ನೀರಾ ಸೇವಿಸಿ ಬಾಲಕ ಸೇರಿ 12 ಮಂದಿ ಅಸ್ವಸ್ಥ!!!

ಚಿಕ್ಕಬಳ್ಳಾಪುರ:

       ನೀರಾ (ಸೇಂದಿ) ಸೇವಿಸಿ ಓರ್ವ ಬಾಲಕ ಸೇರಿ 12 ಮಂದಿ ಅಸ್ವಸ್ಥರಾದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಗುಟ್ಟಪಾಳ್ಯ ಗ್ರಾಮದಲ್ಲಿ ನಡೆದಿದೆ.

      ಅಸ್ವಸ್ಥರು ಕೂಲಿ‌ ಕೆಲಸಕ್ಕಾಗಿ ಆಂಧ್ರ ಪ್ರದೇಶದ ಸೇರಿದ ಕಮ್ಮವಾರಪಲ್ಲಿಗೆ ರೈತ ಚಂದ್ರ ಎಂಬವರ ತೋಟಕ್ಕೆ ಟೊಮೆಟೋ ಗಿಡಗಳಿಗೆ ತಂತಿ ಕಟ್ಟೋಕೆ ಹೋಗಿದ್ದಾಗ 12 ಮಂದಿ, ರೈತ ಚಂದ್ರಪ್ಪ ತಂದಿದ್ದ ನೀರಾ ಸೇವನೆ ಮಾಡಿದ್ದರು.ನಂತರ ತೀವ್ರವಾದ ಹೊಟ್ಟೆ ನೋವಿನ ಜೊತೆ ಭೇದಿಯಿಂದ ಬಳಲಿ ಅಸ್ವಸ್ಥರಾಗಿದ್ದಾರೆ.

      ಒರ್ವ ಬಾಲಕ, ಮೂವರು ಮಹಿಳೆಯರು ಸೇರಿ ಒಟ್ಟು 12 ಮಂದಿ ಅಸ್ವಸ್ಥರಾಗಿದ್ದು, ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link