ಮುಂಬೈ:
ಸಂಸತ್ ನಲ್ಲಿ ನಿನ್ನೆ ಅಂಗೀಕಾರವಾದ ಆರ್ಥಿಕವಾಗಿ ಹಿಂದುಳಿದಿರುವ ಮೇಲ್ವರ್ಗದವರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ. 10 ರಷ್ಟು ಮೀಸಲಾತಿ ಒದಗಿಸುವ ಮಸೂದೆಗೆ ಅಂಕಿತ ಹಾಕಿದ ಮಾರನೇ ದಿನವೇ ಉದ್ಯೋಗವೇ ಇಲ್ಲದಾದಾಗ ಇನ್ನು ಮೀಸಲಾತಿ ಯಾವ ಪುರುಷಾರ್ಥಕ್ಕೆ ಎಂದು ಶಿವಸೇನೆ ಟೀಕಿಸಿದೆ ಎಂದು ತಿಳಿದು ಬಂದಿದೆ .
ಅಲ್ಲದೇ ಈ ಮಸೂದೆ ನಾಟಕವು ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಬಾರದು, ಹಾಗೇನಾದರೂ ಆದಲ್ಲಿ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ಸಂದೇಶ ರವಾನಿದೆ.
ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯಕ್ಕೂ ಮೀಸಲಾತಿ ನೀಡಲಾಗಿದೆ. ಆದರೆ, ಉದ್ಯೋಗ ಏಲ್ಲಿವೆ ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ, ಈಗ ಸಂಸತ್ತಿನಲ್ಲಿಯೂ ಸಾಮಾನ್ಯವರ್ಗದ ಬಡವರಿಗೆ ಶೇ, 10 ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆ ಅಂಗೀಕಾರಗೊಂಡಿದ್ದು, ಉದ್ಯೋಗ ಮತ್ತು ಬಡತನ ಸಮಸ್ಯೆ ನಿರ್ಮೂಲನೆಯಲ್ಲಿ ವಿಫಲ ವಾದವರು ಮೀಸಲಾತಿ ಕಾರ್ಡ್ ಬಳಸುತ್ತಿದ್ದಾರೆ ಎಂದು ಶಿವಸೇನೆ ಮುಖವಾಣಿ ಸಾಮ್ನಾ ಟೀಕಿಸಲಾಗಿದೆ ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








