ಚಿತ್ರದುರ್ಗ:
63 ಎಕರೆಯಷ್ಟು ವಿಸ್ತೀರ್ಣವಿರುವ ಮತ್ತಿತಿಮ್ಮಣ್ಣನಾಯಕನ ಕೆರೆ ಹೂಳು ತೆಗೆಸುತ್ತಿದ್ದು, ಹತ್ತು ಎಕರೆಯಷ್ಟು ಪ್ರದೇಶದಲ್ಲಿ ಬೆಳೆದಿದ್ದ ಜಾಲಿಗಿಡ ಹಾಗೂ ಮತ್ತಿತರೆ ಕುರುಚಲು ಗಿಡಗಳನ್ನು ತೆಗೆಸಿ ಭಾನುವಾರ ಸ್ವಚ್ಚಗೊಳಿಸಲಾಯಿತು.
ಮತ್ತಿತಿಮ್ಮಣ್ಣನಾಯಕನ ಕೆರೆ ಹೂಳುತೆಗೆಸುವುದರಿಂದ ಅಂರ್ತಜಲ ವೃದ್ದಿಯಾಗುವುದಲ್ಲದೆ ನಗರದಲ್ಲಿರುವ ಎಲ್ಲಾ ಕೊಳವೆಬಾವಿ ಹಾಗೂ ಬಾವಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿ ಮಳೆಗಾಲದಲ್ಲಿ ನೀರು ಸಂಗ್ರಹವಾಗಿ ಸಕಲ ಜೀವರಾಶಿಗಳಿಗೂ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಹೂಳು ತೆಗೆಸುತ್ತಿದ್ದು, ಇಂತಹ ಮಹಾತ್ಕಾರ್ಯಕ್ಕೆ ನೆರವು ನೀಡುವ ಯಾರಾದರೂ ದಾನಿಗಳು ಜೆ.ಸಿ.ಬಿ.ಯನ್ನಾದರೂ ಕೊಡಲಿ ಇಲ್ಲವೇ ಈಗ ಹೂಳುತೆಗೆಯುತ್ತಿರುವ ಜೆ.ಸಿ.ಬಿ.ಗೆ ಡೀಸೆಲ್ ಅನ್ನಾದರೂ ಹಾಕಿಸಲಿ ಎಂದು ಮಾನವ ಬಂಧುತ್ವ ವೇದಿಕೆಯ ಜಿಲ್ಲಾಧ್ಯಕ್ಷ ಹೆಚ್.ಅಂಜಿನಪ್ಪ ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ