ಹೊಸದುರ್ಗ:
ಸನ್ಯಾಸಿಯ ಬದುಕು ತಿರುಕರ ಬದುಕಿದಂತೆ ಎಂದು ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮೀಜಿಯವರು ಹೇಳಿದಂತೆ ತಿರಿದು ತಂದು ಎಲ್ಲರನ್ನೂ ಕರೆದು ನೀಡುವುದು ಈ ಭೂಮಿಯ ವೈಶಿಷ್ಟ್ಯ ಎಂದು ಹೊಸದುರ್ಗದ ಕುಂಚಿಟಿಗ ಮಹಾಸಂಸ್ಥಾನ ಮಠದ ಡಾ.ಶ್ರೀ ಶಾಂತವೀರ ಸ್ವಾಮೀಜಿ ಹೇಳಿದರು.
ಬೆಂಗಳೂರಿನ ರಾಜಜಿನಗರದ ಕೆ.ಇ.ಬಿ ಸಮುದಾಯ ಭವನದಲ್ಲಿ ಭಾನುವಾರ ಕುಂಚ ಪರಿವಾರ ಕುಂಚಿಟಿಗ ಸಂಘ ಆಯೋಜಿಸಿದ್ದ 16ನೇ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭ ದಿವ್ಯಸಾನಿಧ್ಯ ವಹಿಸಿ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದರು.
ಪ್ರತಿಭಾವಂತ ಮಕ್ಕಳನ್ನು ಸಮಾಜ ಯಾವಾಗಲೂ ಪುರಸ್ಕರಿಸುತ್ತಾ ಬಂದಿದೆ.
ಸನ್ಮಾನ ಸ್ವೀಕರಿಸಿದ ಪ್ರತಿಭೆ ಸಮಾಜ ಮತ್ತು ದೇಶದ ಹಿತಕ್ಕಾಗಿ ಶ್ರಮಿಸಬೇಕು. ಸಮಾಜದ ಸಂಘಟನೆ ಮಾಡುವ ಉದ್ದೇಶದಿಂದ ಕುಂಚಿಟಿಗ ಪರಿವಾರ ತಂಡ ಕಳೆದ 16 ವರ್ಷದಿಂದ ಸಮಾರಂಭ ಮಾಡುತ್ತಿರುವುದು ಶ್ಲಾಘನೀಯ. ಬಡವರಿಗೆ ಸಹಾಯ ಮಾಡುವುದು ಬಲ್ಲಿದರ ಕೆಲಸವಾಗಬೇಕು. ಎಂದರು.
ನಮ್ಮ ಬುಡಕಟ್ಟು ಜನಾಂಗಗಳಾದ ಯಾದವ, ಕುರುಬ, ನಾಯಕ ಜನಾಂಗಗಳು ಮೀಸಲಾತಿಗಳನ್ನು ಪಡೆಯುತ್ತಿವೆ. ಆದರೆ ಸಂಘಟನೆಯ ಕೊರತೆಯಿಂದ ಬುಡಕಟ್ಟು ಜನಾಂಗವಾದ ಕುಂಚಿಟಿಗರು ಕೊರಗುತ್ತಾ ಕುಂಟುತ್ತಾ ಸಾಗುತ್ತಿದ್ದೇವೆ. ಸರಕಾರಗಳು ನಮ್ಮನ್ನು ಸಂಪೂರ್ಣ ನಿರ್ಲಕ್ಷ ಮಾಡಿವೆ. ಕಾರಣ ನಮ್ಮ ಗುಂಪುಗಾರಿಕೆ ಅಸಂಘಟಿತ ಒಗ್ಗಟ್ಟಿನ ಕೊರತೆ ಇವುಗಳನ್ನು ಸರಿಪಡಿಸಿಕೊಂಡು ಸ್ಪಷ್ಟ ಗುರಿಯೊಂದಿಗೆ ಸರ್ಕಾರಕ್ಕೆ ನಮ್ಮ ಅನಿವಾರ್ಯ ಮತ್ತು ಅಗತ್ಯತೆಯನ್ನು ತಿಳಿಸುವ ಕೆಲಸವನ್ನು ಮಾಡಬೇಕಿದೆ ಎಂದರು.
ಕುಂಚ ಪರಿವಾರ ಕಳೆದ 16 ವರ್ಷಗಳಿಂದ ಈ ಕೆಲಸವನ್ನು ಮಾಡುತ್ತಿದೆ ಸಂಘ ಸಂಸ್ಥೆಗಳನ್ನು ಪ್ರಾರಂಭಿಸುವುದು ಪ್ರತಿಷ್ಠೆಗೆ ಸೀಮಿತವಾಗದೆ ಪಾಮರರ ಕಣ್ಣೀರು ಒರೆಸುವ ಬಡವರಿಗೆ ನೆರವಾಗುವ ನಿರ್ಲಕ್ಷಿತರಿಗೆ ಸಹಾಯವಾಗಲು ಸಮಾಜಕ್ಕೆ ಸಿಗಬೇಕಾದ ಸಾಮಾಜಿಕ ನ್ಯಾಯ ಮತ್ತು ಮೀಸಲಾತಿಗಳನ್ನು ಪಡೆಯುವ ಹಿನ್ನೆಲೆಯಲ್ಲಿ ಸಂಘ-ಸಂಸ್ಥೆಗಳು ಮಠ-ಮಾನ್ಯಗಳು ಶ್ರಮಿಸಬೇಕಾಗಿರುವುದು ಅನಿವಾರ್ಯವಾಗಿದೆ ಎಂದರು.
ವಿದ್ಯಾವಂತರು ಸಮಾಜಕ್ಕೆ ಪೂರಕವಾಗಬೇಕೇ ಹೊರತು ಮಾರಕವಾಗಬಾರದು. ನಿರ್ಲಕ್ಷಕ್ಕೆ ಒಳಗಾಗಿರುವ ಕುಂಚಿಟಿಗ ಜನಾಂಗವನ್ನು ಒಗ್ಗೂಡಿಸುವ ಕೆಲಸವನ್ನು ಎಲ್ಲರೂ ಸೇರಿ ಮಾಡೋಣ ಸಮಾಜದ ಸಂಘಟನೆಯ ಜೊತೆ ಜೊತೆಯಲ್ಲಿ ಸರ್ವಜನಾಂಗದ ಜೊತೆಯಲ್ಲಿ ಉತ್ತಮ ಬಾಂಧವ್ಯವನ್ನು ಬೆಳೆಸೋಣ.ಜಾತಿ ಜಾತಿಗಳ ಮಧ್ಯೆ ಕಂದಕ ಸೃಷ್ಟಿಯಾಗಬಾರದು. ಕುಂಚಿಟಿಗ ಜನಾಂಗ ಕುಲ ಬೆಡಗುಗಳ ವಿಶಿಷ್ಟತೆ ಯೊಂದಿಗೆ ಹಲವು ರಾಜ್ಯಗಳಲ್ಲಿ ಹಲವು ರೀತಿಯ ಮೀಸಲಾತಿಯನ್ನು ಪಡೆಯುತ್ತಿದ್ದು ಎಲ್ಲರನ್ನೂ ಪ್ರವರ್ಗ-1ಕ್ಕೆ ಸೇರಿಸಲು ಎಲ್ಲರೂ ಎಲ್ಲಾ ಸಂಘ ಸಂಸ್ಥೆಗಳು ಒಟ್ಟಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಹನುಮಂತನಾಥ ಸ್ವಾಮೀಜಿ, ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ, ಕುಂಚ ಪರಿವಾರದ ಅಧ್ಯಕ್ಷ ಶಿವಭದ್ರಯ್ಯ, ಕೇಂದ್ರ ಕುಂಚಿಟಿಗ ಸಂಘದ ಅಧ್ಯಕ್ಷ ಎಚ್.ಆರ್. ಕಲ್ಲೇಶಣ್ಣ, ರಾಷ್ಟ್ರೀಯ ಕುಂಚಿಟಿಗ ಸಂಘದ ಅಧ್ಯಕ್ಷ ರವಿಗೌಡ್ರು, ಕುಂಚ ಪರಿವಾರದ ರಂಗಹನುಮಯ್ಯ, ಶ್ರೀನಿವಾಸ್, ಪುಟ್ಟ ವೀರಪ್ಪ , ಬಸವಾನಂದ ಲಗ್ಗೆರೆ, ನಾರಾಯಣ ಸ್ವಾಮಿ, ಮುರುಳಿಧರ ಹಾಲಪ್ಪ, ಭೈರಪ್ಪ , ಶೇಷಣ್ಣ. ಪಾರ್ವತಮ ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
