ಹೊಸಪೇಟೆ :
ಮುಂದಿನ ದಿನಗಳಲ್ಲಿ ಕನ್ನಡ ವಿವಿಯಲ್ಲಿ ಒನಕೆ ಓಬವ್ವ ಮತ್ತು ವಚನ ಅಧ್ಯಯನ ಪೀಠ ಸೇರಿದಂತೆ ಎಲ್ಲಾ ಪೀಠಗಳ ಸಮುಚ್ಚಯ ಮಾಡಿ ಸುಸಜ್ಜಿತವಾದ ಗ್ರಂಥಾಲಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹಂಪಿ ಕನ್ನಡ ವಿವಿಯ ಕುಲಪತಿ ಡಾ.ಸ.ಚಿ.ರಮೇಶ ಹೇಳಿದರು.
ಇಲ್ಲಿನ ಕನ್ನಡ ವಿವಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿಧ್ಯಾರ್ಥಿಗಳ ವಿಶೇಷ ಘಟಕದಿಂದ ನಿರ್ಮಿಸಿದ ಗ್ರಂಥಾಲಯ ಉದ್ಘಾಟಿಸಿ ಅವರು ಮಾತನಾಡಿದರು.
ಅಕ್ಷರ ಗ್ರಂಥಾಲಯ ಹೊರತುಪಡಿಸಿ ಪಜಾ ಮತ್ತು ಪಪಂ ವಿಶೇಷ ಘಟಕದಲ್ಲಿ ವೈವಿಧ್ಯಮಯ ಪುಸ್ತಕಗಳು ಇರುವುದರಿಂದ ವಿದ್ಯಾರ್ಥಿಗಳ ಅಧ್ಯಯನಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ವಿಶೇಷ ಘಟಕದಿಂದ ಎರವಲು ಕಾರ್ಡ್ ಮೂಲಕ ಒಬ್ಬ ವಿದ್ಯಾರ್ಥಿಗೆ 8 ದಿನದವರೆಗೆ 1 ಪುಸ್ತಕವನ್ನು ಪಡೆಯುವಂಥ ಅವಕಾಶವಿದ್ದು, ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಆಧುನಿಕ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮೊಬೈಲ್ ಗೀಳಿನಿಂದ ಹೆಚ್ಚಿನ ಸಮಯ ಹಾಳಾಗುತ್ತಿದ್ದು, ಅದರಿಂದ ಹೊರಬರಲು ನಿರಂತರವಾಗಿ ಪುಸ್ತಕ ಓದುವುದರಿಂದ ಜ್ಞಾನಾರ್ಜನೆಯಾಗಲಿದೆ ಎಂದು ತಿಳಿಸಿದರು.ಇದೇ ವೇಳೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಪಟ್ಟಂತೆ ಪುಸ್ತಕಗಳನ್ನು ಕುಲಪತಿ ಡಾ.ಸ.ಚಿರಮೇಶ ವಿತರಿಸಿದರು. ವಿಶೇಷ ಘಟಕದ ಸಂಚಾಲಕ ಹಾಗು ಉಪಕುಲಸಚಿವ ಡಾ.ಎ.ವೆಂಕಟೇಶ, ಕುಲಸಚಿವ ಡಾ.ಅಶೋಕಕುಮಾರ ರಂಜೇರೆ, ಹಣಕಾಸು ಅಧಿಕರಿ ಡಾ.ಸಿದ್ದಲಿಂಗಮ್ಮ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
