ಕುಣಿಗಲ್ :
ಮಾಮೂಲಿ ವಾಹನಗಳ ಸಂಚಾರಕ್ಕೆ ತುಂಬಿ ಹೋಗಿರುವ ಕುಣಿಗಲ್ ಪಟ್ಟಣದ ರಸ್ತೆಗಳಲ್ಲಿ ಟ್ರ್ಯಾಕ್ಟರ್ಗಳ ಬೇಜವಾಬ್ದಾರಿ ಸಂಚಾರ ಮತ್ತಷ್ಟು ಸಮಸ್ಯೆಯನ್ನುಂಟು ಮಾಡುತ್ತಿರುವುದು ನಾಗರಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಟ್ಯಾಕ್ಟರ್ಗಳಲ್ಲಿ ಬೇಕಾಬಿಟ್ಟಿಯಾಗಿ ಮೇಲೆ ಟಾರ್ಪಲ್ಗಳನ್ನು ಸಹ ಕಟ್ಟದೆ ಮರಳು, ಭತ್ತದತೌಡು, ಕಲ್ಲು, ಡಸ್ಟ್ಗಳನ್ನು ಸಾಗಿಸುತ್ತಿದ್ದು, ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಇಲಾಖೆಯವರಿಗೆ ನಾಗರಿಕರು ದೂರುತ್ತ ಸ್ವಾಮಿ ಇಲ್ಲಿ ಸಂಚರಿಸುವ ಲಾರಿಗಳಾಗಲಿ, ಟ್ಯಾಕ್ಟರ್ಗಳಾಗಲಿ ತಮ್ಮ ವಾಹನಕ್ಕೆ ಲೋಡು ತುಂಬಿದ ನಂತರ ಲೋಡಿನ ಧೂಳು, ಕಸ, ಪುಡಿ ಆಚೆ ಬೀಳದಂತೆ ಟಾರ್ಪಲ್ ಮುಚ್ಚದೆ ಜನರು ಸಂಚರಿಸುವ ರಸ್ತೆಗಳಲ್ಲಿ ಧೂಳು ಬೀಳಿಸಿಕೊಂಡು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ಪೊಲೀಸರು ಹಾಗೂ ಪುರಸಭೆ ಈ ವಾಹನಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಸುಲಿದ ಅಡಕೆ ಸಿಪ್ಪೆಯನ್ನು ಟಾರ್ಪಲ್ ಕಟ್ಟದೇ ಬೇಕಾಬಿಟ್ಟಿಯಾಗಿ ತುಂಬಿಕೊಂಡ ಟ್ರ್ಯಾಕ್ಟರ್ಗಳು ಸಹ ಪಟ್ಟಣದಲ್ಲಿ ಸಂಚರಿಸುತ್ತಿದ್ದು, ರಸ್ತೆ ಉದ್ದಕ್ಕೂ ಅಡಕೆ ಸಿಪ್ಪೆನ್ನು ಬೀಳಿಸುತ್ತ ಹೋಗುತ್ತಿದ್ದು, ಕೇಳೊರು ಯಾರೂ ಇಲ್ಲದಂತಾಗಿದೆ ಎಂದು ಪ್ರಜ್ಞಾವಂತ ನಾಗರಿಕರು ಆರೋಪಿಸಿದ್ದು, ಕೂಡಲೆ ಪರವಾನಿಗೆ ಇಲ್ಲದ ಎಲ್ಲಾ ಟ್ರ್ಯಾಕ್ಟರ್ಗಳನ್ನು ಪರಿಶೀಲಿಸಿ ಪಟ್ಟಣದ ರಸ್ತೆಗಳಲ್ಲಿ ಕಸ, ಧೂಳು ಉಂಟು ಮಾಡುವ ವಾಹನ ಚಾಲಕರು ಹಾಗೂ ಮಾಲೀಕರ ವಿರುದ್ಧ ಸೂಕ್ತ ಕಾನೂನೂ ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
