ಯ ಅಳಿಸಿ ಸಮಾನತೆ ಕಾಣುವುದೆಂತು ಅಸಮಾನತೆಯೇ ಸಮಾಜದ ದುರ್ಭಲತೆ ಎಂದರು.
ಕವಿ ಸಿಡದರಗಲ್ ರಂಗನಾಥ್ ಅವರು ಮಕ್ಕಳು ಅನಾಥಪ್ರಜ್ಞೆಯಿಂದ ನರಳಬಾರದು ಎಂಬ ಆಶಯ,ಮುದಿಗೆರೆರಮೇಶ್ಕುಮಾರ್ ಅವರ ನಾನೂ ಕವಿತೆಯಾಗಬೇಕಿತ್ತು ಮನಮಿಡಿಯುವಂತಿತ್ತು.ಸುಮಬೆಳಗೆರೆಯವರ ಹೆಣ್ಣು ಬಾಂದವ್ಯದ ಪ್ರೀತಿಸಾಗರ ಎಂದರು. ಪರಿಮಳಸತೀಶ್, ಪಾರ್ವತಿರಾಜ್,ರತ್ನಬಡವನಹಳ್ಳಿ ಇನ್ನಿತರರ ಕವನಗಳು ಮನಮಿಡಿಯುವಂತಿದ್ದವು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಅಮೋಘಂ ಎಂದೇ ಪ್ರಸಿದ್ಧರಾದ ವಿದ್ವಾಂಸ ಕವಿ ಮೋಹನ್ಕುಮಾರ್ ಕಾವ್ಯಕುರಿತಂತೆ ಮಾತನಾಡುತ್ತಾ ಕವಿಗಳಾದವರು ಜೀವನಪ್ರೀತಿ ಮತ್ತು ಪ್ರಕೃತಿಪ್ರೇಮದ ಒಳಹೊರಗನ್ನು ನೋಡುವ ಸೂಕ್ಷ್ಮದೃಷ್ಠಿಕೋನ ಬೆಳೆಸಿಕೊಳ್ಳಬೇಕು ಎಂದು ತಿಳಿಸುತ್ತಾ ಕವನ ವಾಚನದ ಅಭಿವ್ಯಕ್ತಿಯೂ ಒಂದು ಕಲೆ ಎಂದರು.
ಮುಖ್ಯತಿಥಿಗಳಾಗಿ ಭಾಗವಹಿಸಿದ್ದ ರತ್ನಬಡವನಹಳ್ಳಿ ಅವರು ಮಾತನಾಡುತ್ತಾ ಹೆಣ್ಣು ಮಕ್ಕಳ ನಡುವೆ ಹೆಚ್ಚಿನ ಸಾಮರಸ್ಯ ಮೂಡಿದಾಗ ಮಾತ್ರ ಹೆಣ್ಣುಕುಲ ಉಳಿದುಬೆಳೆಯಲು ಸಾಧ್ಯ ಎಂದು ತಿಳಿಸುತ್ತ ಇಂದು ಬಾಲಕಿಯರ ಮೇಲೆ ನಡೆಯುವ ಅತ್ಯಾಚಾರ, ದೌರ್ಜನ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರೂ ಜಾಗೃತರಾಗಬೇಕೆಂದರು.
ಕಾರ್ಯಕ್ರಮವನ್ನು ಕಮಲಾಬಡ್ಡಿಹಳ್ಳಿ ಸ್ವಾಗತಿಸಿ ಪ್ರಾಸ್ತಾವಿನುಡಿಗಳನ್ನಾಡಿದರು.ಕವಯಿತ್ರಿ ಮಂಜುಳಾದೇವಿ ಕಾರ್ಯಕ್ರಮ ನಿರೂಪಿಸಿದರು ರತ್ನಬಡವನಹಳ್ಳಿ ಪ್ರಾರ್ಥಿಸಿದರು.ಸುಮಬೆಳಗೆರೆ ವಂದಿಸಿದರು.ಕಾರ್ಯಕ್ರಮದಲ್ಲಿ ಜಯರಾಮಚಂದ್ರು , ಮೇಘರಾಜ್ , ಮಂಜುನಾಥ್ , ಅವೀನ್ , ಲಕ್ಷ್ಮಿ , ಇನ್ನಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
