ಬೆಂಗಳೂರು
ಮೈಸೂರು ಜಿಲ್ಲೆಯ ಬಲ್ಲೆ ಆನೆ ಶಿಬಿರದಿಂದ ತಪ್ಪಿಸಿಕೊಂಡಿದ್ದ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊತ್ತು ಸಾಗುವ ಪ್ರಸಿದ್ಧಿಯ ಆನೆ ಅರ್ಜುನನ್ನು ಪತ್ತೆಹಚ್ಚಿ ಮತ್ತೆ ಶಿಬಿರಕ್ಕೆ ಮರಳಿ ತರಲಾಗಿದೆ.
ಸರಪಳಿಗಳನ್ನು ಬಿಡಿಸಿಕೊಂಡು ಕಳೆದ ಬುಧವಾರ ರಾತ್ರಿ ಈ ಆನೆ ಶಿಬಿರದಿಂದ ತಪ್ಪಿಸಿಕೊಂಡಿತ್ತು, ನಿನ್ನೆಯೂ ಸಹ ಶಿಬಿರಕ್ಕೆ ವಾಪಾಸಾಗಿರಲಿಲ್ಲ. ಈ ಮಧ್ಯೆ ಅಂತರಸಂತೆ ಅರಣ್ಯ ಪ್ರದೇಶದಲ್ಲಿ ಆನೆಯನ್ನು ಕಂಡ ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು, ಆಗ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಆನೆಯನ್ನು ಹಿಡಿದು ಮತ್ತೆ ಶಿಬಿರಕ್ಕೆ ಕರೆತಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/11/1200px-Arjuna_Entering_The_.gif)