ಸಾಲ ಮನ್ನಾ ಲಾಭ ಪಡೆಯದ ರೈತರಿಗೆ ಸಾಲ ಭಾಗ್ಯ : ಕೆ.ಎನ್.ಆರ್

ಕುಣಿಗಲ್.

      ಸರ್ಕಾರದ ಸಾಲ ಮನ್ನಾ ಭಾಗ್ಯ ಯೋಜನೆಯ ಲಾಭ ಪಡೆಯದ ರೈತರಿಗೂ ಇದೀಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಸಾಲ ಸೌಲಭ್ಯ ನೀಡಲಾಗುವುದು ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಹಾಗು ಮಾಜಿ ಶಾಸಕ ಕೆ,ಎನ್. ರಾಜಣ್ಣ ತಿಳಿಸಿದರು.

       ಅವರಿಂದು ಹುತ್ರಿದುರ್ಗ ಹೋಬಳಿಯ ಇಪ್ಪಾಡಿ ಗ್ರಾಮದಲ್ಲಿ 20ಲಕ್ಷದ ವೆಚ್ಚದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.

        ಇದುವರೆಗೂ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನಿಂದ ಜಿಲ್ಲೆಯಲ್ಲಿರುವ 234 ಸೊಸೈಟಿಗಳಿಗೂ ಸಾಲ ನೀಡಲಾಗಿದೆ ಈವರೆಗೂ 444 ಕೋಟಿ ಸಾಲ ಮನ್ನಾ ಆಗಿದೆ ಸಾಲ ಮನ್ನಾ ಯೊಜನೆಯನ್ನು ಬಲಾಡ್ಯರಿಗೆ ಮಾತ್ರ ಲಭ್ಯವಾಗುತಿದೆ ಎಂಬ ದೂರು ಇದೆ ಅದಕ್ಕಾಗಿ ಸಾಲ ಮನ್ನಾ ಯೋಜನೆಯಲ್ಲಿ ಲಾಭ ಪಡೆಯದ ರೈತರಿಗೆ ಮುಂದಿನ ತಿಂಗಳ 15ರೊಳಗೆ ಸಾಲ ನೀಡಲಾಗುವುದು ಎಂದರು.
ದೇಶದಲ್ಲೇ ಪ್ರಥಮವಾಗಿ ತುಮಕೂರು ಜಿಲ್ಲಾ ಕೇಂದ್ರದ ಸಹಕಾರ ಬ್ಯಾಂಕ್‍ನಿಂದ ವಿಶೇಷವಾಗಿ ಮೃತ ರೈತರ 1ಲಕ್ಷ ಸಾಲ ಮನ್ನಾಯೋಜನೆ ಜಾರಿಗೆ ತಂದು ಮೃತರ ಕುಟುಂಕ್ಕೆ ಋಣ ಮುಕ್ತರನ್ನಾಗಿ ಮಾಡಲಾಗುತಿದೆ ಎಂದರು.

       ರೈತ ಮಾನ ಮರ್ಯಾದೆಗೆ ಅಂಜು ಸ್ವಭಾವದ ವ್ಯಕ್ತಿ ತಾನು ಈದೇಶಕ್ಕಾಗಿ ಅನ್ನ ದುಡಿಯಲು ಮಾಡುವ ಸಾಲ ಕೊಟ್ಟವನಿಗೆ ಹೆದರಿ ಮಾರುಕಟ್ಟೆಯಲ್ಲಿ ದಲ್ಲಾಳಿಯಿಂದ ಬೆಲೆ ನಿರ್ದರಿಸಿಕೊಂಡು ಬಂದಷ್ಟು ಹಣವನ್ನು ಸಾಲಗಾರನಿಗೆ ಕೊಟ್ಟು ಬರಿಗೈಲಿ ಮನೆಗೆ ಸೇರುತ್ತಾನೆ ರೈತ ಆರ್ಥಿಕವಾಗಿ ಸದೃಡನಾಗಬೇಕು ತಾನು ಬೆಳೆದ ಬೆಳೆಗೆ ತಾನೆ ಬೆಲೆ ಕಟ್ಟುವಂತಾದಾಗ ಮಾತ್ರ ಯಾವುದೇ ರೈತನ ಸಾಲ ಮನ್ನಾ ಮಾಡುವ ಅಗತ್ಯವಿರುವುದಿಲ್ಲವೆಂದರು.

       ಇತ್ತೀಚಿನ ದಿನಗಳಲ್ಲಿ ಹಳ್ಳಿಗಳು ವೃದ್ದಾಶ್ರಮಗಳಾಗುತ್ತಿವೆ ಯುವಕರೆಲ್ಲಾ ಕೆಲಸ ಹುಡುಕಿಕೊಂಡು ಪಟ್ಟಣಗಳತ್ತಾ ಗುಳೇಹೊಗುತಿದ್ದಾರೆ ರಾಜಕಾರಣಿಗಳು ಅವರಿಗೆ ಹಳ್ಳಿಗಳಲ್ಲೆ ಉದ್ಯೋಗ ದೊರಕುವಂತೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಪಟ್ಟಗಳಲ್ಲಿ ಮಾಲಿನ್ಯ ಹೆಚ್ಚಾಗಿ ಅನಾರೋಗ್ಯ ಪೀಡಿತರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

        ಮೋದಿಯವರು ಹೇಳಿದಂತೆ ಸರ್ಕಾರ ಲಾಲಿ ಪಪ್ ನೀಡುತಿಲ್ಲ ಸರಿಯಾದ ವಿಚಾರ ಅರಿಯದೇ ಮಾತನಾಡುವುದು ಒಳ್ಳೆಯದಲ್ಲ ನನಗೂ ಮೋದಿಯ ಬಗ್ಗೆ ಗೌರವವಿದೆ ರಾಜ್ಯದಲ್ಲಿ ಈಗಾಗಲೇ 59ಸಾವಿರ ರೈತರ ಖಾತೆಗಳಿಗೆ ಸಾಲ ಮನ್ನಾಯೋಜನೆ ಲಭ್ಯವಾಗಿದೆ ಜಿಲ್ಲೆಯ 12ಸಾವಿರ ರೈತರ 198ಕೋಟಿ ಸಾಲ ಮನ್ನಾ ಹಣ ಬಿಡುಗಡಯಾಗಿದೆ ಎಂದ ಅವರು ಸೊಸೈಟಿ ಸ್ವಂತ ಕಟ್ಟಡಕ್ಕಾಗಿ ಜಾಗ ನೀಡಿದ್ದೂ ಅಲ್ಲದೆ ಧನಸಹಾಯ ಮಾಡಿದ ಸ್ಥಳೀಯ ತಾ.ಪಂಸದಸ್ಯ ಐ.ಎ.ವಿಶ್ವನಾಥ್‍ಗೆ ಕೆ.ಎನ್.ರಾಜಣ್ಣ ಶ್ಲಾಘಿಸಿದರು.

         ಶಾಸಕ ಡಾ.ರಂಗನಾಥ್ ಮಾತನಾಡಿ ರೈತರು ಸ್ವಾಭಿಮಾನದಿಂದ ಜೀವನ ಸಾಗಿಸಬೇಕಾದರೆ ಸಹಕಾರ ಸಂಘಗಳು ಹೆಚ್ಚು ಅವಶ್ಯಕವಾಗಿವೆ ತಾಲ್ಲೂಕಿನಲ್ಲಿ 19 ವ್ಯವಸಾಯ ಸೇವಾ ಸಹಕಾರ ಸಂಘಗಳಿವೆ ಇವುಗಳಿಂದ ಎಲ್ಲಾ ರೈತರಿಗೂ ಸಾಲ ನೀಡಲು ಸಾದ್ಯವಾಗುತಿಲ್ಲ ಅದಕ್ಕಾಗಿ ಪ್ರತೀ ಗ್ರಾಮ ಪಂಚಾಯಿತಿಗೊಂದರಂತೆ 36 ವಿಎಸ್‍ಎಸ್‍ಎನ್ ಸ್ಥಾಪಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ನಿರ್ದೇಶಕ ಬಿ.ಶಿವಣ್ಣ, ತಾ.ಪಂ ಸದಸ್ಯ ಐ.ಎ.ವಿಶ್ವನಾಥ್, ಸಹಕಾರ ಸಂಘದ ಅಧ್ಯಕ್ಷ ಐ.ಜಿ.ರಮೇಶ್, ಡಿಸಿಸಿ ಬ್ಯಾಂಕ್ ಎಂ.ಡಿ. ಪ್ರಕಾಶ್ ಜಿಲ್ಲಾಬೈರವೇಶ್ವರ ಸಂಘದ ಅಧ್ಯಕ್ಷೆ ಹೆಚ್.ಜಿ.ಸುಜಾತನಂಜೇಗೌಡ ಮುಖಂಡರಾದ ಕೆಂಪೀರೇಗೌಡ, ಯಲಿಯೂರು ಹೊನ್ನೇಗೌಡ, ಗಂಗಶಾನಯ್ಯ ಗ್ರಾ.ಪಂ ಅಧ್ಯಕ್ಷ ಶಿವಶಂಕರ್, ಉಪಾಧ್ಯಕ್ಷೆ ಸುಮಿತ್ರಸದಾಶಿವಯ್ಯ, ಮೇಲ್ವಿಚಾರಕ ದಯಾಸಾಗರ್, ಎಸ್.ವಿ.ವೀರಣ್ಣ ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link