ಎಸಿಬಿ ದಾಳಿ : 18 ಸಾವಿರ ಲಂಚದ ಹಣ ವಶ!!

ಕೋಲಾರ :

      ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಅಧಿಕಾರಿಯೊಬ್ಬರು ಲಂಚ ಪಡೆಯುವ ವೇಳೆ ಎಸಿಬಿ ಬಲಗೆ ಬಿದ್ದಿದ್ದಾರೆ.

      ತಾಲ್ಲೂಕು ಬಿಸಿಎಂ ವಿಸ್ತರಣಾಧಿಕಾರಿ ಮಂಜುನಾಥ್ ಬಲೆಗೆ ಬಿದ್ದಿರುವ ಅಧಿಕಾರಿ. ಇವರು ಹಾಸ್ಟೆಲ್ ಗಳಿಗೆ ನೀರು ಸರಬರಾಜು ಮಾಡಿದ 93 ಸಾವಿರ ಬಿಲ್ ಪಾಸ್ ಮಾಡಲು 18 ಸಾವಿರ ಹಣ ಲಂಚದ ಬೇಡಿಕೆ ಇಟ್ಟಿದ್ದರು. 

      ದೂರುದಾರ ನೀಡಿದ ದೂರಿನನ್ವಯ ಎಸಿಬಿ ಡಿಎಸ್ಪಿ‌ ಪುರುಶೋತ್ತಮ್ ನೇತೃತ್ವದಲ್ಲಿ ದಾಳಿ ನಡೆಸಿ, ಲಂಚ ಪಡೆದ ಅಧಿಕಾರಿ ಮಂಜುನಾಥ್ ಅವರನ್ನ ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link