ದೊಡ್ಡೇರಿ ಹಾಲಿನ ಡೈರಿಯ ಕರ್ಮಕಾಂಡ

 ದೊಡ್ಡೇರಿ:


ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 ಮತ್ತು 1960 ರ ಉಪನಿಯಮದ ಪ್ರಕಾರ 31-03-1978 ರಲ್ಲಿ ಮಧುಗಿರಿ ತಾಲ್ಲೂಕು, ದೊಡ್ಡೇರಿ ಗ್ರಾಮದಲ್ಲಿ ಹಾಲು ಉತ್ಪ್ಪಾದಕರ ಸಹಕಾರ ಸಂಘ ಪ್ರಾರಂಭವಾಯಿತು. ಸುಮಾರು 32 ವರ್ಷಗಳ ಕಾಲ ಸತತವಾಗಿ ಸಿಡದರಗಲ್ಲು, ದಂಡಿನದಿಬ್ಬ, ಗಿರಿಗೊಂಡನಹಳ್ಳಿ, ಭೂತನಹಳ್ಳಿ, ಉಮ್ಮನಹಳ್ಳಿ, ಆಪನಹಳ್ಳಿ ಹಾಗೂ ಚಂದ್ರಗಿರಿ ಇನ್ನು ಇತರೆ ಹಲವಾರು ಗ್ರಾಮಗಳಿಂದ ರೈತರುಗಳು ಹಾಲು ತಂದು ಹಾಕುತಿದ್ದರು.

       ಹೀಗಾಗಿ ಹೋಬಳಿಯಲ್ಲಿಯೆ ದೊಡ್ಡ ಡೈರಿ ಎಂದು ಜಿಲ್ಲೆಯಲ್ಲಿ ಹೆಸರು ಪಡೆದು, ಸಾವಿರಾರು ಹಾಲು ಉತ್ಪಾದಕ ರೈತರುಗಳು ಹಾಗೂ ಪ್ರತಿ ಗ್ರಾಮದ ಸದಸ್ಯರುಗಳೂ 101 ರೂ.ಗಳನ್ನು ಸಂಘಕ್ಕೆ ಕಟ್ಟಿ ನೋಂದಾಯಿಸಿ ಸದಸ್ಯತ್ವ ಪಡೆದುಕೊಂಡಿದ್ದರು. ಆಗಿನ ಅಧ್ಯಕ್ಷ ಮಿಲ್ ರಾಜಣ್ಣನವರು ಮತ್ತು  ಹಾಲು ಹಾಕಿರುವ ರೈತರಿಗೆ ಬೋನಸ್ ಹಣವನ್ನು ವಿತರಿಸದೆ, ಹಾಲು ಹಾಕುವ ವರ್ತಕರಿಂದ ಅನುಮತಿ ಪಡೆದುಕೊಂಡು ಓಳ್ಳೆಯ ಕಟ್ಟಡವನ್ನು ಕಟ್ಟಿಸಿದ್ದರು. 2009-10 ರವರೆಗೆ ಸಂಘವು ಯಾವುದೇ ಭ್ರಷ್ಟ್ಟಾಚಾರವಿಲ್ಲದೆ ನಡೆದುಕೊಂಡು ಬಂದಿದ್ದು ಸರಿಯಷ್ಟೆ.

         2009-10ರಲ್ಲಿ ಬಂದಂತಹ ನೂತನ ಕಾರ್ಯಕಾರಿ ಮಂಡಳಿಯು ತನ್ನ ಜಾತಿಗಳ ಪ್ರತಿಷ್ಠೆಗಾಗಿ ಅಧ್ಯಕ್ಷರಾದ ಜಯಣ್ಣ ಇವರು ರೈತರಿಂದ ಬಾಗಿಲು ಮುಚ್ಚಿಸುವ ಪರಿಸ್ಥಿತಿ ನಿರ್ಮಾಣವಾಗಿ, ಸುಮಾರು 5 ವರ್ಷಗಳ ಕಾಲ ಬಾಗಿಲು ಮುಚ್ಚಿತ್ತು. ಯಾರೂ ಸಹ ಡೈರಿ ಪುನರ್ ಪ್ರಾರಂಭಿಸಲು ಮುಂದೆ ಬಾರಲಿಲ್ಲ. ಮೇಲ್ಕಂಡ ಗ್ರಾಮಗಳಲ್ಲಿ ನೂತನವಾಗಿ ಡೈರಿ ಪ್ರಾರಂಭವಾದ ಬಳಿಕ ಕೆಲವು ಗ್ರಾಮದ ಹಾಲು ಉತ್ಪ್ಪಾದಕರು ಆಯ ಗ್ರಾಮಗಳಲ್ಲೆ ಡೈರಿಗೆ ಹಾಲು ಹಾಕುತಿದ್ದರು. ದೊಡ್ಡೇರಿ, ಭೂತನಹಳ್ಳಿ, ಉಮ್ಮನಹಳ್ಳಿ, ದಂಡಿನದಿಬ್ಬ, ಲಕ್ಷ್ಮೀಪುರ, ಗಿರಿಗೊಂಡನಹಳ್ಳಿ, ಇತರೆ ಗ್ರಾಮಗಳ ಗ್ರಾಮಸ್ಥರು ದೊಡ್ಡೇರಿ ಡೈರಿಗೆ ಹಾಲು ಹಾಕುತಿದ್ದರು.

       ದೊಡ್ಡೇರಿ ಡೈರಿ ನಿಲ್ಲಿಸಿದ ಪರಿಣಾಮ ದಂಡಿನದಿಬ್ಬ ಮತ್ತು ಲಕ್ಷ್ಮೀಪುರ ಗ್ರಾಮದಲ್ಲಿ ನೂತನ ಡೈರಿ ಪ್ರ್ರಾರಂಭವಾಯಿತು. ದೊಡ್ಡೇರಿಯ ಗ್ರಾಮಸ್ಥರು ಖಾಸಗಿ ಡೈರಿಗಳಿಗೆ ಮತ್ತು ಅಕ್ಕ ಪಕ್ಕದ ಊರುಗಳ ಡೈರಿಗೆ ಹಾಲನ್ನು ತೆಗೆದುಕೊಂಡು ಹೋಗಿ ಮಾರಾಟ ಮಾಡುತಿದ್ದರು. ಇದನ್ನು ತಿಳಿದ ಪ್ರಜ್ಞಾವಂತ ಗ್ರಾಮಸ್ಥರುಗಳು ದಲಿತ ಸಂಘಟನೆ, ಮಹಿಳಾ ಸಂಘಟನೆ ಮತ್ತು ಗ್ರಾಮದ ಮುಖಂಡರುಗಳ ಸಮ್ಮುಖದಲ್ಲಿ 2013 ರಿಂದ ಪ್ರಾರಂಭ ಹಂತದಿಂದ ಹೋರಾಟ ರೂಪಿಸಿಕೊಂಡು ಹಂತ ಹಂತವಾಗಿ ಹೋರಾಟ ಮಾಡಿ, ಅಕ್ಟೋಬರ್ 2013 ರಲ್ಲಿ ಡೈರಿ ಪುನರ್ ಆರಂಭವಾಗಿ 5 ವರ್ಷ ಕಳೆದರೂ ಯಾವುದೇ ವಾರ್ಷಿಕ ಸರ್ವ ಸದಸ್ಯರ ಸಭೆ ನಡೆಸದೆ, ಸಾರ್ವಜನಿಕರಿಗೆ ತಿಳಿವಳಿಕೆ ನೀಡಿರುವುದಿಲ್ಲ ಎಂದು ಮಾಜಿ ಸದಸ್ಯರಾದ ಶಿವಲಿಂಗಪ್ಪ, ಡಿ.ಎಲ್.ರಾಮಯ್ಯ ಆರೋಪಿಸಿರುತ್ತಾರೆ.

        ಅಲ್ಲದೆ ಏಕಾಏಕಿ ಮನಸಾ ಇಚ್ಚೆ ಮತದಾರರ ಪಟ್ಟಿಯನ್ನು ತಯಾರಿಸಿ, ಚುನಾವಣೆ ಅಧಿಸೂಚನೆ ಹೊರಡಿಸಿ, ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳು ನಾಮಪತ್ರವನ್ನು ನವೆಂಬರ್ 01 ರ ಗುರುವಾರದಿಂದ ಸಲ್ಲಿಸಿ, ನವೆಂಬರ್ 04 ರ ಭಾನುವಾರ ಮಧ್ಯಾಹ್ನ 2 ಘಂಟೆಗೆ ನಾಮ ಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು. ಆದರೆ ಅಂದು 02 ಘಂಟೆ ಸಮಯದ ನಂತರ ಕೆಲವು ಮಹಿಳಾ ಸದಸ್ಯರುಗಳ ನಾಮಪತ್ರಗಳನ್ನು ಬಲತ್ಕಾರದಿಂದ ಮೂರು ಘಂಟೆ ಸಮಯದಲ್ಲಿ ಮಹಿಳಾ ಅಭ್ಯರ್ಥಿಗಳನ್ನು ಸ್ಥಳಕ್ಕೆ ಕರೆಸದೆ, ಅವರ ಗಂಡದಿರ ಕಡೆಯಿಂದ ವಾಪಸ್ ತೆಗೆಸಿರುತ್ತಾರೆ.

       ಇದನ್ನು ಮನಗಂಡ ಗ್ರಾಮಸ್ಥರಾದ ಮೊಹನ್ ಕುಮಾರ್, ಮಂಜುನಾಥ, ಕೆಂಚಪ್ಪ, ಇತರರು ರಿಟರ್ನಿಂಗ್ ಆಫೀಸರ್‍ರಾದ ಎನ್ .ಹೆಚ್ ಪರಶುರಾಮ್ ರವರನ್ನು ಪ್ರಶ್ನೆ ಮಾಡಿದ್ದಾರೆ. ಅಧಿಕಾರಿಗಳು ಅಧಿಕೃತವಾಗಿ ಚುನಾವಣೆ ಘೋಷಿಸಿ ಅವಿರೋಧವಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳನ್ನು ಹೊರತು ಪಡಿಸಿ ಉಳಿದ ಅಭ್ಯರ್ಥಿಗಳಿಗೆ ಚಿಹ್ನೆಯನ್ನು ಸಹ ನೀಡಿ ನಾಮ ಫಲಕದಲ್ಲಿ ಪ್ರಕಟಿಸಿ, ಒಂದು ದಿನ ಕಳೆದ ಮೇಲೆ ರಿಟರ್ನಿಂಗ್ ಆಫೀಸರ್ ಮತ್ತು ಕಾರ್ಯದರ್ಶಿ ಸೇರಿ, ನವೆಂಬರ್ 05 ರ ಸೋಮವಾರ ರಾತ್ರಿ ಸುಮಾರು 8 ಘಂಟೆಯ ಸಮಯದಲ್ಲಿ ಹಾಲಿನ ಡೈರಿಯ ಕಚೇರಿಗೆ ಬಂದು ಕೆಲ ಅಭ್ಯರ್ಥಿಗಳಿಂದ ಖಾಲಿ ಪತ್ರಕ್ಕೆ ಸಹಿ ಪಡೆದಿದ್ದಾರೆ.

       ಆಗ ರಾತ್ರಿಯ ವೇಳೆಯಲ್ಲಿ ಏಕೆ ಕಚೇರಿಗೆ ಬಂದಿದ್ದೀರಿ? ಉಳಿದ ಅಭ್ಯರ್ಥಿಗಳಿಂದ ಖಾಲಿ ಪತ್ರಕ್ಕೆ ಏಕೆ ಸಹಿ ಹಾಕಿಸಿಕೊಂಡಿರುತ್ತೀರಿ ಎಂದು ಸ್ಪರ್ಧಾ ಕಣದಲ್ಲಿರುವ ಶಿವರಾಮಯ್ಯ, ಪುಟ್ಟಯ್ಯ ಅಲ್ಲದೆ ಇತರೆ ಸಾರ್ವಜನಿಕರಾದ ಡಿ.ಎಲ್ ನರಸಿಂಹಮೂರ್ತಿ, ಎಂ.ಎಂ ಮೂರ್ತಿ, ಬಸವರಾಜು, ಡಿ.ಎಂ ದಾಸಪ್ಪ ಇತರರು ಪ್ರಶ್ನಿಸಿದಾಗ ಅಧಿಕಾರಿಗಳು ಹೇಳದೆ ಕೇಳದೆ ಹೊರಟು ಹೋಗಿರುತ್ತಾರೆ ಎಂದು ತಿಳಿದು ಬಂದಿದೆ.
ಇದನ್ನು ಮನಗಂಡ ಸಾರ್ವಜನಿಕರು ಮತ್ತು ಗ್ರಾಮಸ್ಥರು ರಿಟರ್ನಿಂಗ್ ಆಫೀಸರ್ ಎನ್.ಎಚ್.ಪರಶುರಾಮ್ ಹಾಗೂ ಕಾರ್ಯದರ್ಶಿಯ ಮೇಲೆ ಸುಮಾರು 150 ಜನರ ಸಹಿಯುಳ್ಳ ಅರ್ಜಿಯನ್ನು ನವೆಂಬರ್ 7 ರ ಬುಧವಾರ ಜಿಲ್ಲಾ ಅಧಿಕಾರಿಗಳಿಗೆ ದೂರು ಸಲ್ಲಿಸಿರುತ್ತಾರೆ. ಇದನ್ನು ತಿಳಿದ ಕಾರ್ಯದರ್ಶಿ ಹಾಲು ಹಾಕುವ ಫಲಾನುಭವಿಗಳ ಮನೆ ಮನೆಗೆ ತೆರಳಿ ನವೆಂಬರ್ 08 ರ ಗುರುವಾರದಂದು ಬಲವಂತದಿಂದ ಸಹಿಯನ್ನು ಪಡೆಯುತ್ತಿದ್ದಾರೆ ಎಂದು ಸಾರ್ವಜನಿಕರಾದ ಲಕ್ಷ್ಮೀನರಸಪ್ಪ, ಕಾಂತರಾಜು, ಜಿ.ಹಟ್ಟಿ ಕುಮಾರ್, ಪುಟ್ಟಪ್ಪ, ಕು.ಬಸಪ್ಪ, ರಮೇಶ್, ಕಾಟಪ್ಪ, ಹಾಗೂ ಇತರರು ತಿಳಿಸಿರುತ್ತಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link