ನಡೆ-ನುಡಿಯಲ್ಲಿ
ಕನ್ನಡ ಡಿಂಡಿಮ ಬಾರಿಸಿದ ಕವಿ
ಬರೆದಂತೆ ಬದುಕಿದ
ಕನ್ನಡ ಕಾವ್ಯದ ಮಹಾಕವಿ
ಮಲೆನಾಡ ಸೊಬಗನು
ರಸಪದಗಳಲಿ ಶೃಂಗರಿಸಿದ ಕವಿ
ಕವಿಶೈಲದ ಶಿಲೆಗಳಿಗೆ
ಜೀವವಂ ನೀಡಿದ ಮಹಾತಪಸ್ವಿ ಕವಿ
ಜಾತಿ-ಮತಗಳ ಹೊಟ್ಟ ತೂರಿದ
ಮನುಜಮತ ವಿಶ್ವಪಥದ ಕವಿ
ಸರ್ವೋದಯಕೆ ಸರ್ವಸಮತೆ
ಸಾರಿದ ವಿಶ್ವಮಾನವ ಕವಿ
ಎಂತು ಬಣ್ಣಿಸಿದರು ತಣಿಸದು ಮನವು
ಎನಗೆ, ಓ…’ಯುಗದಕವಿ ಜಗದಕವಿ’
ಏನೆಂದು ಬಣ್ಣಿಸಲಿ..?
ನಾನೊಬ್ಬ ತೊದಲುಕವಿ!
ಬಣ್ಣಿಸಿದರದು ಅಲ್ಪವಾದಿತು ರಾಷ್ಟ್ರಕವಿ
ವಿಶ್ವಮಾನವ ದಿನಾಚರಣೆಯ ಹಾರ್ದಿಕ ಶುಭಾಶಯಗಳು
-ರುದ್ರಸ್ವಾಮಿ ಹರ್ತಿಕೋಟೆ.
