ಬೆಂಗಳೂರು:
ಮೂರು ವರ್ಷದ ಹಿಂದೆ ಡಿಜೆ ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣ ಪುಲಕೇಶಿನಗರ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರನ್ನು ಬೆಂಬಿಡದ ಭೂತದಂತೆ ಕಾಡುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ನ ಬಿ. ಪ್ರಸನ್ನ ಕುಮಾರ್ ವಿರುದ್ಧ 81,626 ಮತಗಳಿಂದ ಅತಿ ಹೆಚ್ಚು ಮತಗಳಿಂದ ಅಖಂಡ ಶ್ರೀನಿವಾಸ ಮೂರ್ತಿ ಗೆಲುವು ಸಾಧಿಸಿದ್ದರು.
ಪ್ರಸನ್ನ ಕುಮಾರ್ 2021 ರಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದು ಕಾಂಗ್ರೆಸ್ ಟಿಕೆಟ್ ಪಡೆಯಲು ಮೂರ್ತಿ ವಿರುದ್ಧ ಕಣಕ್ಕಿಳಿದಿದ್ದಾರೆ, ಅವರು ಕಾಂಗ್ರೆಸ್ ಚುನಾವಣಾ ಸಮಿತಿಯಿಂದ (CEC) ತಮ್ಮ ಹೆಸರು ್ಧಿಕೃತವಾಗಿ ಘೋಷಣೆಯಾಗಲಿ ಎಂದು ಕಾಯುತ್ತಿದ್ದಾರೆ.
ಅಖಂಡ ಶ್ರೀನಿವಾಸಮೂರ್ತಿ ಪ್ರತಿನಿಧಿಸುವ ಪುಲಕೇಶಿನಗರ ಟಿಕೆಟ್ ಯಾರಿಗೆ ಎಂದು ಸಿಇಸಿ ಇನ್ನೂ ನಿರ್ಧರಿಸಿಲ್ಲ, ಏಕೆಂದರೆ 2020 ರ ಗಲಭೆಯಲ್ಲಿ ಇನ್ನೂ ತತ್ತರಿಸಿರುವ ಅಲ್ಪಸಂಖ್ಯಾತರು ಅವರ ಉಮೇದುವಾರಿಕೆಯ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಅಖಂಡ ಈ ಮೊದಲು ಜೆಡಿಎಸ್ನಲ್ಲಿದ್ದರು ಮತ್ತು 2017 ರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪಕ್ಷ ಬದಲಾಯಿಸುವಂತೆ ಹೇಳಿದ ನಂತರ ಕಾಂಗ್ರೆಸ್ಗೆ ಸೇರಿದ್ದರು.
![](https://prajapragathi.com/wp-content/uploads/2023/03/Untitled-1-29.jpg)