ಆಸ್ತಿಗಾಗಿ ಬಾಮೈದುನನ ಕೊಲೆ

ಹುಳಿಯಾರು:

      ಆಸ್ತಿಗಾಗಿ ತನ್ನ ಸ್ವಂತ ಹಂಡಿತ ತಮ್ಮನನ್ನೇ ಕೊಲೆ ಮಾಡಿದ ಅಮಾನುಷ ಕೃತ್ಯ ಹಂದನೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಇತ್ತೀಚೆಗಷ್ಟೆ ಚಿಕ್ಕನಾಯಕನಹಳ್ಳಿ ತಾಲೂಕು ಹಂದನಕೆರೆ ಪೂಲೀಸ್ ಠಾಣೆ ವ್ಯಾಪ್ತಿ ಹುಚ್ಚನಹಳ್ಳಿ ರಸ್ತೆಯಲ್ಲಿ ಕೆಇಬಿ ವ್ಯಾನ್ ಚಾಲಕ ಧನಂಜಯ ಅವರ ಮೃತ ದೇಹ ಪತ್ತೆಯಾಗಿತ್ತು. ಬೈಕ್ ಮೇಲಿಂದ ಬಿದ್ದು ಸಾವನ್ನಪ್ಪಿರಬಹುದೆಂದು ಮೇಲ್ನೋಟಕ್ಕೆ ಕಂಡುಬಂದರೂ ಕೊಲೆಯ ಶಂಕೆ ಪೊಲೀಸರಿಗಿತ್ತು.

       ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾಗೋಪಿನಾಥ್ ಅವರ ಮಾರ್ಗದರ್ಶನದಲ್ಲಿ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು ಆಸ್ತಿಗಾಗಿ ಅಕ್ಕನಗಂಡನೆ ಕೊಲೆ ಮಾಡಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

       ಹಂದನಕೆರೆ ಬೆಸ್ಕಾಂ ಲೈನ್ ಮ್ಯಾನ್ ದೇವಿಕರಿಯಪ್ಪ ಅವರೇ ತನ್ನ ಹೆಂಡತಿ ತಮ್ಮನನ್ನು ಕೊಲೆ ಮಾಡಿದವರಾಗಿದ್ದು ಇವರು ತನ ಸ್ನೇಹಿತ ಚಿದನಂದ ಅವರ ಜೊತೆ ಬಾಮೈದುನನನ್ನು ಹುಚ್ಚನಹಳ್ಳಿ ರಸ್ತೆಗೆ ಬರುವಂತೆ ಹೇಳಿ ಅವರು ಬಂದ ನಂತರ ದೊಣ್ಣೆಯಲ್ಲಿ ತಲೆಗೆ ಹೊಡೆದು ಸಾಯಿಸಿರುವುದಾಗಿ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾರೆ.

      ಚಿಕ್ಕನಾಯಕನಹಳ್ಳಿ ಸರ್ಕಲ್ ಇನ್ ಪ್ಪೆಕ್ಟರ್ ಸುರೇಶ್, ಹಂದನಕೆರೆ ಸಬ್ ಇನ್ಪ್ಪೆಕ್ಟರ್ ನರಸಿಂಹಮೂರ್ತಿ ಹಾಗೂ ಸಿಬ್ಬಂದಿಗಳಾದ ಮೋಹನ್, ಕಿರಣ್, ಉಮಶಂಕರ ಆರೊಪಿಗಳನ್ನು ಬಂಧಿಸಿ ನ್ಯಾಯಲಯಕ್ಕೆ ಹಾಜರು ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap