ನೂತನ ಗ್ರಾ.ಪಂ ಕಟ್ಟಡ ಉದ್ಗಾಟನೆ..!!!

ದೊಡ್ಡೇರಿ:

     ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೂರು ಹಂತಗಳಿವೆ ಗ್ರಾ.ಪಂ, ತಾ.ಪಂ, ಜಿ.ಪಂ ಈ ಮೂರು ಹಂತಗಳ ಸ್ಥಳೀಯ ಸರ್ಕಾರಗಳಲ್ಲಿ ಆಗದೇಇರುವಂತಹ ಕೆಲಸಗಳನ್ನು ವಿಧಾನಸೌಧದಲ್ಲಿಇರುವ ಸರ್ಕಾರಕ್ಕೆಕೊಂಡೊಯ್ದು ಹೆಚ್ಚಿನಅನುದಾನವನ್ನು ಈ ಭಾಗಕ್ಕೆ ನೀಡುತ್ತೇನೆಎಂದು ಮಧುಗಿರಿಕ್ಷೇತ್ರದ ಶಾಸಕ ಎಂ.ವಿ. ವೀರಭದ್ರಯ್ಯ ತಿಳಿಸಿದರು.

        ಅವರು ಗ್ರಾಮದಲ್ಲಿ ರಾಜೀವ್‍ ಗಾಂಧಿ ಸಶಸ್ತ್ರೀಕರಣ ಯೋಜನೆಯಡಿಯಲ್ಲಿ ಸುಮಾರು 15 ಲಕ್ಷ ರೂಗಳ ನೂತನ ಗ್ರಾ.ಪಂ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದಅವರು ಸ್ಥಳಿಯ ಸರ್ಕಾರಗಳೆಂದರೇ ಈ ಮೂರು ಅಂಗಸಂಸ್ಥೆಗಳಾಗಿದ್ದು ಇವರ ವ್ಯಾಪ್ತಿಗೆ ಒಳಪಡುವಂತಹ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕಾದಜವಾಬ್ದಾರಿ ಸ್ಥಳಿಯ ಸರ್ಕಾರವಾದ ಗ್ರಾ.ಪಂಗಳಿಗೆ ಅಧಿಕಾರಇರುತ್ತದೆ,

       ಕುಡಿಯುವ ನೀರು ಹಾಗೂ ಗ್ರಾಮ ನೈರ್ಮಲ್ಯಇನ್ನೂಇತರೆ ಅಭಿವೃದ್ದಿ ಕೆಲಸಗಳ ಕಡೆ ಅತೀ ಹೆಚ್ಚು ಇಲ್ಲಿನ ಜನ ಪ್ರತಿನಿಧಿಗಳು ಗಮನ ಹರಿಸುವಂತಾಗಬೇಕು ಈಗಾಗಲೇ ಸಾವಿರಾರು ಅಡಿಗಳಷ್ಟು ಕೊಳವೆ ಬಾವಿ ಕೊರೆದರು ಸಹ ನೀರು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಮುಂದಿನ ದಿನ ಮಾನಗಳಲ್ಲಿ ಮಳೆ ಬರುತ್ತದೊ ಇಲ್ಲವೊ ಎಂಬ ಚಿಂತೆಗೆ ಈಡಾಗದೇ ರೈತನ ಬಾಳಿನಲ್ಲಿ ಆರ್ಥಿಕ ಚೈತನ್ಯ ಮೂಡಿಸುವಂತಹ ಮಳೆಕೊಯ್ಲು ಎಂಬಂತಹ ಯೋಜನೆ ಉಪಯೊಗಿಸಿಕೊಳ್ಳಿ ಎತ್ತಿನ ಹೊಳೆ ಯೋಜನೆ ಬಗ್ಗೆ ರೈತರು ಆತಂಕ ಪಡಬೇಕಾಗಿಲ್ಲ ಸಮ್ಮಿಶ್ರ ಸರ್ಕಾರದಲ್ಲಿ 900 ರೂಕೋಟಿ ವೆಚ್ಚದಲ್ಲಿ ಕೊರಟಗೆರೆ, ಮಧುಗಿರಿ, ಪಾವಗಡಗಳಿಗೆ, ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಲೋಕಸಭಾ ಚುನಾವಣೆ ಮುಗಿದ ನಂತರದಲ್ಲಿ ಈ ಬಾಗದಲ್ಲಿ ಸರ್ವೆಕಾರ್ಯ ಪ್ರಾರಂಭವಾಗುತ್ತದೆ ಎಂದು ತಿಳಿಸಿದರು.

      ಈಗಾಗಲೆ ಉದ್ಘಾಟನೆಯಾಗಿರುವ ಗ್ರಾಂ.ಪಂ.ಕಟ್ಟಡಕ್ಕೆ ಈ ಹಿಂದಿನ ಜನಪ್ರಿಯ ಶಾಸಕರಾದ ಕೆ.ಎನ್‍ರಾಜಣ್ಣ ನವರ ಅವಿರತ ಪರಿಶ್ರಮದಿಂದ ಈ ಗ್ರಾಮದಲ್ಲಿ ನೂತನ ಕಟ್ಟಡ ಉದ್ಘಾಟನೆಗೊಂಡಿರುವುದು ನಮ್ಮ ನಿಮ್ಮೆಲ್ಲರ ಸೌಭಾಗ್ಯವೆಂದು ದೊಡ್ಡೇರಿ ಕ್ಷೇತ್ರದ ಜಿ.ಪಂ ಸದಸ್ಯ ಹೂವಿನ ಚೌಡಪ್ಪ ತಿಳಿಸಿದರು, ಮತ್ತು ಹಾಲಿ ಶಾಸಕರು ಮುಂದಿನ ದಿನಗಳಲ್ಲಿ ಕ್ಷೇತ್ರದ ಸರ್ವತೊಮುಖ ಅಭಿವೃಧ್ದಿಗೆ ಪಕ್ಷಾತೀತಾವಾಗಿ ಹೆಚ್ಚು ಗಮನ ಹರಿಸಬೇಕುಎಂದರು.

       ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮಿದೇವಮ್ಮ ಮಾತನಾಡಿ ಈಗಾಗಲೆ ನಮ್ಮ ಗ್ರಾಮಕ್ಕೆ 35 ಲಕ್ಷ ರೂಗಳ ಪಶು ಸಂಗೋಪನಾ ಆಸ್ಪತ್ರೆಯ ಕಟ್ಟಡಕ್ಕೆ ಅನುದಾನ ನೀಡಿರುತ್ತಾರೆ. ಮತ್ತು ಸಿ.ಸಿ.ರಸ್ತಗೆ 21 ಲಕ್ಷರೂಗಳ ಅನುದಾನ ನೀಡಿರುತ್ತಾರೆ ಎಂದು ತಿಳಿಸಿದರು, ಕಾರ್ಯಕ್ರಮದಲ್ಲಿ ತಾಲ್ಲೂಕು ಕಾರ್ಯನಿರ್ವಾಹಣಾಧಿಕಾರಿ ನಂದಿನಿ, ಗ್ರಾ.ಪಂ ಉಪಾಧ್ಯಕ್ಷೆ ಮಂಗಳಮ್ಮ, ಸದಸ್ಯರುಗಳಾದ ಚಂದ್ರಶೇಖರ್ ಡಿ.ಬಿ, ರಂಗಶಾಮಣ್ಣ, ಡಿ.ಎನ್ ಲಿಂಗೇಗೌಡ, ಪಾಪಕ್ಕ, ರಾಜಮ್ಮ, ಅನಿತಮ್ಮ, ಜಯದೇವ್, ಆರ್‍ರಾಮಸ್ವಾಮಿ, ಮಮತ, ಹೆಂಜಾರಪ್ಪ, ಮಂಜುನಾಥ್ ಹಾಗೂ ದೊಡ್ಡೇರಿ ವಿ.ಎಸ್.ಎಸ್.ಎನ್. ಅಧ್ಯಕ್ಷಜಿ.ಕೃಷ್ಣಮೂರ್ತಿ, ಮಾಜಿಅಧ್ಯಕ್ಷಡಿ.ಆರ್.ರವಿ, ಪುಟ್ಟಪ್ಪ, ಜಯರಾಮಣ್ಣ, ವಕೀಲ ಎಂ. ಶಿವಣ್ಣ, ಸಂತೋಷ್, ಸಿಡದರಗಲ್ಲು ವಿಶ್ವನಾಥ್, ಹಾಗೂ ಗ್ರಾ.ಪಂ ಅಭಿವೃಧ್ದಿ ಅಧಿಕಾರಿ ಸುಬ್ಬರಾಜ ಅರಸ್, ಹಾಗೂ ಬಿಲ್ ಕಲೆಕ್ಟರ್ ವಿಜಯಕುಮಾರ್, ಡಾಟಾ ಎಂಟ್ರಿ ಆಪರೇಟರ್ ಕರಿಯಣ್ಣ, ಕಾರ್ಯದರ್ಶಿ ಕ್ಯಾತಪ್ಪ, ಮತ್ತು ಸಿಬ್ಬಂದಿ ವರ್ಗ, ಹಾಗು ಸಾರ್ವಜನಿಕರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link