ಶಿರಾ:
ಸರ್ಕಾರಿ ನೌಕರರು ತಮ್ಮ ಸೇವಾವಾಧಿ ಪೂರ್ಣಗೊಮಡ ನಂತರ ನಿವೃತ್ತಿಯಾಗುವ ಪ್ರಕ್ರಿಯೆ ಸಹಜವಾದರು ನಿವೃತ್ತರು ಯಾವುದೇ ಕಾರಣಕ್ಕೂ ತಮ್ಮ ಕ್ರಿಯಾಶೀಲತೆಯನ್ನು ಕಳೆದುಕೊಳ್ಳಬಾರದು ಎಂದು ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಜಿ.ಎಲ್.ರಾಮಣ್ಣ ತಿಳಿಸಿದರು.
ನಗರದ ನಿವೃತ್ತ ಸರ್ಕಾರಿ ನೌಕರರ ಸಂಘದ ಕಛೇರಿಯಲ್ಲಿ ನಡೆದ ಮಾಸಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರಿ ನೌಕರರು ತಮ್ಮ ಸೇವಾವಧಿಯಲ್ಲಿ ಮಾಡಿದ ಸಾಧನೆಗಳು ಜೀವಂತವಾಗಿ ಉಳಿಯುತ್ತವೆ. ನಮ್ಮನ್ನು ನಾವು ದೃಢಕಾಯರನ್ನಾಗಿಸಿಕೊಳ್ಳಲು ಪ್ರಾಮಾಣಿಕ ಸೇವೆ ಅಗತ್ಯವಾಗುತ್ತದೆ ಎಂದರು.
ನಮ್ಮ ಪಿಂಚಣಿಯನ್ನೇ ನೆಚ್ಚಿಕೊಮಡು ಬದುಕುವ ನಮ್ಮದೇ ಕುಟುಂಬಗಳ ಮೇಲಿನ ಹೊಣೆಗಾರಿಕೆಯೂ ನಮ್ಮ ಮೇಲಿದ್ದು ಸಂಘದ ಈ ಒತ್ತಡದ ನಡುವೆಯೂ ನಿವೃತ್ತರನ್ನು ಒಂದೆಡೆ ಸೇರಿಸಿ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ನಮ್ಮ ಸಂಘ ಮಾಡುತ್ತಾ ಬಂದಿದೆ ಎಂದರು.
ನಿವೃತ್ತ ಶಿಕ್ಷಕ ಕೆ.ನರಸಿಂಹಯ್ಯ ಮಾತನಾಡಿ ತಾಲ್ಲೂಕಿನ ನಿವೃತ್ತ ನೌಕರರನ್ನು ಒಗ್ಗೂಡಿಸಿ ನಮ್ಮದೇ ಸಮಸ್ಯೆಗಳನ್ನು ನಿವೇದಿಸಿಕೊಳ್ಳಲು ಸಂಘದ ಅಗತ್ಯವಿದೆ. ಸಂಘದ ಸದಸ್ಯರನ್ನು ಅದರಲ್ಲೂ ಹಿರಿಯ ಸದಸ್ಯರನ್ನು ಗೌರವಿಸುವ ಕೆಲಸವನ್ನು ನಮ್ಮ ಸಂಘ ಮಾಡುತ್ತಾ ಬಂದಿದೆ ಎಂದು ಅವರು ಹೇಳಿದರು.
ನಿವೃತ್ತ ನೌಕರರಾದ ಬಡೇನಹಳ್ಳಿ ಟಿ.ಗೋವಿಂದಯ್ಯ, ಎಸ್.ನಾಗರಾಜು, ಬಿ.ಜೆ.ಕರಿಯಪ್ಪ, ಬಿ.ಎನ್.ಬ್ರಹ್ಮಾನಂದ, ಸಿದ್ಧಗಂಗಮ್ಮ ಅವರನ್ನು ಕಾರ್ಯಕ್ರಮದಲ್ಲಿ ಅಭಿನಂಧಿಸಲಾಯಿತು.ಎಲ್.ಲಕ್ಷ್ಮೀನರಸಿಂಹಯ್ಯ, ಕೆಂಚಪ್ಪಸ್ವಾಮಿ, ನಾನ್ಯಾನಾಯ್ಕ, ಸಾಹಿತಿ ಡಿ.ಎಸ್.ಕೃಷ್ಣಮೂರ್ತಿ, ಕೆ,ಲಿಂಗಪ್ಪ, ದಶರಥ ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
