ನಾಡಪಿಸ್ತೂಲ್ ತೋರಿಸಿ ಸುಲಿಗೆ

ಬೆಂಗಳೂರು

         ಯಾವುದೇ ಪರವಾನಗಿಯಿಲ್ಲದೇ ನಾಡಪಿಸ್ತೂಲ್ ಇಟ್ಟುಕೊಂಡು ಹಾಗೂ ಶಸ್ತ್ರಾಸ್ತ್ರಗಳನ್ನು ತೋರಿಸಿ ನಿರ್ಜನ ಪ್ರದೇಶದಲ್ಲಿ ಓಡಾಡುವ ಸಾರ್ವಜನಿಕರು ವಾಹನ ಚಾಲಕರನ್ನು ಅಡ್ಡಗಟ್ಟಿ ಬೆದರಿಸಿ ಸುಲಿಗೆ ಮಾಡುತ್ತಿದ್ದ ಐವರನ್ನು ಮಾರುತ್‍ಹಳ್ಳಿ ಪೊಲೀಸರು ಬಂಧಿಸಿದ್ದಾರೆ.

        ಪ್ರಶಾಂತ್(28) ಮತ್ತಾತನ ಸಹಚರರಾದ ಮಂಜುನಾಥ್ (24) ಶಿವಶಂಕರ್ (26) ಸಂತೋಷ್ (45) ದೇವರಾಜ್ (28) ಬಂಧಿತ ಆರೋಪಿಗಳಾಗಿದ್ಧಾರೆ,ಬಂಧಿತರಿಂದ 1 ನಾಡಪಿಸ್ತೂಲ್ 3 ಜೀವಂತ ಗುಂಡುಗಳು 3 ಮೊಬೈಲ್‍ಗಳು ಸ್ಕೋಡಾ ಕಾರು ಡ್ರಾಗರ್ ಮಚ್ಚು ಇನ್ನಿತರ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

          ಕೊಲೆ ಪ್ರಕರಣದಲ್ಲಿ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ಪ್ರಶಾಂತ್ ಇತರ ಆರೋಪಿಗಳ ಗ್ಯಾಂಗ್ ಕಟ್ಟಿಕೊಂಡು ಕಾರಿನಲ್ಲಿ ಸುತ್ತಾಡುತ್ತಾ ನಿರ್ಜನ ಪ್ರದೇಶದಲ್ಲಿ ಒಂಟಿಯಾಗಿ ಓಡಾಡುವ ಸಾರ್ವಜನಿಕರು ವಾಹನ ಚಾಕರನ್ನು ಅಡ್ಡಗಟ್ಟಿ ಬೆದರಿಸಿ ಸುಲಿಗೆ ಮಾಡಿ ಮೋಜು ಮಾಡುತ್ತಿದ್ದನು. ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ಆರೋಪಿಗಳನ್ನು ಬಂಧೀಸಿರುವ ಮಾರುತ್‍ಹಳ್ಳಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap