ಹುಳಿಯಾರು
ಹೆಣ್ಣುಮಕ್ಕಳಿಗೆ ಎಲ್ಲಾಕ್ಷೇತ್ರಗಳಲ್ಲೂ ಸಮಾನ ಅವಕಾಶಗಳು ಸಿಗಬೇಕು ಎಂದು ತಾಲ್ಲೂಕು ಶಿಶು ಅಭಿವೃದ್ಧಿ ಹಾಗೂ ಮಹಿಳಾ ಕಲ್ಯಾಣ ಅಧಿಕಾರಿ ಡಿ.ತಿಪ್ಪಯ್ಯ ಹೇಳಿದರು.
ಹಂದನಕೆರೆ ಹೋಬಳಿ ಮತ್ತಿಘಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಜಯಭಾರತಿ ಪ್ರೌಢಶಾಲೆ ಆವರಣದಲ್ಲಿ ನಡೆದ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಹಾಗೂ ಪ್ರಧಾನಮಂತ್ರಿ ಮಾತೃ ವಂದನಾ ಸಾಮಥ್ರ್ಯ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
`ಆಧುನಿಕ ಯುಗದಲ್ಲೂ ಹೆಣ್ಣು ಶಿಶು ಹತ್ಯೆ ಹೆಚ್ಚುತ್ತಿದೆ. ಆದ್ದರಿಂದ ಗಂಡು-ಹೆಣ್ಣಿನ ಅನುಪಾತದಲ್ಲಿ ವತ್ಯಾಸ ಆಗುತ್ತಿದೆ’ ಎಂದರು.ಮುಖ್ಯಶಿಕ್ಷಕಿ ಉಮಾದೇವಿ ಮಾತನಾಡಿ, `ಗ್ರಾಮೀಣ ಹೆಣ್ಣುಮಕ್ಕಳು ಇಂದಿಗೂ ಆಚರಣೆಗಳ ಹೆಸರಿನಲ್ಲಿ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಪ್ರೌಢಶಾಲೆ ವರೆಗೂ ಶಾಲೆಗೆ ಬರುವ ಮಕ್ಕಳು ನಂತರ ಮೊಟಕುಗೊಳಿಸುತ್ತಾರೆ. ಹೆಣ್ಣು ಮಕ್ಕಳು ತಮ್ಮ ಹಕ್ಕು ಹಾಗೂ ಜವಾಬ್ದಾರಿ ಅರಿಯಬೇಕಾದರೆ ಶಿಕ್ಷಣ ಮುಂದುವರೆಸಬೇಕು’ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಆಶಾಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಒಟ್ಟಾಗಿ ಮತ್ತಿಘಟ್ಟ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ ಜಾಗೃತಿ ಮೂಡಿಸಿದರು. ಅಧಿಕಾರಿಗಳಾದ ಶಶಿಧರ್,ರಂಗರಾಜು,ರೂಪಾ ಹಾಗೂ ಪುಷ್ಪ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
