ಹೊಸದುರ್ಗ:
ರೌಡಿ ಶೀಟರ್ಗಳು ಮೀತಿ ಮೀರಿಅನಧಿಕೃತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ತಾಲ್ಲೂಕಿನಿಂದಗಡಿಪಾರು ಮಾಡಬೇಕಾಗುತ್ತದೆಎಂದುಡಿವೈಎಸ್ಪಿ ರಮೇಶ್ಎಚ್ಚರಿಕೆ ನೀಡಿದರು.ಮುಂಬರುವ ಲೋಕಸಭಾಚುನಾವಣಾ ನಿಮಿತ್ತ ಭಾನುವಾರ ಪಟ್ಟಣದ ಪೊಲೀಸ್ಠಾಣೆಗೆ ಭೇಟಿ ನೀಡಿತಾಲ್ಲೂಕಿನ ಸರಹದ್ದಿನಎಲ್ಲಾರೌಡಿ ಶೀಟರ್ಗಳ ಪೇರಡ್ನಲ್ಲಿ ಪ್ರಕರಣಗಳ ಪರೀಶೀಲನೆ ನಡೆಸಿ ಮಾತನಾಡಿದರು.
ಪ್ರಕರಣಗಳು ಸಾಖಲಾಗಿರುವುದು ಮುಖ್ಯವಲ್ಲ, ಗಲಾಟೆಗಳಲ್ಲಿ ಪಾಲ್ಗೋಳ್ಳುವುದನ್ನು ಮುಖ್ಯವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕಾಗುತ್ತದೆ.ನೀವು ಸಂವಿಧಾನಿಕ ಹಕ್ಕುಗಳನ್ನು ದಾಟುವಂತಿಲ್ಲಎಂದು ಎಚ್ಚರಿಸಿದರು.ಈ ವೇಳೆ ಕೆಲವರುತಾವುಯಾವುದೇರೀತಿಯಲ್ಲಿಯೂಯಾರಿಗೂತೊಂದರೆ ನೀಡುತ್ತಿಲ್ಲ, ವ್ಯಾಪಾರ ಮತ್ತಿತರ ಕೆಲಸಗಳಲ್ಲಿ ತೊಡಗಿಕೊಂಡಿದ್ದೇವೆಎಂದುಡಿವೈಎಸ್ಪಿ ರವರಿಗೆ ತಿಳಿಸಿದರು.
ಸಾರ್ವಜನಿಕ ಸ್ಥಳದಲ್ಲಿ ಗುಂಪು ಸೇರುವುದುಗಲಾಟೆ ವಿಚಾರಗಳ ಬಗ್ಗೆ ಚರ್ಚಿಸುವುದು ಸೇರಿದಂತೆಯಾವುದೇ ಚಟುವಟಿಕೆಗಳಲ್ಲಿ ಪಾಲ್ಗೋಂಡರೆ ನಿಮಗೆ ತೊಂದರೆಕಟ್ಟಿಟ್ಟ ಬುತ್ತಿಎಂದರು.ತಾಲ್ಲೂಕಿನಲ್ಲಿಯಾವುದೇಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಮತ್ತು ನೀತಿ ಸಂಹಿತೆಉಲ್ಲಂಘನೆ ಮಾಡಿದವರಕ್ರಮ ತೆಗೆದುಕೊಳ್ಳಿ ಎಂದು ಪೊಲೀಸ್ ಸಿಬ್ಬಂದಿಗಳಿಗೆ ಸೂಕ್ತ ನಿರ್ದೆಶನ ಮತ್ತು ಸೂಚನೆಗಳನ್ನು ನೀಡಿದರು.
ಇದೇ ವೇಳೆ ಹೊಸದುರ್ಗ ಸಿಪಿಐ ರುದ್ರಪ್ಪಎಲ್, ಪಿಎಸ್ಐ ಶಿವನಂಜಶೆಟ್ಟಿ, ಶ್ರೀರಾಂಪುರ ಪಿಎಸ್ಐ ಸಂತೋಷ್ ಹಾಗೂ ಪ್ರೆಪಷನರಿಡಿವೈಎಸ್ಪಿ ಸಂತೋಷ್ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








