ತುಮಕೂರು
ಪಾವಗಡ ತಾಲ್ಲೂಕಿನ ನಾಗಲಮಡಿಕೆಯಲ್ಲಿ ಇದೇ ಅಕ್ಟೋಬರ್ 16ರಂದು ರೈತ ಮಹಿಳಾ ಸಮಾವೇಶ? ವನ್ನು ಆಯೋಜಿಸಲಾಗಿತ್ತು . ಈ ಸಮಾವೇಶವನ್ನು ಭೂಶಕ್ತಿ ಕೇಂದ್ರ, ಆದಿಜನ ಪಂಚಾಯಿತಿ, ಸಹಜ ಬೇಸಾಯ ಶಾಲೆ, ಕರ್ನಾಟಕ ರೈತ ಸಂಘ ? ಈ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ವಿಶ್ವದೆಲ್ಲೆಡೆ ಅಕ್ಟೋಬರ್ 15 ರಂದು ಆಚರಿಸಲ್ಪಟ್ಟ ?ಗ್ರಾಮೀಣ ಮಹಿಳಾ ದಿನ? ಹಾಗೂ ಭಾರತ ಸರ್ಕಾರವು 2017ರಲ್ಲಿ ಈ ದಿನವನ್ನು ಮಹಿಳಾ ರೈತರು ಕೃಷಿ ಕ್ಷೇತ್ರಕ್ಕೆ ಮತ್ತು ದೇಶದ ಪ್ರಗತಿಗಾಗಿ ನೀಡಿರುವ ಕೊಡುಗೆಗೆ ಮಾನ್ಯತೆ ನೀಡಿ ?ಮಹಿಳಾ ರೈತರ ದಿನ? ಎಂದು ಘೋಷಿಸಿ ಆಚರಿಸಲ್ಪಟ್ಟಿದೆ. ಇದರ ಅಂಗವಾಗಿ ಈ ?ರೈತ ಮಹಿಳಾ ಸಮಾವೇಶ? ವನ್ನು ಹಮ್ಮಿಕೊಳ್ಳಲಾಗಿತ್ತು.
ಭೂಶಕ್ತಿ ಕೇಂದ್ರದ ಜ್ಯೋತಿರಾಜ್ರವರು ಭೂಶಕ್ತಿ ಪೂಜೆ ಮಾಡುವುದರೊಂದಿಗೆ ತಮ್ಮ ಪ್ರಾಸ್ತಾವಿಕ ನುಡಿಯನ್ನು ಮಾತನಾಡುತ್ತಾ – ನಮಗೆ ಆದಿಜನರ ಮತ್ತು ನಮ್ಮ ಪೂರ್ವಿಕರ ಆಶೀರ್ವಾದ ಬೇಕು. ಹೋದ ವರ್ಷ ಅಕ್ಟೋಬರ್ 15ರಂದು ?ರೈತ ಮಹಿಳಾ ದಿನ? ಆಚರಿಸಲಾಗಿತ್ತು. ಈ ವರ್ಷ ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ?ಗ್ರಾಮೀಣ ಮಹಿಳೆಯರ ದಿನ ? ಎಂದು ಆಚರಿಸಲಾಗಿದೆ. ನಮ್ಮ ಹೆಣ್ಣು ಮಕ್ಕಳ ಹೆಸರಿನಲ್ಲಿ ಭೂಮಿ ಬೇಕು ಹಾಗೂ ರೈತ ಮಹಿಳೆಯರಿಗೆ ಗುರುತಿನ ಚೀಟಿ ಕೊಡಬೇಕೆಂದು ಸರ್ಕಾರಕ್ಕೆ ಒತ್ತಾಯ ತರುತ್ತಿದ್ದೇವೆ.
ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯಗಳು, ಅತ್ಯಾಚಾರಗಳು ನಿರಂತರವಾಗಿ ನಡೆಯುತ್ತಿವೆ. ಇದರಿಂದ ನಮ್ಮ ಹೆಣ್ಣು ಮಕ್ಕಳು ದಿಕ್ಕು ತೋಚದೆ ಮಾನಸಿಕವಾಗಿ ಕುಂದು ಹೋಗಿದ್ದಾರೆ. ಇವುಗಳಿಂದ ಹೊರ ಬರಬೇಕೆಂದರೆ ಅವರ ಹೆಸರಿನಲ್ಲಿ ಭೂಮಿ ಬೇಕು. ಭೂಮಿ ಇದ್ದರೆ ಅವರ ಜೀವನಕ್ಕೆ ಆಧಾರವಾಗುತ್ತದೆ. ಹೆಣ್ಣು ಮಕ್ಕಳಿಗೆ ಭೂಮಿ ಕೊಟ್ಟರೆ ಭೂಮಿಯನ್ನು ಅವರು ಎಂದಿಗೂ ಪರಭಾರೆ ಮಾಡುವುದಿಲ್ಲ, ಅವರ ಕೈಯಲ್ಲಿ ಭೂಮಿ ಭದ್ರವಾಗಿರುತ್ತದೆ. ಭೂಮಿ ಹೊಂದಿಲ್ಲದಿದ್ದರೂ ಯಾವುದೇ ರೀತಿಯ ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ಅಂದರೆ ಕೋಳಿ ಸಾಕಣೆ, ದನ ಸಾಕಣೆ, ಹೊಲಗಳಲ್ಲಿ ಕೂಲಿ ಕೆಲಸ ಮಾಡುವ ಎಲ್ಲಾ ಮಹಿಳೆಯರೂ ರೈತ ಮಹಿಳೆಯರೇ ಆಗಿದ್ದಾರೆ ಎಂದರು.
ಸಹಜ ಬೇಸಾಯ ಶಾಲೆಯ ಶ್ರೀ ಯತಿರಾಜ್ರವರು ಮಾತನಾಡಿ ಶೇಕಡ 14ರಷ್ಟು ಮಹಿಳೆಯರಿಗೆ ಮಾತ್ರ ಭೂಮಿಯ ಒಡೆತನ ಸಿಕ್ಕಿದೆ. ಇನ್ನುಳಿದ ಶೇಕಡ 86ರಷ್ಟು ಮಹಿಳೆಯರು ಭೂಹೀನರಾಗಿದ್ದಾರೆ. ಶೇಕಡ 80ರಷ್ಟು ಕೃಷಿ ಕೆಲಸಗಳನ್ನು ಮಾಡುತ್ತಿರುವವರು ಮಹಿಳೆಯರೇ ಆಗಿದ್ದಾರೆ. ಮಹಿಳೆಯರು ಕೃಷಿ, ಹೈನುಗಾರಿಕೆ, ಕೋಳಿ ಸಾಕಣೆ, ಮುಂತಾದುವುಗಳನ್ನು ಮಾಡುತ್ತಿದ್ದಾರೆ. ವೈಜ್ಞಾನಿಕ ಕೃಷಿ ಹೆಸರಿನಲ್ಲಿ ದೇಸಿತನವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ಈಗಾಗಲೇ ಆಂಧ್ರಪ್ರದೇಶದ ಸರ್ಕಾರ ಸಹಜ ಬೇಸಾಯ ಪದ್ಧತಿಯನ್ನು ತನ್ನ ಕೃಷಿ ಪದ್ಧತಿಯಲ್ಲಿ ಅಳವಡಿಸಿಕೊಂಡಿದೆ. ಕರ್ನಾಟಕ ಸರ್ಕಾರವೂ ಸಹ ಸಹಜ ಬೇಸಾಯ ಪದ್ಧತಿಯನ್ನು ಅನುಸರಿಸಲು ಚಿಂತನೆ ನಡೆಸುತ್ತಿದೆ. ಎಂಬುದಾಗಿ ಸಹಜ ಬೇಸಾಯ ಪದ್ಧತಿಯ ಅನಿವಾರ್ಯತೆ ಹಾಗೂ ಮಹತ್ವವನ್ನು ತಿಳಿಸಿದರು.
ಸಹಜ ಬೇಸಾಯ ಶಾಲೆಯ ಶ್ರೀಮತಿ ಇಂದ್ರಮ್ಮ ಅವರು ಮಾತನಾಡಿ ಇದೊಂದು ಅಭೂತಪೂರ್ವವಾದ ಸಮಾವೇಶ. ಇದಕ್ಕೆ ಬಹಳ ದೊಡ್ಡ ಅರ್ಥವಿದೆ ಎಂದರು. ಯಾವುದೇ ಕೃಷಿ ಕೆಲಸಗಳಲ್ಲಿ ತೊಡಗಿದ ಮಹಿಳೆಯರೆಲ್ಲರೂ ರೈತ ಮಹಿಳೆಯರೇ ಆಗಿದ್ದಾರೆ. ಭೂಮಿ ಹಸನು ಮಾಡುವುದು, ಬಿತ್ತನೆ ಕೆಲಸ, ಕಳೆ ತೆಗೆಯುವುದು, ಒಕ್ಕಣೆ ಮಾಡುವುದೆಲ್ಲ ಮಹಿಳೆಯರೇ ಆಗಿದ್ದಾರೆ. ಆದರೆ ಮಾರುಕಟ್ಟೆಗೆ ತೆಗೆದುಕೊಂಡು ಹೋಗುವುದು ಮಾತ್ರ ಪುರುಷರು. ಆದರೆ ಇದಾಗಬಾರದು. ನಮ್ಮ ರೈತ ಮಹಿಳೆಯರೇ ಮಾರುಕಟ್ಟೆಗೆ ಹೋಗಿ ತಾವು ಕಷ್ಟಪಟ್ಟು ಬೆಳೆದಂತಹ ಬೆಳೆಗಳನ್ನು ಮಾರುವಂತಾಗಬೇಕು. ಸಹಜ ಬೇಸಾಯದ ಮೂಲಕ ನಾವುಗಳು ಕೃಷಿ ಮಾಡಿ ನಮ್ಮ ಆರೋಗ್ಯವನ್ನು ಕಾಪಡಿಕೊಳ್ಳಬೇಕೆಂದು ಹೇಳಿದರು.
ಆದಿಜನ ಪಂಚಾಯಿತಿಯ ಸಂಯೋಜಕರಾದ ಶ್ರೀಮತಿ ಹನುಮಕ್ಕ ಅವರು ಮನವಿ ಪತ್ರವನ್ನು ಓದಿ ನಂತರ ಅಮ್ಮಾಜಿ ಜ್ಯೋತಿರವರು, ಶ್ರೀಮತಿ ಇಂದ್ರಮ್ಮರವರು ಹಾಗೂ ಶ್ರೀಮತಿ ಜಯಮ್ಮ ಅವರುಗಳೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶ್ರೀ. ಶಿವಕುಮಾರಯ್ಯರವರು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಪಾವಗಡ ಇವರಿಗೆ ಕೊಡಲಾಯಿತು. ನಂತರ ಅವರು ಮನವಿ ಪತ್ರವನ್ನು ಇಂದೇ ತಹಶೀಲ್ದಾರ್ರವರ ಮೂಲಕ ಜಿಲ್ಲಾಧಿಕಾರಿಯವರಿಗೆ ಇಂದೇ ತಲುಪಿಸುತ್ತೇವೆ ಎಂದು ಹೇಳಿದರು ಹಾಗೂ ನಿಮ್ಮ ಹೋರಾಟ ಯಶಸ್ವಿಯಾಗಲೆಂದು ಆಶಿಸಿದರು.
ಶ್ರೀ ಹನುಮಂತರಾಜುರವರು ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ ಇವರು ಮಾತನಾಡಿ ಹಾಗೂ ತಮ್ಮ ಇಲಾಖೆಯಿಂದ ರೈತರಿಗೆ ಬಿತ್ತನೆಬೀಜ, ಸುಧಾರಿತ ಕೃಷಿ ಉಪಕರಣಗಳು, ಕೃಷಿ ಹೊಂಡ, ಉದ್ಯೋಗ ಖಾತರಿ ಇನ್ನು ಮುಂತಾದ ಯೋಜನೆಗಳ ಬಗ್ಗೆ ವಿವರಿಸಿದರು. ನಂತರ ನಾಗಲಮಡಿಕೆ ಹೋಬಳಿಯ ಹತ್ತು ಜನ ಹಿರಿಯ ರೈತ ಮಹಿಳೆಯರಿಗೆ ದೇಸಿ ಬೀಜ ತುಂಬಿದ ಕುಡಿಕೆಗಳನ್ನು ನೀಡುವುದರ ಮೂಲಕ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಹೆಚ್.ಎ.ಸುಧಾಕರ್ರವರು ತೋಟಗಾರಿಕಾ ಇಲಾಖೆ, ಶ್ರೀ. ರಾಮಲಿಂಗಯ್ಯ ತಾಲ್ಲೂಕು ಸಂಯೋಜಕರು, ಆದಿಜನ ಪಂಚಾಯಿತಿ. ಶ್ರೀ.ನಾಗರಾಜುರವರು ಆದಿಜನ ಪಂಚಾಯಿತಿ ಪಾವಗಡ ? ಇವರುಗಳು, ರೆಡ್ಸ್ ಹಾಗೂ ಆದಿಜನ ಪಂಚಾಯಿತಿಯ ಸಂಚಾಲಕರು, ಸಂಯೋಜಕರುಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ನಾಗಲಮಡಿಕೆ ಹೋಬಳಿಯ ರೈತರು ಮತ್ತು ಮಹಿಳಾ ರೈತರು ಭಾಗವಹಿಸಿದ್ದರು. ಈ ಸಮಾವೇಶದ ವಿಶೇಷವೆಂದರೆ ಶೇಕಡ 80 ರಷ್ಟು ಮಹಿಳಾ ರೈತರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
