ಹೊಸದುರ್ಗ:
ತಾಲ್ಲೂಕಿನ ಮೆಟ್ಟಿಲಹೊಳೆ ಗ್ರಾಮದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದವರನ್ನ ಶನಿವಾರ ಪೋಲೀಸರು ಬಂಧಿಸಿ ಕರೆತಂದಿರುವುದನ್ನ ವಿರೋಧಿಸಿ ಭಾನವಾರ ಸಂಜೆ ಸುಮಾರು 6.30 ಸಮಯಕ್ಕೆ ಟ್ಯಾಕ್ಟರ್ನಲ್ಲಿ ಬಂದ ಸುಮಾರು 50 ರಿಂದ 60 ಮಂದಿ ಮಹಿಳೆಯರು ಏಕ ಏಕಿ ಠಾಣೆಗೆ ನುಗ್ಗಿ ಮುತ್ತಿಗೆ ಹಾಕಿದರು.
ಪೋಲೀಸರು ತಡೆದರೂ ಅವರನ್ನ ನೂಕಿ ಒಳ ನುಗ್ಗಿದ ಮಹಿಳೆಯರು ಕೆಲವರು ನಿರಪರಾಧಿಗಳಿದ್ದಾರೆ ಅವರನ್ನು ಕಳುಹಿಸಿಕೊಡಿ ಎಂದು ಏರು ದ್ವನಿಯಲ್ಲಿ ಗಲಾಟೆ ಮಾಡಿದರು.
ಅಷ್ಟರಲ್ಲಿ ಠಾಣೆಗೆ ಆಗಮಿಸಿದ ಸಿ.ಪಿ.ಐ ರುದ್ರಪ್ಪ ಹಾಗೂ ಪಿ.ಎಸ್.ಐ ಶಿವಾನಂಜಶೆಟ್ಟಿ ತಪ್ಪಿತಸ್ದರ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಅಮಾಯಕರನ್ನು ಯಾವುದೇ ರೀತಿಯಿಂದ ಕರೆತಂದಿಲ್ಲಾ ಎಂದು ಉತ್ತರ ಕೊಟ್ಟರೂ ಸಹಾ ಕೆಲವು ಮಹಿಳೆಯರು ಠಾಣೆಯೊಳಗೆ ಗಲಾಟೆ ಪ್ರಾರಂಭಿಸಿದರು.
ವಿಧಿ ಇಲ್ಲದೆ ಪೋಲೀಸರು ಮಹಿಳೆಯರನ್ನ ಹೊರಹಟ್ಟಿದರು.ನಂತರ ಸಿಪಿಐ ರುದ್ರಪ್ಪ ಮಾತನಾಡಿ ಇಸ್ಪೀಟ್ ಆಡಲು ಕೆಲ ಗುಡಿ ರೌಡಿಗಳೇ ಕುಮ್ಮಕ್ಕು ಕೊಟ್ಟಿದ್ದಾರೆ ಆಲ್ಲದೆ ನಾವು ದಾಳಿ ನಡೆಸಿದ ಸಂಧರ್ಬದಲ್ಲಿ ಅವರೂ ಸಹಾ ಆಟವಾಡುತ್ತಾ ಕುಳಿತಿದ್ದರು ಮಹಿಳೆಯರಾದ ನಿಮಗೆ ಸರಿಯಾಗಿ ಕಾನೂನು ಗೊತ್ತಿಲ್ಲ ಕಾನೂನು ಗೊತ್ತಿಲ್ಲದೆ ಮಾತನಾಡಬಾರದು ಇಂತಹ ಪ್ರಕರಣಗಳ ಪರವಾಗಿ ಬಂದರೆ ನಿಮ್ಮ ಮೇಲೂ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು.
ಈ ಸಂಧರ್ಬದಲ್ಲಿ ಬಿಜೆಪಿ ಮುಖಂಡ ಗುರುಸ್ವಾಮಿ ಮಧ್ಯೆ ಪ್ರವೇಶಿಸಿ ಮಹಿಳೆಯರನ್ನು ಸಮಾಧಾನ ಪಡಿಸಿದರು.ತಮ್ಮ ಗಂಡಂದಿರನ್ನ ನಾವು ಬಿಡಿಸಿಕೊಂಡು ಮನೆಗೆ ಹೋಗುವವರೆಗೂ ಊರಿಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದು ಕೂತರೂ ಪೋಲೀಸ್ ಅಧಿಕಾರಿಗಳ ಹಾಗೂ ಗುರುಸ್ವಾಮಿ ಹಾಗೂ ಗ್ರಾಮದ ಮುಖಂಡರುಗಳ ಮಧ್ಯಸ್ಥಿಕೆಯಲ್ಲಿ ನಡೆದ ಮಾತಿನಲ್ಲಿ ಮಹಿಳೆಯರು ಸುಮ್ಮನೆ ಠಾಣೆಯ ಮುಂದೆ ನಿಂತುಕೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
