ರಾಜಸ್ತಾನ್ :
ಸೇನೆಯಲ್ಲಿ ಕರ್ನಲ್ ಹುದ್ದೆಯಲ್ಲಿದ್ದವರೊಬ್ಬರು ಆಕಸ್ಮಿಕವಾಗಿ ಗುಂಡು ತಗುಲಿದ ಪರಿಣಾಮ ಸಾವನ್ನಪ್ಪಿರುವ ಘಟನೆ ನಡೆದಿದೆ.
ಗುರುವಾರ ಈ ಘಟನೆ ರಾಜಸ್ತಾನದ ಮಹಾಜನ್ ಫೀಲ್ಡ್ ಫೈರಿಂಗ್ ಕೇಂದ್ರದಲ್ಲಿ ನಡೆದಿದ್ದು, ಆರ್ಮಿ ಏರ್ ಡಿಫೆನ್ಸ್ನ ತಂಡ ಫೈರಿಂಗ್ ತರಬೇತಿಯಲ್ಲಿ ತೊಡಗಿರುವಾಗ ಆಕಸ್ಮಿಕವಾಗಿ ಗುಂಡು ತಗುಲಿ ಕೊನೆಯುಸಿರು ಎಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೃತಪಟ್ಟ ಅಧಿಕಾರಿಯ ಹೆಸರು ಬಹಿರಂಗಗೊಂಡಿಲ್ಲ. ಆದರೆ ದೇಶದ ರಕ್ಷಣಾ ಇಲಾಖೆಯಲ್ಲಿ ಆರ್ಮಿ ಏರ್ ಡಿಫೆನ್ಸ್ ನೂತನ ತುಕಡಿಯಾಗಿದೆ. ಇನ್ನು ರಾಜಸ್ತಾನ ಹಾಗೂ ಪಾಕಿಸ್ತಾನ ಗಡಿಯಲ್ಲಿರುವ ಮಹಾಜನ್ ಫೀಲ್ಡ್ ಫೈರಿಂಗ್ ಕೇಂದ್ರ ದೇಶದಲ್ಲಿಯೇ ಅತಿದೊಡ್ಡ ತರಬೇತಿ ಕೇಂದ್ರ ಎನ್ನುವ ಹಿರಿಮೆ ಹೊಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
