ಮಾನವೀಯತೆ ಮೆರೆದ ಕಿರುತೆರೆ ನಟಿ ಜ್ಯೋತಿ ರೈ….!

ಹೈದರಾಬಾದ್:‌

    ತೆಲುಗಿನ ಗುಪ್ಪೆಡಂತ ಮನಸು ಧಾರಾವಾಹಿ ಮೂಲಕ ಜನಪ್ರಿಯರಾದ ಕಿರುತೆರೆ ನಟಿ ಜ್ಯೋತಿ ರೈ ಇದೀಗ ಸಂಕಷ್ಟದಲ್ಲಿದ್ದವರಿಗೆ ಹಣ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಸಂಕಷ್ಟದಲ್ಲಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ದರ್ಶನಂ ಮೊಗಿಲಯ್ಯ ಅವರಿಗೆ ರೂ. 50 ಸಾವಿರ ಆರ್ಥಿಕ ನೆರವು ನೀಡಿದ್ದಾರೆ. ಅಕ್ಷಯ ತೃತೀಯದಂದು ಅವರು ತಮ್ಮ ತಂಡದ ಮೂಲಕ ಮೊಗಿಲಿಯವರನ್ನು ಭೇಟಿಯಾಗಿ ರೂ. 50 ಸಾವಿರ ನಗದು ಹಣ ನೀಡಿದರು. 

    ನನಗೂ ಈಗ ಒಂದಿಷ್ಟು ಕಷ್ಟಗಳು ಎದುರಾಗುತ್ತಿವೆ. ತನ್ನ ಕಷ್ಟಕ್ಕಿಂತ ಮೊಗಿಲಯ್ಯನ ಸ್ಥಿತಿಯೇ ಹೆಚ್ಚು ಕಾಡುತ್ತಿದೆ ಎಂದು ಜ್ಯೋತಿ ರೈ ಹೇಳಿದ್ದಾರೆ. ತೆಲಂಗಾಣದ ಕಿನ್ನೇರ ಕಲಾವಿದ ದರ್ಶನಂ ಮೊಗಿಲಯ್ಯ ಕೂಲಿ ಕೆಲಸ ಮಾಡಿ ಕುಟುಂಬಕ್ಕೆ ಆಸರೆಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮೊಗಿಲಯ್ಯರವರಿಗೆ ರಾಜ್ಯ ಸರ್ಕಾರ ಗೌರವಧನ ಸಹ ನಿಲ್ಲಿಸಿತ್ತು. ಹೀಗಾಗಿ ಅವರಿಗೆ ಜೀವನ ನಡೆಸುವುದು ಕಷ್ಟವಾಗಿತ್ತು.

   ಜ್ಯೋತಿ ರೈ ಅವರ ನಿರ್ಧಾರದಿಂದ ಎಲ್ಲರೂ ಸಂತಸಗೊಂಡಿದ್ದಾರೆ. ನೆಟ್ಟಿಗರು ಆಕೆಯ ಮಹಾನ್ ಮನಸ್ಸನ್ನು ಶ್ಲಾಘಿಸಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವು ದಿನಗಳಿಂದ ವೈಯಕ್ತಿಕ ವಿಚಾರದಿಂದ ಜ್ಯೋತಿ ರೈ ಸುದ್ದಿಯಲ್ಲಿರುವುದು ಗೊತ್ತೇ ಇದೆ. ವ್ಯಕ್ತಿಯೊಬ್ಬ ಸಾಮಾಜಿಕ ಮಾಧ್ಯಮ ಖಾತೆಯ ಪೋಸ್ಟ್‌ನಲ್ಲಿ ನಟಿಯ ವೈಯಕ್ತಿಕ ವೀಡಿಯೊ ಲೀಕ್ ಮಾಡಿದ್ದನ್ನು. ಅಲ್ಲದೆ ಹಣ ಕಳುಹಿಸಿದರೆ ವೀಡಿಯೊವನ್ನು ಹಂಚಿಕೊಳ್ಳುವುದಾಗಿ ಹೇಳಿದ್ದನು. ಇದು ನಟಿಯನ್ನು ತೀವ್ರವಾಗಿ ಬಾಧಿಸಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap