ಚಳ್ಳಕೆರೆ
ನಗರದ ಖಾಸಗಿ ವಿದ್ಯಾಸಂಸ್ಥೆಯೊಂದು ಯಾವುದೇ ಅನುಮತಿ ಪಡೆಯದೇ ಕಾನೂನು ಬಾಹಿರವಾಗಿ ಕಾಂಪೌಂಡ್ ಗೋಡೆ ನಿರ್ಮಿಸಿ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ನಷ್ಟವನ್ನು ಉಂಟು ಮಾಡಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ನಗರಸಭಾ ಸದಸ್ಯ ಎಚ್.ಪ್ರಶಾಂತ್ಕುಮಾರ್ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ಧಾರೆ.
ನಗರದ 29ನೇ ವಾರ್ಡ್ನ ಸದಸ್ಯರಾದ ಎಚ್.ಪ್ರಶಾಂತ್ಕುಮಾರ್ ವಿಠಲನಗರಕ್ಕೆ ಹೊಂದಿಕೊಂಡಿರುವ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನವನ್ನು ಖಾಸಗಿ ಲೇಔಟ್ನವರು ನಿರ್ಮಿಸಿದ್ದು, ಯಾರಿಗೂ ಪರಾಭಾರೆ ಮಾಡಿರುವುದಿಲ್ಲ. ಆದರೆ, ಚಿನ್ಮಯ ಸಂಸ್ಥೆಯ ಕೆಲವರು ನಿಯಮಗಳನ್ನು ಗಾಳಿಗೆ ತೂರಿ ಶಾಲೆಯ ಕಾಂಪೌಂಡ್ ಗೋಡೆ ನಿರ್ಮಿಸಿದ್ದು, ಕೂಡಲೇ ಕಾಂಪೌಂಡ್ ಗೋಡೆಯನ್ನು ತೆರವುಗೊಳಿಸುವಂತೆ ಅವರು ಸರ್ಕಾರವನ್ನು ಒತ್ತಾಯಿಸಿದ್ಧಾರೆ.
ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ ಎಚ್.ಪ್ರಶಾಂತ್ಕುಮಾರ್ ಮಾನ್ಯ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ದೂರು ನೀಡಿದ್ದು, ಮಾಹಿತಿ ಹಕ್ಕು ಅನ್ವಯ ಮಾಹಿತಿ ಪಡೆದಿದ್ದು, ಅವರು ನೀಡಿದ ದಾಖಲೆಗಳು ಆಧಾರ ರಹಿತವೆಂದು ತಿಳಿಸಿದ್ದು, ಈ ಬಗ್ಗೆ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಲಿಖಿತ ಮೂಲಕ ದೂರು ನೀಡಿರುವುದಾಗಿ ಅವರು ತಿಳಿಸಿದ್ಧಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
