ಅಪರಾದ ತಡೆ ಮಾಸಾಚರಣೆ

ಹರಪನಹಳ್ಳಿ

       ದೇಶದಲ್ಲಿ ಹೆಚ್ಚುತ್ತಿರುವ ದೌರ್ಜನ್ಯ, ಅತ್ಯಾಚಾರದಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ವಿದ್ಯಾರ್ಥಿ ಸಮೂಹಕ್ಕೆ ಜಾಗೃತಿ ಅವಶ್ಯಕ ಎಂದು ಪೊಲೀಸ್ ಪೇದೆ ಬಸವರಾಜ್ ಕುಂಬಳೂರು ಹೇಳಿದರು.

          ತಾಲೂಕಿನ ಮಾದಿಹಳ್ಳಿ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಪೋಲಿಸ್ ಇಲಾಖೆ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ ಅಪರಾದ ತಡೆ ಮಾಸಾಚರಣೆಯ ಜಾಗೃತಿಕಾರ್ಯಕ್ರಮದಲ್ಲಿ ಮಾತನಾಡಿದರು.

        ಇಂದಿನ ತಂತ್ರಜ್ಞಾನದ ಬೆಳವಣಿಗೆಯಲ್ಲಿ ಯುವಸಮೂಹ ಮೊಬೈಲ್ ಬಳಕೆಯಿಂದ ಸಾಮಾಜಿಕ ಜಾಲತಾಣದಲ್ಲಿ ತನಗೆ ಅರಿವಿಲ್ಲದಂತೆ ಅಪರಿಚಿತ ವ್ಯಕ್ತಿಗಳೊಂದಿಗೆ ಚಾಟಿಂಗ್ ,ಅಶ್ಲೀಲ ಚಿತ್ರಗಳ ವೀಕ್ಷಣೆಯಿಂದ ಸೈಬರ್ ಪ್ರಕರಣಗಳಿಗೆ ಬಲಿಯಾಗಿ ತಮ್ಮ ಉಜ್ವಲ ಭವಿಷ್ಯಕ್ಕೆ ಕೊಡಲಿಪೆಟ್ಟು ತಂದುಕೊಳ್ಳುತ್ತಿರುವುದು ವಿಷಾಧಕರ ಸಂಗತಿಯಾಗಿದೆ ಎಂದರು.

         ನೆರಹೊರೆಯ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳು ಅಪರಿಚಿತರ ವಾಹನಗಳಲ್ಲಿ ಸಂಚರಿಸುವಾಗ ಎಚ್ಚರವಹಿಸಬೇಕು ಹಾಗೂ ಕೆಲವೊಂದು ಬಾರಿ ತಮ್ಮ ಮೆಲೆ ದೌರ್ಜನ್ಯಗಳು ಘಟಿಸಿದಾಗ ಖಂಡಿಸಿ ಹತ್ತಿರದ ಪೊಲೀಸ್ ಠಾಣೆಗಳಿಗೆ ಇಲ್ಲವೇ ಮಕ್ಕಳ ಸಹಾಯವಾಣಿಗೆ ಪೊಷಕರೊಂದಿಗೆ ಸಂಪರ್ಕಿಸಬೇಕು ಎಂದು ಕಿವಿ ಮಾತು ಹೇಳಿದರು.

        ಅಪ್ರಾಪ್ತ ವಯಸ್ಸಿನಲ್ಲಿ ವಿವಾಹವಾದರೆ ಫೊಕ್ಸೋಕಾಯ್ದೆ ಜಾರಿಯಿದ್ದು ಕಾನೂನು ಉಲ್ಲಂಘನೆ ಮಾಡಬಾರದು ಎಂದರು .ಎಐಎಸ್ಎಫ್ ಸಂಘಟನೆಯ ರಾಜ್ಯ ಸಹಕಾರ್ಯದರ್ಶಿ ಮಾದಿಹಳ್ಳಿ ಕೆ.ಮಂಜಪ್ಪ ಮಾತನಾಡಿ,ಪೊಲಿಸ್ ಇಲಾಖೆಯು ರಾಜ್ಯವ್ಯಾಪಿ ಶಾಲಾ ಕಲೇಜುಗಳು ಸೇರಿದಂತೆ ಸಾರ್ವಜನಿಕವಲಯದಲ್ಲಿ ಡಿಸೆಂಬರ್ ತಿಂಗಳಲ್ಲಿ ಅಪರಾದತಡೆ ಮಾಸಾಚರಣೆಯ ಮೂಲಕ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.

        ಗ್ರಾಮೀಣ ಭಾಗದಲ್ಲಿ ಅತ್ಯಾಚಾರ ದೌರ್ಜನ್ಯಗಳು ಮಹಿಳೆಯರು,ವಿದ್ಯಾರ್ಥಿನಿಯರ ಮೇಲೆ ನಡೆದರೂ ರಾಜಕೀಯ ಪ್ರಭಾವಿ ಬಂಡವಾಳ ಶಾಹಿ ವ್ಯಕ್ತಿಗಳಿಂದ ಮರೆಮಾಚುತ್ತಿರುವುದು ಖಂಡನೀಯ ಎಂದರು.

         ಪ್ರತಿಯೊಬ್ಬರಿಗೂ ಸಂವಿದಾನತ್ಮಕ ಕಾನೂನು ರಕ್ಷಣೆ ಇದ್ದರೂ ಕೂಡ ಗ್ರಾಮಿಣಬಾಗದ ಜನತೆಗೆ ದೊರಕುವಲ್ಲಿ ಮರೀಚಿಕೆಯಾಗಿವೆ.ಈ ದೆಸೆಯಿಂದ ಅನ್ಯಾಕ್ಕೊಳಾದಾಗ ನಿರ್ಭಯದೊಂದಿಗೆ ದೂರು ನೀಡಲು ಮುಂದಾಗಬೇಕು ಇದಕ್ಕೆ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಅಲ್ಲದೆ ಅಪ್ರಾಪ್ತ ವಯಸ್ಸಿನಲ್ಲಿ ಕಾನೂನು ಬಾಹೀರ ಚಟುವಟಿಕೆಗಲ್ಲಿ ಪಾಲ್ಗೊಂಡು ರಿಮಾಂಡ್ ಹೋಂನಲ್ಲಿ ಸೇರದೆ ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದು ಸಲಹೆ ನೀಡಿದರು.

           ಪ್ರಾಂಶುಪಾಲ ಶಿವಾನಂದ ಕಡಪಲಿ ಅದ್ಯಕ್ಷತೆ ವಹಿಸಿ ಮಾತನಾಡಿ. ನಗರಪ್ರದೇಶಗಳಲ್ಲದೆ ಇತ್ತೀಚಿಗೆ ಗ್ರಾಮೀಣ ಬಾಗದಲ್ಲಿಯೂ ಅಪರಾಧಗಳು ಹೆಚ್ಚುತ್ತಿದ್ದು ತಡೆಗಟ್ಟಲು ಪೋಷಕರು ಶಿಕ್ಷಕರೊಂದಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.ನಮ್ಮ ಶಾಲೆಗೆ ಅಕ್ಕ ಪಕ್ಕದ ಗ್ರಾಮದ ವಿದ್ಯಾರ್ಥಿಗಳು ಆಗಮಿಸುತ್ತಿದ್ದು ಔಪಚಾರಿಕವಾಗಿ ಇಲಾಖೆಯಿಂದ ಬರುವ ಮಾಹಿತಿಯನ್ನು ನೀಡಲಾಗುತ್ತಿದೆ ಹಾಗೂ ಮಕ್ಕಳಿಗೆ ಕಾನೂನು ಅರಿವು ಸೇರಿದಂತೆ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದ್ದು ಇದರಿಂದ ವಿದ್ಯಾರ್ಥಿಗಳು ಜಾಗೃತಿಯಾಗಬೇಕು ಹಾಗೂದೇಶದ ಭವಿಷ್ಯದ ಪ್ರಜೆಗಳಾದ ನಿವು ಇಂದಿನಿಂದಲೇ ಉತ್ತಮ ವ್ಯಾಸಂಗಮಾಡಿ ಪೋಷಕರಿಗೆ ,ಗ್ರಾಮಕ್ಕೆ ಸಂಸ್ಥೆಗೆ ಕಿರ್ತಿ ತರಬೇಕು ಎಂದು ಜಾಗೃತಿ ಮೂಡಿಸಿದರು.

         ಈ ಸಂದರ್ಭದಲ್ಲಿ ಮುಖ್ಯಪೇದೆ ಉಮಾಪತಿ ಗ್ರಾಮಪಂಚಾಯ್ತಿ ಸದಸ್ಯರಾದ ಮಾತಂಗಿ ಚಂದ್ರಪ್ಪ ಶಂಭುಲಿಂಗಪ್ಪ ಬುಳ್ಳಪ್ಪರ ,ಯುವಮುಖಂಡ ಗೊಣೇಶ್ ಎಸ್.ವಾಲ್ಮಿಕಿ ಸಮಾಜದ ಮುಖಂಡ ಗೊಲ್ಲರಹಳ್ಳಿ ರಾಮಪ್ಪ.,ಉಪನ್ಯಾಸಕರಾದ ಮಂಜುನಾಥ್ ಹನುಮಂತರಾಯ್ ಮಮತಾ ಸಿ. ಪ್ರೌಡಶಾಲಾ ದೈಹಿಕ ಶಿಕ್ಷಕ ಗುರುನಾಥ್ ಸೇರಿದಂತೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link