ಹಾವೇರಿ:
ಸರಕಾರಿ ಹಾಗೂ ಅನುದಾನಿತ ಶಾಲೆಯ ಮಕ್ಕಳಿಗೆ ಅನ್ನ ನೀಡುವ ಬಿಸಿಯೂಟ ತಾಯಂದಿರುವ, ಮತ್ತೊಂದೆಡೆ ಅನ್ನಕ್ಕಾಗಿ ಹೋರಾಟ ಮಾಡುವ ದುಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿರುವದು ದುರಾದುಷ್ಟಕರ ನೆಹರೂ ಓಲೇಕಾರ ಕಳವಳ ವ್ಯಕ್ತಪಡಿಸಿದರು.
ಭಾನವಾರ ನಗರದ ಜಿಲ್ಲಾ ಗುರುಭವನದಲ್ಲಿ ನಡೆದ, ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ (ಎಐಟಿಯುಸಿ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಡೆದ 4 ನೇ ಜಿಲ್ಲಾ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಅಕ್ಷರ ದಾಸೋಹ ಯೋಜನೆ ಸೇರಿದಂತೆ, ಇತರೆ ಯೋಜನೆಗಳಲ್ಲಿ ಡಿ ದರ್ಜೆಯ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ಬಡ ಮಹಿಳೆಯರ ಕಷ್ಟ, ಸರಕಾರದ ಗಮನಕ್ಕೆ ಬರುತ್ತಿಲ್ಲ. ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಕಳ ಹಂತದಲ್ಲಿ ಕಾರ್ಯ ನಿರ್ವಹಿಸುವ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಸಮಸ್ಯೆಗಳು ಅರ್ಥವಾಗುತ್ತಿಲ್ಲ. ನಿಮ್ಮ ಸಮಸ್ಯೆಗಳನ್ನು ಸಧನದಲ್ಲಿ ಚರ್ಚೆ ಮಾಡುವ ಮಾಡುವ ಮೂಲಕ ಸರಕಾರಿ ಸೌಲಭ್ಯ ಒದಗಿಸುವಂತೆ ಸರಕಾರವನ್ನು ಒತ್ತಾಯಿಸುವೆ ಎಂದು ತಿಳಿಸಿದರು.
ಇಂದು ಹೋರಾಟ ಮಾಡದೇ, ಯಾವುದನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಹೋರಾಟ ಮಾಡಿದಾಗ ಮಾತ್ರ ಆಡಳಿತ ನಡೆಸುವ ಸರಕಾರಗಳು ಗಮನ ಹರಿಸುತ್ತವೆ. ಆದ್ದರಿಂದ ಹೆಚ್ಚು ಸಂಘಟಿತರಾಗುವ ಮೂಲಕ ವೇತನ ಹಾಗೂ ಸೇವಾ ಭದ್ರತೆಯನ್ನು ಪಡೆದುಕೊಳ್ಳಿ. ನಿಮ್ಮ ನ್ಯಾಯಯುತ ಹೋರಾಟಕ್ಕೆ ಯಾವಾಗಲೂ ತಾವು ಜೊತೆಗೆ ನಿಲ್ಲುತ್ತೇವೆ. ಬಿಸಿಯೂಟದ ಮೂಲಕ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿತ್ತಿರುವ ನಿಮಗೆ ಸರಕಾರ ಕನಿಷ್ಠ ಸೌಲಭ್ಯ ನೀಡಲಿ ಎಂಬ ಆಶಯ ನಮ್ಮದಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಸಮಾವೇಶದಲ್ಲಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ವೇದಿಕೆಯಲ್ಲಿದ್ದ, ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣನವರ, ಎಐಟಿಯುಸಿ ಗೌರವಾಧ್ಯಕ್ಷ ಕಾ.ಎಚ್.ಕೆ. ರಾಮಚಂದ್ರಪ್ಪ, ಬಿಸಿಯೂಟ ತಯಾರಕರ ಸಂಘಟನೆಯ ರಾಜ್ಯಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ, ಕಾರ್ಯದರ್ಶಿ ಆವರಗೇರಿ ಚಂದ್ರ, ಮಾತನಾಡಿದರು.
ಸಮಾವೇಶದಲ್ಲಿ ಇಪ್ಟಾ ಕಲಾವಿದರು ಕ್ರಾಂತಿ ಗೀತೆ ಹಾಡಿದರು. ಸಮಾವೇಶದಲ್ಲಿ ಜಿಲ್ಲಾ ಮುಖಂಡರಾದ ಜಿ.ಡಿ.ಪೂಜಾರ, ಲಲಿತಾ ಬುಶೇಟ್ಟಿ, ರೇಖಮ್ಮ ದನ್ನೂರ, ಸರೋಜಮ್ಮ ಹಿರೇಮಠ, ರಾಜೇಶ್ವರಿ ದೊಡ್ಡಮನಿ, ಲತಾ ಹಿರೇಮಠ, ಫಾತೀಮಾ ಬೋಗಾವಿ, ನಿರ್ಮಲಾ ಬಂಕಾಪುರಮಠ ಸೇರಿದಂತೆ ಮುಂತಾದವರು ಹಾಜರಿದ್ದರು. ವಿಜಯಕುಮಾರ ದೊಡ್ಡಮನಿ ಸ್ವಾಗತಿಸಿ, ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
