ಮುಸ್ಸಂಜೆ ವೇಳೆಯಲಿ
ಆ ಕಡಲ ತೀರದಲಿ
ಒಂಟಿ ಬಂಡೆಯ ಕೆಳಗೆ
ನಿನ್ನೊಟ್ಟಿಗೆ ಮಾತನಾಡುವಸೆ
ನಮ್ಮಿಬ್ಬರ ನೋಡಿ
ನಾಚಿ ಕೆಂಪಾದ ಸೂರ್ಯನ
ಮುಳುಗುವ ಮುನ್ನ
ಒಮ್ಮೆ ಹಿಡಿಯುವಾಸೆ
ನಮ್ಮೀ ಒಲವಿನ ಮಾತಿಗೆ
ಅಲೆಗಳು ಸಂಗೀತ ಕೊಡಲು
ನಿನ್ನೊಂದಿಗೆ ಹೆಜ್ಜೆ ಹಾಕುವಾಸೆ
ಹೂವಾದ ಭಾವಗಳು
ಅಲೆಗಳೆಡೆ ಮುನ್ನುಗ್ಗುತಿರಲು
“ಕೈಯೊಳಗೆ ಕೈ ಇಟ್ಟು
ಒಮ್ಮೆ ನಿನ್ನೆದೆಗೊರಗುವ ಆಸೆ “
ನಿಜ ಹೇಳು ನಲ್ಲೇ,!
ನೀ ಬರುವೆಯಾ ನನ್ನೊಟ್ಟಿಗೆ
ಈ ಸಂಜೆ ತಂಪಾಗಿಸಲು ?
ನನ್ನೀ ಬಯಕೆ ತೀರಿಸಲು ! ? ?
–ಅರೆಯೂರು ಶ್ರೀವೈದ್ಯಸುತ
ಅ.ವೈದ್ಯನಾಥಪುರ