ಬೆಳಗಾವಿ
ರಾಜ್ಯದ ಬರಪೀಡಿತ ತಾಲೂಕುಗಳು ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತ ಇದೆ. ನಿನ್ನೆ ನಡೆದ ಸಂಪುಟ ಉಪ ಸಮಿತಿ ಸಭೆಯಲ್ಲಿ ನಡೆದ ಚರ್ಚೆ ವೇಳೆ ಕೆಲ ಸಚಿವರು ಈ ಅಭಿಪ್ರಾಯ ವ್ಯೆಕ್ತಪಡಿಸಿದ್ದಾರೆ ಎನ್ನಲಾಗಿದೆ.
ಹಾಲಿ 100ತಾಲೂಕುಗಳನ್ನು ಎರಡು ಹಂತದಲ್ಲಿ ಬರ ಪೀಡಿತ ತಾಲೂಕುಗಳೆಂದು ಸರ್ಕಾರ ಘೋಷಿಸಿತ್ತು.ಅಂತರ್ಜಲ ಕುಸಿತ, ಒಣಹವೆ ಹೆಚ್ಚಳ ಪರಿಣಾಮದಿಂದಾಗಿ ಇನ್ನು 20 ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ಘೋಷಣೆಗೆ ಸರ್ಕಾರ ಮುಂದಾಗಿದೆ. ನಿರಂತರ 60 ದಿಗನಳ ಕಾಲ ಒಣಹವೆ ಮುಂದುವರೆದರೆ ಕೃಷಿ ಇಲಾಕೆ,ಹವಾಮಾನ ಇಲಾಖೆ, ಕಂದಾಯ ಇಲಾಕೆ ಮಾಹಿತಿ ಆಧರಿಸಿ ಬರ ಪೀಡಿತ ತಾಲೂಕುಗಳನ್ನು ಘೋಷಿಸಲು ಸಚಿವ ಸಂಪುಟು ಉಪ ಸಮಿತಿ ತೀರ್ಮಾನಿಸಿದೆ.
ಈಗಾಗಲೇ ಪ್ರತಿ ಬರ ಪೀಡಿತ ತಾಲೂಕುಗಳಿಗೆ ತಲಾ 50 ಲಕ್ಷರೂವನ್ನು ಸರ್ಕಾರ ಘೋಷಿಸಿ 25 ಲಕ್ಷ ರೂ ಬಿಡುಗಡೆ ಮಾಡಿದೆ.ಬರ ಪೀಡಿತ ತಾಲೂಕುಗಳಲ್ಲಿ ಕುಡಿಯುವ ನೀರು ಪೂರೈಕೆಗೆ ಮೊದಲ ಆದ್ಯತೆಯಾಗಿ ಹಣ ನೀಡಲು ಉಪ ಸಮಿತ ನಿರ್ದೇಶನ ನೀಡಿದೆ. ಜತೆಗೆ ದನಕರುಗಳಿಗೆ ಮೇವು ಪೂರೈಕೆ, ಜನರಿಗೆ ಉದ್ಯೋಗ ಕಲ್ಪಿಸಲು ಉಪ ಸಮಿತಿ ತೀರ್ಮಾನಿಸಿದೆ. ಅಂದುಕೊಂಡತೆ ಡಿಸೆಂಬರ್ 30ರ ವೇಳೆಗೆ ಬರ ಪೀಡಿತ ತಾಲೂಕುಗಳ ಸಂಖ್ಯೆ ಘೋಷಣೆ ಮಾಡಲು ಕಂದಾಯ ಇಲಾಕೆ ಮುಂದಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
