ಗುಣಮಟ್ಟದ ಕಾಮಗಾರಿ ಮಾಡುವಂತೆ ಗುತ್ತಿಗೆದಾರರಿಗೆ ಶಾಸಕ ಸೂಚನೆ 

ಹರಿಹರ
 
        ನಗರದ ಹೊರವಲಯದ ಆಶ್ರಯ ಕಾಲೊನಿಯಲ್ಲಿ ನಡೆದಿರುವ ರಸ್ತೆ ಕಾಮಗಾರಿಯನ್ನು ಶುಕ್ರವಾರ ಶಾಸಕ ಎಸ್.ರಾಮಪ್ಪ ಸ್ಥಳಕ್ಕೆ ಬೇಟಿ ನೀಡಿ    ರಸ್ತೆ ಕಾಮಗಾರಿಯನ್ನು ಪರಿಶೀಲಿಸಿ ಗುತ್ತಿಗೆ ದಾರರಿಗೆ ಉತ್ತಮ ಗುಣಮಟ್ಟದ  ರಸ್ತೆ ನಿರ್ಮಿಸುವಂತೆ ಗುತ್ತಿಗೆ ದಾರರಿಗೆ ಸೂಚನೆ ನೀಡಿದರು.
     
       ಆಶ್ರಯ ಕಾಲೊನಿಯಲ್ಲಿ ನಗರಸಭೆಯ ನಗರೋತ್ಥಾನ ಯೋಜನೆಯ ಮೂರನೇ ಹಂತದ ಸುಮಾರು 93 ಲಕ್ಷ ರೂಗಳ ಕಾಮಗಾರಿಯಲ್ಲಿ 63 ಲಕ್ಷದ 1400 ಮೀಟರ್ ಉದ್ದ ಹಾಗೂ 3.75 ಮೀಟರ್ ಅಗಲವುಳ್ಳ ಟಾರ್ (ಡಾಂಬರ್)ರಸ್ತೆಗೆ ಹಾಗೂ 30 ಲಕ್ಷ ರೂ ಸಿಸಿ ಡ್ರೇನ್ ಕಾಮಗಾರಿ ಮಾಡಲಾಗುತ್ತಿರುವ ಮಾಹಿತಿಯನ್ನು  ಪಡೆದರು.
     
       ಅಲ್ಲದೇ ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರಾಜಿಗೆ ಆಸ್ಪದವಿಲ್ಲ ಎಂದು ಗುತ್ತಿಗೆ ದಾರರನ್ನು ಎಚ್ಚರಿಸಿದರು,ಇದೇ ಸಮಯದಲ್ಲಿ ಆಶ್ರಯ ಕಾಲೊನಿಯ ನಿವಾಸಿಗಳೊಂದಿಗೆ ಅಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು.ನಗರಸಭೆಯ ಚುನಾವಣೆ ನಂತರ ಸಮಸ್ಯೆಗೆ ಪರಿಹಾರ ದೊರಕಿಸಿ ಕೊಡುವುದಾಗಿ ಭರವಸೆ ನೀಡಿದರು.
     
       ಈ ವೇಳೆ ಆಶ್ರಯ ಕಾಲೊನಿಯ ಮುಖಂಡರು ಗಳಾದ ಮಾಕನೂರ ಹನುಮಂತಪ್ಪ,ಕೊತ್ವಾಲ್ ಹನುಮಂತಪ್ಪ ,ಎಚ್.ವೀರಪ್ಪ ,ಮತ್ತುುರಪ್ಪ,ಬೀರಪ್ಪ, ಯಮುನಪ್ಪ,ಪಿ.ಜಿ.ರಾಘು,ಅಮೀನ್ ಸಾಬ್, ಶಿವರಾಜಪ್ಪ,ನಾಗಪ್ಪ,ಚಂದ್ರಮೌಳಿ,ರಾಜೀವ್, ಹರೀಶ್, ಪ್ರವೀಣ್ ,ಪ್ರಕಾಶ್ ಮುಂತಾದ ಮುಖಂಡರುಗಳು ಮತ್ತು ಎಂಜಿನಿಯರುಗಳಾದ ಎಸ್.ಎಸ್.ಬಿರಾದಾರ್,ಡಾ.ಹಮೀದ್ ಮತ್ತು ಶಾಸಕರ ಆಪ್ತ ಸಹಾಯಕ ವಿಜಯ ಮಹಾಂತೇಶ್ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link