ಚಳ್ಳಕೆರೆ
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಹಾಲಿ ಸಂಸದ ಬಿ.ಎನ್.ಚಂದ್ರಪ್ಪ ಭಾನುವಾರ ಸಂಜೆ ಇಲ್ಲಿನ ನೆಹರೂ ಸರ್ಕಲ್ನಲ್ಲಿರುವ ಹರಿಪ್ರಸಾದ್ ಹೋಟೆಲ್ಗೆ ಭೇಟಿ ನೀಡಿ ಸಾರ್ವಜನಿಕರಿಗೆ ಪಕ್ಷದ ಕಾರ್ಯಕರ್ತರಿಗೆ ಆಚ್ಚರಿ ಮೂಡಿಸಿದರು.
ಕಾರ್ಯನಿಮಿತ್ತ ಪಾವಗಡಕ್ಕೆ ತೆರಳಿದ್ದ ಅವರು ವಾಪಾಸ್ ಬರುವಾಗ ಇಲ್ಲಿನ ನೆಹರೂ ಸರ್ಕಲ್ಗೆ ಬಂದಾಗ ಕಾಂಗ್ರೆಸ್ ಪಕ್ಷದ ಹಲವಾರು ಕಾರ್ಯಕರ್ತರು, ಮುಖಂಡರು ಸಾರ್ವಜನಿಕರು ಸಂಸದ ಚಂದ್ರಪ್ಪನವರಿಗೆ ಕೈಕುಲಿಕಿ ಹಸ್ತಲಾಗವ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾಳೆ ನಾನು ಮತ್ತೊಮ್ಮೆ ಈ ಕ್ಷೇತ್ರದ ಲೋಕಸಭಾ ಸದಸ್ಯನಾಗಲು ನಾಮಪತ್ರ ಸಲ್ಲಿಸುತ್ತಿದ್ದು, ಎಲ್ಲರೂ ಬಂದು ಆಶೀರ್ವಾದಿಸುವಂತೆ ಮನವಿ ಮಾಡಿದರು.
ಶಿರಾದ ಮಾಜಿ ಶಾಸಕ ಸಾ.ಲಿಂಗಯ್ಯ ಸಹ ಇದೇ ಸಂದರ್ಭದಲ್ಲಿ ಮಾತನಾಡಿ, ಕಳೆದ ಐದು ವರ್ಷಗಳಿಂದ ಚಿತ್ರದುರ್ಗ ಲೋಕಸಭಾ ವ್ಯಾಪ್ತಿಯಲ್ಲಿ ಹೆಚ್ಚು ಕ್ರಿಯಾಶೀಲರಾಗಿ ಸಾರ್ವಜನಿಕರ ಸಮಸ್ಯೆಗಳಿಗೆ ಬಿ.ಎನ್.ಚಂದ್ರಪ್ಪ ಸ್ಪಂದಿಸಿದ್ಧಾರೆ. ತಮ್ಮ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಆದ್ಯತೆಯನ್ನು ನೀಡಿದ್ಧಾರೆ. ಈ ಕ್ಷೇತ್ರದ ಎಲ್ಲಾ ವರ್ಗದ ಜನರ ವಿಶ್ವಾಸವನ್ನು ಗಳಿಸಿದ್ದು, ಈ ಬಾರಿ ಮತ್ತೊಮ್ಮೆ ಸಂಸದರಾಗಿ ಪುನರಾಯ್ಕೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲವೆಂದರು.
ಕಾಂಗ್ರೆಸ್ನ ಯುವ ಮುಖಂಡರಾದ ಫರೀದ್ಖಾನ್, ಆರ್.ಪ್ರಸನ್ನಕುಮಾರ್ ಮಾತನಾಡಿ, ಸಂಸದ ಬಿ.ಎನ್.ಚಂದ್ರಪ್ಪ, ಆಗಮಿಸುವ ಸುಳಿವು ಪಡೆದ ನಾವು ಹೋಟೆಲ್ಲತ್ತ ಆಗಮಿಸಿದ್ದೆವು, ಸದರಿ ಹೋಟೆಲ್ ನಗರದ ಹೃದಯ ಭಾಗದಲ್ಲಿದ್ದು, ಎಲ್ಲಾ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿನಿತ್ಯ ಇಲ್ಲಿಯೇ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಾರೆ. ಸಂಸದರು ಆಗಮಿಸಿದ ಸಂದರ್ಭದಲ್ಲೇ ವಿವಿಧ ಪಕ್ಷದ ಅನೇಕ ಮುಖಂಡರನ್ನು ಸಹ ಭೇಟಿ ಆಗಿದ್ದಾರೆ. ಎಲ್ಲರ ಶುಭ ಹಾರೈಕೆಯಂತೆ ಚಂದ್ರಪ್ಪನವರು ಪುನರಾಯ್ಕೆಯಾಗುವರು ಎಂಬ ಆತ್ಮವಿಶ್ವಾಸವಿದೆ ಎಂದರು.
ನಗರಸಭಾ ಸದಸ್ಯ ಆರ್.ರುದ್ರನಾಯಕ, ಎಂ.ಜೆ.ರಾಘವೇಂದ್ರ, ವಿರೂಪಾಕ್ಷಿ, ಪಕ್ಷದ ಮುಖಂಡರಾದ ಭರಮಣ್ಣ, ಚೇತನ್ಕುಮಾರ್, ಪಾತಲಿಂಗಪ್ಪ, ಮಂಜುನಾಥ, ಫರೀದ್ಖಾನ್ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ