ಬೆಂಗಳೂರು:
ಇತ್ತೀಚೆಗೆ ಆದಾಯ ತೆರಿಗೆ ಇಲಾಖೆಯು ಕರ್ನಾಟಕ ಸೇರಿದಂತೆ ಆಂದ್ರ ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ನಡೆಸಿರುವ ದಾಳಿ ಉದ್ದೇಶ ಪೂರ್ವಕವಾಗಿ ನಡೆಸಿದ್ದು ಆಯಾ ರಾಜ್ಯಗಳಲ್ಲಿ ಬಿಜೆಪಿ ವಿರೋಧ ಪಕ್ಷಗಳ ನಾಯಕರನ್ನೆ ಗುರಿಯಾಗಿಸಿ ಈ ಐಟಿ ದಾಳಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಅನ್ಯಾಯವನ್ನು ತಡೆಯಲು ನಾವು ಮೊದಲು ಮೋದಿಯನ್ನು ಅಧಿಕಾರಕ್ಕೆ ಬರುವುದರಿಂದ ತಡೆಗಟ್ಟಬೇಕು ಇಲ್ಲದೇ ಹೋದರೆ ಈ ದಬ್ಬಾಳ್ಳಿಕೆ ತಡೆಗಟ್ಟುವುದು ಕಷ್ಟ ಎಂದಿದ್ದಾರೆ ಮತ್ತು ಕರ್ನಾಟಕದಲ್ಲಿ ಮೈಸೂರು ಮಂಡ್ಯ ಶಿವಮೊಗ್ಗ ಭದ್ರಾವತಿ ಕೊಡಗು ಸೇರಿದಂತೆ ಬಹುತೇಕ ಕಡೆ ಡಿಎಂಕೆ ಇದ್ದು ಮೈತ್ರಿಕೂಟ ೨೮ ಸ್ಥಾನ ಗೆಲ್ಲಲು ಡಿಎಂಕೆ ಪಕ್ಷ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಡಿ ಎಂ ಕೆಯ ರಾಮಸ್ವಾಮಿ ಹೇಳಿದ್ದಾರೆ .