ಶೈಕ್ಷಣಿಕ ವಾತಾವರಣ ಹೆಚ್ಚಿಸಲು ಸೌಲಭ್ಯ ಬೇಕು

ಚಿತ್ರದುರ್ಗ:

     ದಾನಿಗಳು ಉಚಿತವಾಗಿ ನೀಡುವ ಸವಲತ್ತುಗಳನ್ನು ನಿರ್ಲಕ್ಷಿಸದೆ ಸದುಪಯೋಗಪಡಿಸಿಕೊಂಡು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಮಕ್ಕಳಿಗೆ ತಿಳಿಸಿದರು.ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್, ಇನ್ನರ್‍ವೀಲ್ ಕ್ಲಬ್ ಚಿತ್ರದುರ್ಗ ಫೋರ್ಟ್ ಇವರುಗಳ ಸಹಯೋಗದೊಂದಿಗೆ ಮಲ್ಲಾಪುರ ಗೊಲ್ಲರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಹ್ಯಾಪಿ ಸ್ಕೂಲ್ ವಿನ್ಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

     ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯ ಮಕ್ಕಳಿಗೆ ಶೈಕ್ಷಣಿಕ ವಾತಾವರಣ ಉತ್ತಮಪಡಿಸಲು ಎಲ್ಲಾ ರೀತಿಯ ಸೌಲಭ್ಯಗಳು ಬೇಕು. ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್ ಹಾಗೂ ಇನ್ನರ್‍ವೀಲ್ ಕ್ಲಬ್ ಚಿತ್ರದುರ್ಗ ಫೋರ್ಟ್ ಎಲ್ಲಾ ಕ್ಲಬ್‍ಗಳು ಶಿಕ್ಷಣ ಇಲಾಖೆಯೊಂದಿಗೆ ಅವಿಭಾಜ್ಯ ಅಂಗವಾಗಿ ಕೆಲಸ ಮಾಡುತ್ತಿವೆ. ಮಲ್ಲಾಪುರ ಗೊಲ್ಲರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಿವಿಧ ಸೌಲಭ್ಯಗಳನ್ನು ನೀಡುವ ಮೂಲಕ ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್ ಹಾಗೂ ಇನ್ನರ್‍ವೀಲ್ ಕ್ಲಬ್ ಚಿತ್ರದುರ್ಗ ಫೋರ್ಟ್ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವುದನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

        ಪ್ರಾಥಮಿಕ ಶಾಲೆಗಳಿಗೆ ಸರ್ಕಾರದಿಂದ ಸಿಗುವ ಅನುದಾನ ಕಡಿಮೆಯಾಗುತ್ತಿದೆ. ನಗರಕ್ಕೆ ಹತ್ತಿರವಿರುವ ಸರ್ಕಾರಿ ಶಾಲೆಗಳು ಸೌಲಭ್ಯಗಳಿಂದ ವಂಚಿತವಾಗುತ್ತಿವೆ. ಎಸ್.ಡಿ.ಎಂ.ಸಿ.ಅಧ್ಯಕ್ಷರು, ಸದಸ್ಯರು, ಶಿಕ್ಷಕರುಗಳು, ಮಕ್ಕಳು ದಾನಿಗಳು ನೀಡುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಹಾಳಾಗದಂತೆ ಜೋಪಾನ ಮಾಡಿ ಎಂದು ಮನವಿ ಮಾಡಿದರು.

         ಸಾರ್ವಜನಿಕ ಶಿಕ್ಷಣ ಇಲಾಖೆಯ ಡಿ.ವೈ.ಪಿ.ಸಿ. ತಿಪ್ಪೇಸ್ವಾಮಿ ಮಾತನಾಡುತ್ತ ಅತ್ಯುತ್ತಮ ಶಾಲೆ ಎಂದು ಹೆಸರು ಪಡೆದಿರುವ ಮಲ್ಲಾಪುರ ಗೊಲ್ಲರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಡೆಸ್ಕ್‍ಗಳ ಕೊರತೆಯಿದೆ. ನಾವುಗಳು ಹೆಚ್ಚಿನ ಗಮನ ತೆಗೆದುಕೊಳ್ಳುತ್ತೇವೆ. ಶಾಲೆಗೆ ವಿಶಾಲವಾದ ಕಾಂಪೌಂಡ್ ಇದೆ. ಗಿಡಗಳನ್ನು ನೆಟ್ಟು ದೊಡ್ಡ ಮರವಾಗುವಂತೆ ಪೋಷಿಸಿ ಶಾಲೆ ಹಸಿರು ವಾತಾವರಣದಿಂದ ಕಂಗೊಳಿಸುವಂತೆ ಮಾಡುವುದು ಶಿಕ್ಷಕರ ಹಾಗೂ ಎಸ್.ಡಿ.ಎಂ.ಸಿ. ಅಧ್ಯಕ್ಷ ಸದಸ್ಯರುಗಳ ಜವಾಬ್ದಾರಿ ಎಂದು ಹೇಳಿದರು.

        ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್ ಅಧ್ಯಕ್ಷ ರೊ.ಜೆ.ವಿ.ಮಂಜುನಾಥ್ ಮಾತನಾಡಿ ಶಾಲೆಗೆ ರೀಪೇಯಿಂಟಿಂಗ್ ಮಾಡಿಸಿ ಮಕ್ಕಳಿಗೆ ಅತ್ಯವಶ್ಯಕವಾಗಿರುವ ವಾಷ್‍ಬೇಸಿನ್ ನೀಡಿದ್ದೇವೆ. ಕಂಪ್ಯೂಟರ್ ಸಹ ನೀಡಲಾಗಿದೆ. ಇದಕ್ಕೆ ಎಲ್ಲಾ ಕ್ಲಬ್‍ನ ಸದಸ್ಯರುಗಳು ಸಹಕರಿಸಿದ್ದಾರೆ. ಇದು ಮಕ್ಕಳಿಗೆ ಸದುಪಯೋಗವಾಗಬೇಕು. ಶಾಲೆಯ ಅಭಿವೃದ್ದಿ ಕಡೆ ಶಿಕ್ಷಕರುಗಳು ಹಾಗೂ ಎಸ್.ಡಿ.ಎಂ.ಸಿ.ಗಳ ಪಾತ್ರ ಬಹಳ ಮುಖ್ಯ ಎಂದು ತಿಳಿಸಿದರು.

         ಇನ್ನರ್‍ವೀಲ್ ಕ್ಲಬ್ ಚಿತ್ರದುರ್ಗ ಫೋರ್ಟ್ ಅಧ್ಯಕ್ಷೆ ರೇಖಾ ಸಂತೋಷ್, ಡಿಸ್ಟಿಕ್ಟ್ ಚೇರ್ಮನ್ ಶ್ರೀಲತ ದೊಂತಿ ಮಾತನಾಡಿದರು.
ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್ ಕಾರ್ಯದರ್ಶಿ ರೇವಣಸಿದ್ದಪ್ಪ, ಇನ್ನರ್‍ವೀಲ್ ಕ್ಲಬ್ ಚಿತ್ರದುರ್ಗ ಫೋರ್ಟ್ ಕಾರ್ಯದರ್ಶಿ ಶೈಲಜಾ ಸತ್ಯನಾರಾಯಣ, ಎಸ್.ಡಿ.ಎಂ.ಸಿ. ಅಧ್ಯಕ್ಷ, ಗ್ರಾಮ ಪಂಚಾಯಿತಿ ಸದಸ್ಯರು ವೇದಿಕೆಯಲ್ಲಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link