ತುಮಕೂರು
ಡ್ರಾಪ್ ಕೇಳುವ ನೆಪದಲ್ಲಿ ಬೈಕ್ಗಳನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದ ಇಬ್ಬರು ಕಳ್ಳರನ್ನು ತುಮಕೂರು ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಗಳಾದ ತಿಪಟೂರು ತಾಲ್ಲೂಕಿನ ಬಸವರಾಜ ಆನಂದ (24) ಹಾಗೂ ಕ್ಯಾತ್ಸಂದ್ರ ಮಠದ ರಸ್ತೆಯ ನಿವಾಸಿ ಶಾಂತಮ್ಮ ಎಂಬುವರು ಶಿರಾಗೇಟ್ ಕಡೆಯಿಂದ ಬರುತ್ತಿದ್ದ ಮಧು ಎಂಬುವರನ್ನು ಬೆದರಿಸಿ ಬೈಕ್ನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ.
ಶಿರಾಗೇಟ್ ಕಡೆಗೆ ಹೋಗುವಾಗ ಶಾಂತಮ್ಮ ಎಂಬಾಕೆ ಮಧು ಅವರನ್ನು ಡ್ರಾಪ್ ಕೇಳಿದರು. ಆಕೆಯನ್ನು ಬೈಕ್ ಮೇಲೆ ಕುಳ್ಳ್ಳಿರಿಸಿಕೊಳ್ಳುವಷ್ಟರಲ್ಲಿ ಹಿಂದಿನಿಂದ ಬಂದ ಬಸವರಾಜ ಆನಂದ ಬೈಕ್ ಸವಾರ ಮಧು ಅವರಿಗೆ ಅವಾಜ್ ಹಾಕಿ ಈಕೆಯನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀಯಾ ಎಂದು ಹೆದರಿಸಿ ಮಧು ಅವರ ಬಳಿಯಿದ್ದ 1800 ರೂ.ಗಳನ್ನು ಕಸಿದುಕೊಂಡು ಬೈಕ್ ಸಮೇತ ಪರಾರಿಯಾದರು. ಆರೋಪಿಗಳಾದ ಶಾಂತಮ್ಮ ಹಾಗೂ ಆನಂದ ಎಂಬುವರನ್ನು ತುಮಕೂರು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
