ಹರಿಹರ:
ಕ್ಷೇತ್ರದ ಮಾಜಿ ಶಾಸಕರುಗಳಂತೆ ದುರಹಂಕಾರದ ಆಡಳಿತ, ಮುಸುಕಿನ ಆಡಳಿತ ಮಾಡುವುದಿಲ್ಲ ನನ್ನದೇನಿದ್ದರೂ ಸ್ವಚ್ಛ,ಸರಳ ಆಡಳಿತ ಎಂದು ಶಾಸಕ ಎಸ್ ರಾಮಪ್ಪ ಹೇಳಿದರು.
ನಗರದ ಡಾ ನಾಗಪ್ಪ ಆಶ್ರಯ ಬಡಾವಣೆಯಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ದಿವಂಗತ ಪ್ರಧಾನಿ ಇಂದಿರಾ ಗಾಂಧಿಯವರ 101ನೇ ಜಯಂತಿ ಆಚರಣೆಯನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಸಿ ಮಾತನಾಡಿದ.ದಿ.ಪ್ರಧಾನಿ ಇಂದಿರಾ ಗಾಂಧಿಯವರು ವಿಶ್ವವನ್ನೇ ನಮ್ಮ ಭಾರತದ ಕಡೆ ನೋಡುವಂತೆ ಮಾಡಿದ ಮಹಿಳೆಯಾಗಿದ್ದು ,ಅವರು ದೇಶದ ಉಕ್ಕಿನ ಮಹಿಳೆ ಎಂದೇ ಪ್ರಖ್ಯಾತಿ ಹೊಂದಿದ್ದರು.
ಅವರ ಅಧಿಕಾರಾವಧಿಯ ಸಂದರ್ಭದಲ್ಲಿ ತಾಲಿಬಾನ್ ಉಗ್ರರನ್ನು ಹತ್ತಿಕ್ಕಿದ ಧೀರ ಮಹಿಳೆಯಾಗಿದ್ದರು ಮತ್ತು ಉಳುವವನೇ ಭೂಮಿಗೆ ಒಡೆಯ ಎಂಬ ಕಾಯ್ದೆಯನ್ನು ಜಾರಿಗೆ ತಂದ ದಿಟ್ಟ ಮಹಿಳೆಯಾಗಿದ್ದರು.ಎಂದು ಇಂದಿರಾಜಿ ಅವರ ಗುಣಗಾನ ಮಾಡಿದರು.
ಇಂದು ದೇಶದಲ್ಲಿ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿಯವರು ಚುನಾವಣಾ ಪೂರ್ವದಲ್ಲಿ ದೇಶದಲ್ಲಿ ವರ್ಷಕ್ಕೆ ಮೂರು ಕೋಟಿಗಳಷ್ಟು ಉದ್ಯೋಗ ಸೃಷ್ಟಿ ಮಾಡುವುದಾಗಿ ಆಶ್ವಾಸನೆ ನೀಡಿ,ಆಡಳಿತದ ಗದ್ದುಗೆ ಏರಿ ಈಗ ನಿರುದ್ಯೋಗಿ ವಿದ್ಯಾವಂತರಿಗೆ ಪಕೋಡಾ, ಪಾನಿಪುರಿ ಮಾಡಿಕೊಂಡು ಉದ್ಯೋಗ ಮಾಡಿದೆ ಎಂದು ಹೇಳುತ್ತಿದ್ದಾರೆ.
ದೇಶದಾದ್ಯಂತ ಜಿ.ಎಸ್.ಟಿ.ಜಾರಿಗೊಳಿಸಿ ಅದರಿಂದ ಅಪಾರವಾದ ತೆರಿಗೆ ಹಣವನ್ನು ಕೇಂದ್ರ ಸಂಗ್ರಹ ಮಾಡುತ್ತಿದ್ದರೂ ಸಹ ರೈತರ ಸಾಲ ಮನ್ನಾ ಮಾಡುವ ಮನಸ್ಸು ಮಾಡದೇ ಕೇಂದ್ರ ಸರ್ಕಾರ ಈಗ ದೇಶದ ಆಗರ್ಭ ಶ್ರೀಮಂತರ ಸಾಲವನ್ನು ಮನ್ನಾ ಮಾಡುವ ಕೆಲಸ ಮಾಡುತ್ತಿದೆ.ಬರೀ ಸುಳ್ಳಿನಿಂದ ಜನರನ್ನು ವಂಚಿಸುವ ಸರ್ಕಾರ ಈ ದೇಶಕ್ಕೆ ಬೇಕಿಲ್ಲ ಎಂದು ಹೇಳಿದರು.
ಕ್ಷೇತ್ರದಲ್ಲಿ ಮಾಜಿ ಶಾಸಕರುಗಳು ದುರಹಂಕಾರ, ದರ್ಪದಿಂದ ಮತ್ತು ಮುಸುಕಿನ ಆಡಳಿತ ನಡೆಸಿದ್ದಾರೆ ಆದರೆ ನಾನು ಅವರಂತೆ ದುರಹಂಕಾರಿ ಅಥವಾ ಮುಸುಕಿನ ಆಡಳಿತ ನಡೆಸದೆ ಸಾಮಾನ್ಯರಲ್ಲಿ ಸಾಮಾನ್ಯನಂತೆ, ಬಡವರಲ್ಲಿ ಬಡವರಂತೆ ಆಡಳಿತ ನಡೆಸಲಿದ್ದೇನೆ.ನಾನು ಸಾಮಾನ್ಯ ಕಾರ್ಮಿಕನಾಗಿ, ನಗರಸಭೆ ಸದಸ್ಯನಾಗಿ, ಅಧ್ಯಕ್ಷನಾಗಿ ಬಂದವನಾಗಿರುವುದರಿಂದ ಕ್ಷೇತ್ರದ ಎಲ್ಲಾ ವರ್ಗದ ಜನರ ಅರಿವು ನನಗಿದೆ ಎಂದು ಹೇಳಿದರು.
ಕ್ಷೇತ್ರದ ಪ್ರತಿಯೊಂದು ವರ್ಗದ ಜನರು ನನ್ನನ್ನು ಗೆಲ್ಲಿಸಿದ್ದೀರಿ, ಅದರ ಋಣ ತೀರಿಸುವ ಅವಕಾಶ ದೊರೆತಿದ್ದು ಆ ಕೆಲಸವನ್ನು ಖಂಡಿತವಾಗಿಯೂ ಮಾಡಲಿದ್ದೇನೆ ಮತ್ತು ವಸತಿ ಯೋಜನೆಯನ್ನು ಮಾಡುವ ಮಹದಾಸೆ ಇದ್ದು ಅದನ್ನು ಮಾಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತನಾಗುತ್ತೇನೆ,ಬಡವರಿಗೆ ಅನ್ಯಾಯವಾದ ಸಂದರ್ಭದಲ್ಲಿ ಎಂದೂ ರಾಜಿಯಾಗುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರು.
ಈ ಬಡಾವಣೆಯಲ್ಲಿ ಸಾಮಾನ್ಯ ವರ್ಗದವರು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರು ಮತ್ತು ಬೀಡಿ ಕಾರ್ಮಿಕರು ವಾಸಿಸುತ್ತಿದ್ದು ಇಲ್ಲಿನ ರಸ್ತೆಗಳನ್ನು ನಗರಸಭೆಯ ಚುನಾವಣೆಯ ನಂತರ ಒಂದು ವರ್ಷದಲ್ಲಿ ವಿಶೇಷ ಅನುದಾನ ತಂದು ಇಲ್ಲಿರುವ ಎಲ್ಲಾ ರಸ್ತೆಗಳನ್ನು ಸಿಸಿ ರಸ್ತೆಗಳನ್ನಾಗಿ ಮಾಡಲಾಗುವದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ರೇಷ್ಮೆ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಡಿ ಬಸವರಾಜು ಮಾತನಾಡಿ ನಮ್ಮೆಲ್ಲರ ನೆಚ್ಚಿನ ನಾಯಕಿಯಾದ ದಿ. ಪ್ರಧಾನಿ ಇಂದಿರಾಜಿ ಅವರು ಸ್ವತಃ ತಮ್ಮ ದೇಹವನ್ನು ಛಿದ್ರವಾದರೂ ಪರವಾಗಿಲ್ಲ ಆದರೆ ದೇಶವನ್ನು ಛಿದ್ರಗೊಳಿಸಲು ಬಿಡದಿಲ್ಲ ಎಂದು ಆಗಿನ ತಾಲಿಬಾನ್ ಉಗ್ರರನ್ನು ಹತೋಟಿಯಲ್ಲಿ ಇಟ್ಟಿದ್ದರು ಮತ್ತು ಬಾಂಗ್ಲಾದೇಶವನ್ನು ಪಾಕಿಸ್ಥಾನದಿಂದ ಮುಕ್ತಗೊಳಿಸಿದ ಕೀರ್ತಿ ಇಂದಿರಾಜಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.ಮತ್ತು ಎಲ್ಲ ವರ್ಗದ ಜನರು ರಾಮಪ್ಪನ ಅವರನ್ನು ಗೆಲ್ಲಿಸಿದ್ದೀರಿ ಮುಂಬರುವ ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಗಳಿಸುವಂತೆ ಮಾಡಿರಿ ಎಂದು ಸೇರಿದ್ದ ನಿವಾಸಿಗಳಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ.ಹನುಮಂತಪ್ಪ, ನಗರಸಭೆ ಸದಸ್ಯರಾದ ಕೆ.ಮರಿದೇವ, ಸಿಗ್ಬತ್ ತುಲ್ಲಾ, ಎಜಾಜ್ ಅಹ್ಮದ್,ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕದರಮಂಡಲಗಿ, ಹನಗವಾಡಿ ಹನುಮಂತಪ್ಪ ಮುಂತಾದವರು ಮಾತನಾಡಿ ದಿ. ಪ್ರಧಾನಿ ಇಂದಿರಾಗಾಂಧಿಯವರ ಗುಣಗಾನ ಮಾಡಿದರು.
ಈ ವೇಳೆ ನಗರಸಭೆ ಮಾಜಿ ಸದಸ್ಯೆ ಎಂ.ಕೆ .ಇಂದಿರಾ, ಪಾರ್ವತಿ’ ಸೈಫುಲ್ಲಾ ,ಸತ್ತಾರ್ ಸಾಬ್ ,ಮಾಕನೂರ ಹನುಮಂತಪ್ಪ,ಎಚ್. ಈರಪ್ಪ, ಭರಮಪ್ಪ, ಕೋತ್ವಾಲ್ ಹನುಮಂತಪ್ಪ, ಎಂ.ಎಸ್ .ಆನಂದ್ ಕುಮಾರ್, ಹೆಚ್. ಶಿವಪ್ಪ, ದೇವರಾಜ್ ,ಶಿವಕುಮಾರ್, ಪುರುಷೋತ್ತಮ, ಭಾಗ್ಯಾ ದೇವಿ, ಅಮೀನ್, ಬಸವರಾಜ್ ತಳವಾರ್, ತಿಪ್ಪೇಶಿ, ಸಾವಿತ್ರಿ ಕೆಂಚಪ್ಪ,ಕಿರಣ್ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
