ಸ್ಥಿರ ಬಿಂಬ ಪ್ರತಿಷ್ಠಾಪನೋತ್ಸವ

ತೋವಿನಕೆರೆ

  ಶ್ರೀ ಅಮಾವಾಸ್ಯೆ ಮಹಾಲಕ್ಷ್ಮಿ ದೇವಿ ಸೇವಾ ಟ್ರಸ್ಟ್ ನವರು ಹೊಸದಾಗಿ ನಿರ್ಮಿಸಿರುವ ಮಹಾಗಣಪತಿ ಹಾಗೂ ಮಹಾಲಕ್ಷ್ಮಿ ದೇವಾಲಯದ ನೂತನ ಸ್ಥಿರ ಬಿಂಬಗಳ ಪ್ರತಿಷ್ಠಾಪನಾ ಮಹೋತ್ಸವವು ಇದೇ ತಿಂಗಳು ದಿನಾಂಕ 7 ರಂದು ಪ್ರಾರಂಭವಾಗಿ 9 ರವರೆಗೆ ಮೂರು ದಿನಗಳ ಕಾಲ ನಡೆಯುತ್ತದೆ.

   ದಿನಾಂಕ 7 ರಂದು ಗೋಧೂಳಿ ಲಗ್ನದಲ್ಲಿ ದೇವಾಲಯ ಪ್ರವೇಶ. ದಿನಾಂಕ 8 ರಂದು ಆಚಾರ್ಯ ಪ್ರಾಥನಾ, ಗೋಪೂಜಾ, ಗಂಗಾ ಯಾದಿ ಯಮುನಾ ಪೂಜಾ, ಗ್ರಾಮ ಪ್ರದಕ್ಷಿಣಾ, ಯಾಗಶಾಲಾ ಪ್ರವೇಶ, ಮಹಾಸಂಕಲ್ಪ ಸೇರಿದಂತೆ ವಿವಿಧ ರೀತಿಯ ಪೂಜಾ ಕಾರ್ಯಗಳನ್ನು ಮಾಡಲಾಗುತ್ತದೆ.

   ದಿನಾಂಕ 9 ರಂದು ಪ್ರಾಣ ಪ್ರತಿಷ್ಠಾ, ನಿರೀಕ್ಷಣಮ್, ತತ್ವನ್ಯಾಸ ಹೋಮಃ, ಚುತುರ್ನವತಿ, ಕಲಾನ್ಯಾಸ ಹೋಮಃ, ಪೂರ್ಣಾಹುತಿಃ, ಷೋಡಶೋಪಚಾರ ಪೂಜಾ ವಿಧಿ, ಮಹಾಕುಂಭಾಭಿಷೇಕ, ಅಲಂಕಾರಃ, ಮಂತ್ರಪುಷ್ಟಿ, ಅಷ್ಟಾವಧಾನ ಸೇವಾ, ಮಹಾಮಂಗಳಾರುತಿ ಕಾರ್ಯಕ್ರಮಗಳು ಜರುಗುತ್ತವೆ. ಪ್ರತಿಷ್ಠಾಪನಾ ಸಮಯದಲ್ಲಿ ಸಿದ್ದರಬೆಟ್ಟದ ರಂಭಾಪುರಿ ಖಾಸಾ ಶಾಖಾ ಮಠದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಮಾಜಿ ಶಾಸಕ ಪಿ.ಆರ್. ಸುಧಾಕರಲಾಲ್ ಸೇರಿದಂತೆ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap