ಬಳ್ಳಾರಿ
ಕರ್ನಾಟಕ ಆರ್ಯ ವೈಶ್ಯ ಮಹಾಮಂಡಳಿ ಬಳ್ಳಾರಿ ಘಟಕದಿಂದ ಬೇಸಿಗೆ ನಿಮಿತ್ತ ಸಾರ್ವಜನಿಕರಿಗೆ ಉಚಿತ ಮಜ್ಜಿಗೆ ಹಾಗೂ ಕುಡಿವ ನೀರಿನ ಅರವಟ್ಟಿಗೆಗೆ ಇಂದಿನಿಂದ ಚಾಲನೆ ನೀಡಲಾಯಿತು.ಆರ್ಯವೈಶ್ಯ ಸಮಾಜದ ಹಿರಿಯ ಮುಖಂಡರು ಹಾಗೂ ಹಿರಿಯ ಲೆಕ್ಕ ಪರಿಶೋಧಕರಾದ ಜಯಪ್ರಕಾಶ್ ಜೆ.ಗುಪ್ತಾ ಅರವಟ್ಟಿಗೆಗೆ ಚಾಲನೆ ನೀಡಿದರು.
ಬೇಸಿಗೆ ಕಳೆಯುವವರೆಗೂ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೂ ಆರ್ ಎಸ್ ಬಿ ಚಾರಿಟೀಸ್ ಸಹಯೋಗದಲ್ಲಿ ಉಚಿತವಾಗಿ ಮಜ್ಜಿಗೆ ಹಾಗೂ ನೀರು ವಿತರಿಸಲು ನಿರ್ಧರಿಸಲಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬಹುದೆಂದು ಗುಪ್ತಾ ತಿಳಿಸಿದರು.
ಬಳ್ಳಾರಿಯ ಬಿರು ಬಿಸಿಲು, ಚುನಾವಣೆ ಕಾವು ದಿನೇ ದಿನೇ ವೃದ್ಧಿಸುತ್ತಿದ್ದು ಸಾರ್ವಜನಿಕರ ದಾಹ ಹಿಂಗಿಸಲು ಮಾನವೀಯ ಕಳಕಳಿಯಿಂದ ಈ ಅರವಟ್ಟಿಗೆ ಪ್ರಾರಂಭಿಸಲಾಗಿದೆ.
ಪಾರ್ವತಿ ನಗರದ ಮುಖ್ಯ ರಸ್ತೆಯಲ್ಲಿರುವ ಪ್ರತಿಷ್ಟಿತ ಬಾಲಾ ರೀಜೆನ್ಸಿ ಹೊಟೆಲ್ ಮುಂಭಾಗದಲ್ಲಿ ಅರವಟ್ಟಿಗೆ ಪ್ರಾರಂಭಿಸಿದ್ದು, ಈವೇಳೆ ಮಂಡಳಿಯ ಅಧ್ಯಕ್ಷರಾದ ಪೋಲಾ ರಾಧಾಕೃಷ್ಣ, ಕಾರ್ಯದರ್ಶಿ ಪಿಎನ್ ಸುರೇಶ್, ಮುಖಂಡರಾದ ಗುಡದೂರು ವಿಜಯ್ ಕುಮಾರ್, ಎಲ್ಲೂರು ಮೋಹನ್, ರಾಮದುರ್ಗಂ ಸುರೇಶ್, ಎನ್.ಟಿ.ನಾಗರಾಜ್, ಮೇಧಾಳು ಶ್ರೀ ನಿವಾಸ್ ಇನ್ನಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
