ಸರ್ಕಾರವನ್ನು ಪ್ರಶ್ನಿಸುವ ತಾಕತ್ತು ಜಯಚಂದ್ರ ಅವರಿಗೆ ಇದೆ : ಡಿಕೆಶಿ

ಬರಗೂರು

    ವಿಧಾನ ಸೌಧದಲ್ಲಿ ಕುಳಿತು ಸರ್ಕಾರದ ವಿರುದ್ದ ಮಾತನಾಡುವ ಶಕ್ತಿ ಹೊಂದಿರುವ ಏಕೈಕ ವ್ಯಕ್ತಿ ಟಿ.ಬಿ. ಜಯಚಂದ್ರ. ಈ ಶಕ್ತಿ ಬೇರೆ ಪಕ್ಷದ ಅಭ್ಯರ್ಥಿಗಳಿಗಿಲ್ಲ. ನನಗಿಂತ ಹತ್ತು ವರ್ಷ ಹೆಚ್ಚು ರಾಜಕೀಯ ಅನುಭವ ಹೊಂದಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿ ಎಂದು ಮತದಾರರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನವಿ ಮಾಡಿದರು.

   ಅವರು ಸಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸಿರಾ ತಾಲ್ಲೂಕಿನ ಹುಲಿಕುಂಟೆ ಹೋಬಳಿಯ ಬರಗೂರು, ಲಕ್ಕನಹಳ್ಳಿ, ದೊಡ್ಡಬಾಣಗೆರೆ ಗ್ರಾಮಗಳಲ್ಲಿ ರೋಡ್ ಶೋ ನಡೆಸುವ ಮೂಲಕ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಟಿ.ಬಿ. ಜಯಚಂದ್ರ ಪರವಾಗಿ ಮತ ಯಾಚನೆ ಮಾಡಿದರು.

   ವಿವಿಧ ನೀರಾವರಿ ಯೋಜನೆಗಳನ್ನು ತಂದು ತಾಲ್ಲೂಕಿನ ಅಭಿವೃಧ್ಧಿ ಪಡಿಸಿದ್ದಾರೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಯೋಜನೆಗಳನ್ನು ಕ್ಷೇತ್ರದ ಯಶಸ್ಸಿಗೆ ಟಿ.ಬಿ. ಜಯಚಂದ್ರ ಇನ್ನೂ ಹೆಚ್ಚಿನ ಕೆಲಸ ಮಾಡುವರು ಎಂದು ಹೇಳಿದರು. ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ಮಾತನಾಡಿ, ಅಪ್ಪರ್ ಭದ್ರಾ, ಹೇಮಾವತಿ, ಎತ್ತಿನಹೊಳೆಗಳ ನೀರಾವರಿ ಯೋಜನೆಗಳ ತ್ರಿವೇಣಿ ಸಂಗಮದಿಂದ ಶಿರಾ ತಾಲ್ಲೂಕಿಗೆ 3.6 ಟಿಎಂಸಿ ನೀರು ಲಭ್ಯವಾಗಲಿದ್ದು, ಸಿರಾ ಮಲೆನಾಡು ರೀತಿ ಸಮೃದ್ಧಿಯಾಗಿ ಕಾಣುವ ದಿನಗಳು ದೂರವಿಲ್ಲ.

    ನಾನು ಶಾಸಕನಾಗಿದ್ದ ಅವಧಿಯಲ್ಲಿ ಸಿರಾ ಕ್ಷೇತ್ರಕ್ಕೆ 2.5 ಸಾವಿರ ಕೋಟಿ ಅನುದಾನ ತಂದಿದ್ದೇನೆ. ಮಿನಿ ವಿಧಾನ ಸೌಧ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಪಾಲಿಟೆಕ್ನಿಕ್ ಕಾಲೇಜ್ ಕಟ್ಟಡಗಳು, ಕೋಟ್ಯಂತರ ರೂಪಾಯಿ ವೆಚ್ಚದ ಬೃಹತ್ ಕಟ್ಟಡಗಳು ಮುಂದೆ ಸಿರಾ ಜಿಲ್ಲಾ ಕೇಂದ್ರವಾಗಿಸಲು ಮುನ್ನುಡಿ ಬರೆಯಲಿವೆ. ಸಿರಾ ಉಪ ಚುನಾವಣೆಯಲ್ಲಿ ಮತದಾರರಿಗೆ ಪೊಳ್ಳು ಭರವಸೆ ನೀಡುತ್ತಾರೆ, ಮತದಾರರು ಆಮಿಷಗಳಿಗೆ ಒಳಗಾಗದೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡಿ ಕೈ ಬಲ ಪಡಿಸುವ ಸಂಕಲ್ಪ ಮಾಡಬೇಕು ಎಂದರು.

   ಕಾಂಗ್ರೆಸ್ ವಕ್ತಾರ ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ಎಚ್.ಡಿ. ಕೋಟೆ ಶಾಸಕ ಅನಿಲ್ ಚಿಕ್ಕಮಾದು, ಕಲ್ಕೆರೆ ರವಿಕುಮಾರ್, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ ಹಲಗುಂಡೇಗೌಡ, ಬಿ.ಸಿ ಸತೀಶ್, ಶ್ರೀನಿವಾಸ್ ಗೌಡ, ಹಾರೋಗೆರೆ ಮಹೇಶ್, ಲತೀಫ್, ತಿಪ್ಪೇಸ್ವಾಮಿ, ಈರಣ್ಣ, ಕಂಬಿ ಮಂಜುನಾಥ್, ನಾಗಭೂಷಣ, ತಿಪ್ಪೇಸ್ವಾಮಿ, ಫÀಕೃದ್ದೀನ್, ಬರಗೂರು ಶ್ರೀನಿವಾಸ್, ಯಲಪೇನಹಳ್ಳಿ ಶ್ರೀನಿವಾಸ್, ರಂಗಾಪುರ ತಿಪ್ಪೇಸ್ವಾಮಿ, ಕೆ. ರಾಮಕೃಷ್ಣ, ಸಿದ್ದಪ್ಪ ಇನ್ನೂ ಅನೇಕ ಮುಖಂಡರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link